ಕೃಷಿ ವಲಯ ಶ್ರೀಮಂತರಿಗೆ; ಮೇಧಾ ಪಾಟ್ಕರ್‌ ವಿರೋಧ


Team Udayavani, Dec 12, 2020, 7:18 PM IST

ಕೃಷಿ ವಲಯ ಶ್ರೀಮಂತರಿಗೆ; ಮೇಧಾ ಪಾಟ್ಕರ್‌ ವಿರೋಧ

ಹೊನ್ನಾವರ: ದೇಶದ ಪ್ರತಿಯೊಂದು ಕ್ಷೇತ್ರವನ್ನು ಕಾರ್ಪೊರೇಟ್‌ ಶ್ರೀಮಂತರಿಗೆ ಧಾರೆಯೆರೆಯುವ ಇರಾದೆ ಹೊತ್ತಿರುವ ಕೇಂದ್ರ ಸರ್ಕಾರ ಈಗ ಕೃಷಿ ವಲಯವನ್ನು ಅವರಿಗೆ ವರ್ಗಾಯಿಸಲು ಮುಂದಾಗಿದೆ ಎಂದು ಮೇಧಾ ಪಾಟ್ಕರ್‌ ಆರೋಪಿಸಿದರು.

ಸಹಯಾನ ಕೆರೆಕೋಣ, ಸಮುದಾಯ ಕರ್ನಾಟಕ ಮತ್ತು ಸಮಾನ ಮನಸ್ಕ ಸಾಂಸ್ಕೃತಿಕ ಸಂಘಟನೆಗಳು ಸೇರಿ ನಡೆಸಿದ ರೈತರ ಜೊತೆಗೆ ನಾವು-ನೀವು ಸಾಂಸೃRತಿಕ ಸ್ಪಂದನೆ ಜಾಲಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಅದು ಜಾರಿಗೆ ತಂದಿರುವ ಕೃಷಿ ಮಸೂದೆಗಳು ರೈತರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೇ ಮುಂದಿನ ಇಪ್ಪತ್ತು ವರ್ಷಗಳವರೆಗೆ ನ್ಯಾಯ ಬೇಡುವ ಹಕ್ಕು ನಿರಾಕರಿಸುತ್ತದೆ. ಜತೆಗೆ ಇದು ಸಂಪೂರ್ಣ ಅಸಾಂವಿಧಾನಿಕ ನೀತಿಯಾಗಿದ್ದು ರಾಜ್ಯಗಳ ಹಕ್ಕು ಕಸಿದುಕೊಂಡಂತಾಗಿದೆ. ಈ ಸರ್ಕಾರಕ್ಕೆಪ್ರಜಾಪ್ರಭುತ್ವ ಕುರಿತು, ಸಂವಿಧಾನ ಕುರಿತು ಕಿಂಚಿತ್ತೂಗೌರವವಿಲ್ಲ. ಪ್ರಸ್ತುತ ಮಸೂದೆಯಿಂದ ರೈತರು ಮಾತ್ರವಲ್ಲಕೃಷಿ ಕೂಲಿ ಅವಲಂಬಿಸಿರುವ ಮಹಿಳೆಯರು, ಆದಿವಾಸಿಗಳು,ತರಕಾರಿ ಬೆಳೆಗಾರರು ಮೊದಲಾದವರೆಲ್ಲ ಸಿಡಿದೆದ್ದಿದ್ದಾರೆ.ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ಜತೆ ಬಿಜೆಪಿ ಸರ್ಕಾರವಿರುವ ಕರ್ನಾಟಕದಲ್ಲೂ ಕೂಡ ಬಂದ್‌ ಯಶಸ್ವಿಯಾಗಿದೆ. ರೈತರ ಕೋಪ ಈ ಸರ್ಕಾರವನ್ನು ಕೆಳಗಿಳಿಸಬಲ್ಲದು. ರೈತ ಚಳವಳಿಗೆ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕು. ಸಾಹಿತಿಗಳು ಮೇಧಾವಿಗಳು ಮೌನ ಮುರಿದು ಧ್ವನಿ ಎತ್ತಬೇಕಾದ ಕಾಲ ಇದು ಎಂದು ಮೇಧಾ ಪಾಟ್ಕರ್‌ ಕರೆ ನೀಡಿದರು.

ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಹಿಟ್ಲರ್‌ ಸತ್ತಿದ್ದು ಅನ್ನೋರು ಯಾರು? ಆತನ ಭೌತಿಕ ದೇಹ ಮಾತ್ರ ಸಮಾಧಿ ಆಗಿದೆ. ಆರ್ಯ ಜನಾಂಗದ ಮೇಲ್ಮೆಯನ್ನುಮತ್ತೆ ಸ್ಥಾಪಿಸುವ ಆತನ ಧೋರಣೆ ದಫನ್‌ ಆಗಿಲ್ಲ. ಅದು ಗಾಳಿಯಲ್ಲಿ ನೀರಿನಲ್ಲಿ ಸೇರಿ ದೇಶದೇಶಗಳನ್ನು ಹರಡಿದೆ. ಪ್ರಚಂಡ ನಾಯಕರ ಮಿದುಳನ್ನು, ಒಡಲನ್ನು ಸೇರಿ ಹೋಗಿದೆ ಎಂದು ಹೇಳಿದರು. ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ, ಎಂ.ಡಿ. ಪಲ್ಲವಿ, ಶಿಲ್ಪಾ ಮೂಡಬಿ ರೈತ ಸ್ಪಂದನದ ಹಾಡುಗಳನ್ನು ಪ್ರಸ್ತುತಪಡಿಸಿದರು.

ರೈತ ಹೋರಾಟಕ್ಕೆ ಕಾವ್ಯಸ್ಪಂದನೆಯಲ್ಲಿ ಶಾಂತಾರಾಮ ನಾಯಕ ಹಿಚ್ಕಡ, ರಂಜಾನ್‌ ದರ್ಗಾ, ಕೆ.ಷರಿಫಾ, ಆರ್‌.ಜಿ. ಹಳ್ಳಿ, ನಾಗರಾಜ್‌, ಎಚ್‌.ಆರ್‌. ಸುಜಾತಾ, ವಿಜಯಕಾಂತ ಪಾಟೀಲ, ಅಲ್ಲಾಗಿರಿರಾಜ್‌, ಚಂ.ಸು. ಪಾಟೀಲ, ಪೀರ್‌ ಬಾಷ, ಮಮತಾ ಸಾಗರ, ಸುಬ್ರಾಯ ಮತ್ತಿಹಳ್ಳಿ, ಗಣೇಶ ಹೊಸ್ಮನೆ, ದೀಪದಮಲ್ಲಿ, ಕೊಟ್ರೇಶ್‌ ಕೊಟ್ಟೂರು, ಕೆ.ನೀಲಾ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವೇಂದ್ರ ಗೌಡ ಸ್ವಾಗತಿಸಿದರು. ಯಮುನಾ ಗಾಂವ್ಕರ್‌ ನಿರ್ವಹಿಸಿದರು.

ನ್ಯಾ| ಎಚ್‌.ಎನ್‌. ನಾಗಮೋಹನ ದಾಸ್‌, ಅರುಂಧತಿ ನಾಗ್‌, ಡಾ| ಎಂ.ಜಿ. ಹೆಗಡೆ, ಕೆ.ಎಸ್‌. ವಿಮಲಾ, ವಿಶುಕುಮಾರ್‌, ಯು. ಬಸವರಾಜ್‌, ಎನ್‌. ಕೆ. ವಸಂತರಾಜ್‌, ಎಸ್‌. ವರಲಕ್ಷ್ಮಿ, ಡಾ| ಪ್ರಕಾಶ, ಟಿ. ಯಶವಂತ, ಶ್ರೀಧರ ನಾಯಕ, ಕಿರಣ ಭಟ್‌, ಸಿ.ಆರ್‌. ಶಾನಭಾಗ್‌, ವಿಠuಲ ಭಂಡಾರಿ, ಎಸ್‌.ವೈ. ಗುರುಶಾಂತ್‌, ಕೃಷ್ಣ ನಾಯಕ ಹಿಚ್ಕಡ, ಬಿ. ಶ್ರೀಪಾದ ಭಟ್‌ ಮೊದಲಾದವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.