9ರಂದು ಶಿಕ್ಷಕರ ಜಿಲ್ಲಾಮಟ್ಟದ ಪ್ರತಿಭಟನೆ
Team Udayavani, Jul 6, 2019, 12:42 PM IST
ಶಿರಸಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಾಹಿತಿ ನೀಡಲಾಯಿತು.
ಶಿರಸಿ: ಶಿಕ್ಷಕರ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿರಸಿಯಲ್ಲೂ ನಾಲ್ಕು ಸಾವಿರದಷ್ಟು ಶಿಕ್ಷಕರು ಜು.9 ರಂದು ಬೀದಿಗೆ ಇಳಿದು ಪ್ರತಿಭಟನೆ ನಡೆಸಲಿದ್ದಾರೆ.
ಈ ಕುರಿತು ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸರಕಾರಿ ನೌಕರರ ಭವನದಲ್ಲಿ ಸುದ್ದಿಗೋಷ್ಠಿ ನಡಸಿ, ಈಗಾಗಲೇ ಸರಕಾರಕ್ಕೆ ಸಾಕಷ್ಟು ಸಲ ನಮ್ಮ ಬೇಡಿಕೆ ಇಟ್ಟರೂ ಪ್ರಯೋಜನ ಆಗಿಲ್ಲ. ಈ ಕಾರಣದಿಂದ ಜು.9 ರಂದು ರಜೆ ಹಾಕಿ ಶಿರಸಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಎದುರು ಬೆಳಗ್ಗೆ 9ರಿಂದ ಪ್ರತಿಭಟನೆ ನಡೆಸಲಿದ್ದು, ಬಳಿಕ ಮೆರವಣಿಗೆ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಸರಕಾರಕ್ಕೆ ಎಚ್ಚರಿಕೆ ಹಕ್ಕೊತ್ತಾಯ ಮಾಡಲಿದ್ದೇವೆ. ಒಮ್ಮೆ ಇದಕ್ಕೂ ಸ್ಪಂದನೆ ಸಿಗದೇ ಇದ್ದರೆ ಸೆ.5ರ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಬೆಂಗಳೂರು ಚಲೋ ಮಾಡಲಿದ್ದೇವೆ ಎಂದೂ ಹೇಳಿದರು.
ಸತೀಶ ಹೆಗಡೆ, ಸುರೇಶ ಪಟಗಾರ, ಮಾರುತಿ ನಾಯ್ಕ, ಅಶೋಕ ಭಜಂತ್ರಿ, ಎ.ಬಿ. ಹಂಚಿನ, ಬಾಲಚಂದ್ರ ಪಟಗಾರ, ಉದಯ ಭಟ್ಟ, ಸುಮನಾ ಹೆಗಡೆ, ಭಾಗೀರಥಿ ನಾಯಕ, ಗಣೇಶ ನಾಯ್ಕ, ಇಂದಿರಾ ನಾಯ್ಕ ಇತರರು ಇದ್ದರು.