ಪ್ರಕೃತಿ, ಸಂಸ್ಕ್ರತಿ ರಕ್ಷಿಸಿದರೆ ವಿಕೃತಿ ಇಲ್ಲ: ಮಹಾಬಲೇಶ್ವರ


Team Udayavani, Apr 13, 2022, 1:57 PM IST

Untitled-1

ಶಿರಸಿ: ಪ್ರಕೃತಿ, ಸಂಸ್ಕ್ರತಿ ರಕ್ಷಿಸಿದರೆ ವಿಕೃತಿ ಇಲ್ಲ. ಪ್ರಕೃತಿ, ಸಂಸ್ಕ್ರತಿ ಮರೆಯಬಾರದು. ಪ್ರಕೃತಿಯನ್ನು ಪ್ರಕೃತಿಯಾಗಿಸಿಟ್ಟುಕೊಂಡರೆ ನಾಗರೀಕ ಸಮಾಜವಾಗಿ ಬೆಳೆಯಲು ಸಾಧ್ಯ ಎಂದು  ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಹೇಳಿದರು.

ಅವರು ಬುಧವಾರ ತಾಲೂಕಿನ ಇಸಳೂರಿನಲ್ಲಿ ಸ್ವರ್ಣವಲ್ಲೀ ನಡೆಸುವ ಶ್ರೀನಿಕೇತನ ಶಾಲೆಗೆ‌ ನೀಡಿದ ಎರಡು ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಅಸ್ವಸ್ಥ ಆಗದಂತೆ ‌ನೋಡಿಕೊಳ್ಳಬೇಕು. ಆದರೆ, ಇಂದು ಪ್ರಕೃತಿ ಮರೆತು ವಿಕೃತಿಗೊಳಿಸುವ ಬೆಳವಣಿಗೆ ನೋಡುತ್ತಿದ್ದೇವೆ. ಸಂಸ್ಕಾರಯುತವಾಗಿ ಬಾಳಬೇಕು. ಪ್ರಕೃತಿಯನ್ನು ಪ್ರಕೃತಿಯಾಗಿ ನೋಡಬೇಕು. ಅದರೊಂದಿಗೆ ಬದುಕಬೇಕು ಎಂದರು.

ವಾಹನ ಸೌಕರ್ಯ ದಿನವೂ ಇಲ್ಲದೇ ನಾನೂ ಪ್ರೌಢ‌ಶಿಕ್ಷಣದ ತನಕ ದಿನವೂ 10ಕಿಮಿ ನಡೆದು ಶಿಕ್ಷಣ ಪಡೆದವನು‌. ವಿದ್ಯಾಭ್ಯಾಸ ಇಲ್ಲದೇ ಹೋದರೆ ಬದುಕು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಸಮಾಜವು ವಿದ್ಯಾರ್ಥಿಗಳಿಗೆ ಬೇಕಾದ ಶಿಕ್ಷಣ ಸಮಾಜ ಜವಬ್ದಾರಿ ನಿರ್ವಹಿಸಬೇಕು. ಒಳ್ಳೆಯ ವಿದ್ಯಾಭ್ಯಾಸ ನಡೆಸಲು ಇದು ಅನುಕೂಲ ಆಗಲಿದೆ ಎಂದರು.

ಸ್ವರ್ಣವಲ್ಲೀ ‌ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳ ಆಶೀರ್ವಚನ ನುಡಿದು, ಶ್ರೀನಿಕೇತನ ಶಾಲೆಯಲ್ಲಿ ಭಗವದ್ಗೀತೆ ಕಡ್ಡಾಯವಾಗಿ ಆರಂಭವಾದಾಗಿನಿಂದ ನಡೆಸುತ್ತಿದ್ದೇವೆ. ಯೋಗಾಭ್ಯಾಸ‌ ಕೂಡ ನೀಡುತ್ತಿದ್ದೇವೆ. ಇದು‌ ಮಕ್ಕಳ ಏಳ್ಗೆಗೆ ನೆರವಾಗಲಿದೆ ಎಂದರು.

ಕರ್ಣಾಟಕ ಬ್ಯಾಂಕ್ 16.50 ಲ.ರೂ. ನೀಡಿ ಎರಡು ಕೊಠಡಿ ನೀಡಿದ್ದಾರೆ. ಸಮಾಜದಿಂದ, ಮಠದಿಂದ  ಸಂಸ್ಥೆ ನಡೆಸಲಾಗುತ್ತಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ, ಆಡಳಿತ ಮಂಡಳಿ ಅಧ್ಯಕ್ಷ ಮೇಜರ್ ರಘುನಂದನ ಹೆಗಡೆ,ಎಜಿಎಂ ರಾಜಗೋಪಾಲ ಬಿ, ಕಾಯ್ಯದರ್ಶಿ ಶಿವರಾಮ ಭಟ್ಟ, ಕರ್ಣಾಟಕ ಬ್ಯಾಂಕ್ ನ ನಾಗರಾಜ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಶ್ಯಾಂಸುಂದರ ಭಟ್ ಕಾಜಿನಮನೆ, ವೇದಾವತಿ ಹೆಗಡೆ,‌ಪ್ರಾಚಾರ್ಯ ವಸಂತ ಭಟ್ಟ, ಎನ್.ಜಿ.ಹೆಗಡೆ ಭಟ್ರಕೇರಿ ಇತರರು ಇದ್ದರು. ಕೆ.ಎನ್.ಹೊಸ್ಮನಿ ಸ್ವಾಗತಿಸಿದರು.

ಕರ್ಣಾಟಕ ಬ್ಯಾಂಕ್ ಕೇವಲ ಬ್ಯಾಂಕ್ ಅಲ್ಲ. ಸಮಾಜಮುಕಿ ಸಂಸ್ಥೆ. ಶಿಕ್ಷಣ‌ ನಮ್ಮ ಬದುಕಿನ ರಹದಾರಿ. ಸಾಮಾಜಿಕ, ಸಂಸ್ಕಾರಯುತ ಶಿಕ್ಷಣ ಸಿಗಬೇಕು.-ಮಹಾಬಲೇಶ್ವರ‌,ಎಂಡಿ, ಕರ್ಣಾಟಕ ಬ್ಯಾಂಕ್

ಕರ್ಣಾಟಕ ಬ್ಯಾಂಕ್ ಬೆಳವಣಿಗೆ‌ ಹರ್ಷ ಆಗುತ್ತದೆ. ಕೊಡುವ ಕೈ ಬೆಳೆದರೆ, ಬಲಗೊಂಡರೆ ಸಂತೋಷ ಆಗುತ್ತದೆ.-ಸ್ವರ್ಣವಲ್ಲೀ ಶ್ರೀ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.