ಮದುವೆ ಆಗುವುದಾಗಿ ವಂಚಿಸಿದ ಸೈನಿಕ!
Team Udayavani, Dec 10, 2017, 7:20 AM IST
ಯಲ್ಲಾಪುರ: ಸೈನಿಕನೊಬ್ಬ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು
ಯುವತಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಜಕ್ಕೊಳ್ಳಿ ಯುವತಿಯನ್ನು ಭೂ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆಯ ಮುಧೋಳದ ಲಕ್ಷ್ಮಣ ಭೀಮಪ್ಪ ಜೂಂಜಣ್ಣನವರ್ ವಂಚಿಸಿದ್ದಾನೆ.
ಜ.21ರಿಂದ ನ.14ರ ಅವಧಿಯಲ್ಲಿ ಮೊಬೈಲ್ ಮೂಲಕ ಯುವತಿಯ ಪರಿಚಯಿಸಿಕೊಂಡು, ತಾನು ಮದುವೆಯಾಗಿರುವ ವಿಚಾರ ಮರೆಮಾಚಿ, ಸ್ನೇಹ ಬೆಳೆಸಿದ್ದಾನೆ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ, ರಾತ್ರಿ ವೇಳೆ ಮೊಬೈಲ್ನಲ್ಲಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದಕ್ಕೆ ಆಕ್ಷೇಪ
ವ್ಯಕ್ತಪಡಿಸಿದಾಗ ತನ್ನ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ.
ನ.14ರಂದು ಅಪರಿಚಿತ ವ್ಯಕ್ತಿಗಳನ್ನು ಆಕೆ ಬಳಿ ಕಳುಹಿಸಿ ಪೊಲೀಸರಿಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ
ಬೆದರಿಕೆ ಹಾಕಿದ್ದನೆಂದು ನೊಂದ ಯುವತಿ ದೂರು ನೀಡಿದ್ದಾಳೆ.