ತಿನ್ನೆಘಾಟ ಅಖೇತಿ ಕೂಡು ರಸ್ತೆ ಕಾಮಗಾರಿ ಆರಂಭ
Team Udayavani, Jan 25, 2021, 7:48 PM IST
ಜೋಯಿಡಾ: ತಾಲೂಕಿನ ತಿನ್ನೆಘಾಟ ಅಖೇತಿ ಹದಗೆಟ್ಟಿದ್ದ ಕೂಡು ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಆರಂಭಿಸಿದೆ. ಆದರೆ ರಾಮನಗರ ಅನಮೋಡ ಸಂಚಾರದ ಎಲ್ಲಾ ವಾಹನಗಳು ಇಲ್ಲಿಂದಲ್ಲೆ ಸಂಚರಿಸುವುದರಿಂದ ಕಾಮಗಾರಿಗೆ ತೊಡಕುಂಟಾಗುತ್ತಿದೆ.
ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿ ರಾಮನಗರದಿಂದಅನಮೋಡ ವರೆಗೆ ಅಗಲಿಕರಣ ಕಾಮಗಾರಿ ಆರಂಭಗೊಂಡಂದಿನಿಂದ ಈ ಹೆದ್ದಾರಿ ಮೇಲೆ ಓಡಾಡುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯಾದ ಅಖೇತಿ-ತಿನ್ನೆಘಾಟ ಗ್ರಾಮೀಣ ರಸ್ತೆಯನ್ನೇ ಅವಲಂಬಿಸಿ ಸಂಚರಿಸಿದ್ದರ ಪರಿಣಾಮ ಈ ರಸ್ತೆ ಸಂಪೂರ್ಣ ಹಾಳಾಗಿ ಹೋಗಿತ್ತು.
ಇದನ್ನೂ ಓದಿ:ಸೋಡಿಗದ್ದೆ ಜಾತ್ರೆಯಲ್ಲಿ ಕೆಂಡ ಸೇವೆ
ಈ ಬಗ್ಗೆ ಸ್ಥಳೀಯರು ಹಾಗೂ ಪತ್ರಿಕೆಗಳು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅಖೇತಿ-ತಿನ್ನೆಘಾಟ ಹೊಸ ರಸ್ತೆ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ಮಾರ್ಗದ ಮೂಲಕ ಸಂಚರಿಸುವ ಬೃಹತ್ ವಾಹನಗಳ ದಟ್ಟಣೆ ಮಾತ್ರ ನಿಲ್ಲುತ್ತಿಲ್ಲ. ಇದರಿಂದಾಗಿ ರಸ್ತೆಕಾಮಗಾರಿ ನಡೆಸಲು ಕಷ್ಟಕರವಾಗುತ್ತಿದೆ ಎನುವ ಗೋಳಿ ಗುತ್ತಿಗೆದಾರನದಾಗಿದ್ದು, ಕೂಡಲೆ ಈ ಬಗ್ಗೆ ಇಲಾಖೆ ಕ್ರಮಕೈಗೊಂಡು ಸ್ಥಳಿಯರಿಗೆ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ