ಬಿಳೇ ಹುಲ್ಲಿಗೆ ಬಂಗಾರದ ಬೆಲೆ

ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಭತ್ತದ ಹುಲ್ಲು ; ಹೈನುಗಾರರಿಗೆ ತಪ್ಪದ ಸಂಕಷ್ಟ

Team Udayavani, May 25, 2022, 5:37 PM IST

20

ಶಿರಸಿ: ಅಕ್ಕ ಪಕ್ಕದ ಜಿಲ್ಲೆಯಲ್ಲಿ ಬೆಳೆಯುವ ಪಶು ಆಹಾರವನ್ನೇ ನಂಬಿಕೊಂಡು ಮಲೆನಾಡಿನಲ್ಲಿ ಪಶು ಸಂಗೋಪನೆ ನಡೆಯುತ್ತಿದೆ. ಶಿರಸಿ ಸೀಮೆಗೆ ಕಲಘಟಗಿ, ಹುಬ್ಬಳ್ಳಿ, ತಡಸ, ಸೊರಬ, ತಾಳಗುಪ್ಪ ಭಾಗದಿಂದ ಬಿಳೆ ಹುಲ್ಲು ತಂದು ಪಶು ಸಂಗೋಪನೆ ಮಾಡುತ್ತಿದ್ದರು. ಆದರೆ, ಈ ಬಾರಿ ಬಿಳೆ ಹುಲ್ಲಿಗೇ ಸಂಕಷ್ಟ ಬಂದಿದ್ದು, ಹಣ ನೀಡಿದರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಶಿರಸಿ ಸೀಮೆಯ ಪಶ್ಚಿಮ ಭಾಗದಲ್ಲಿ ಭತ್ತದ ಕ್ಷೇತ್ರಗಳು ಕಡಿಮೆ. ಪೂರ್ವ ಭಾಗದಲ್ಲಿ ಭತ್ತ, ಜೋಳದ ಕ್ಷೇತ್ರಗಳು ಇವೆ. ಸಿದ್ದಾಪುಪುರದಲ್ಲೂ ಸಾಗರ, ಸೊರಬದ ಭಾಗದ ಕಡೆಗೆ ಭತ್ತದ ಗದ್ದೆಗಳು ಕಂಡು ಬಂದರೂ ಉಳಿದೆಡೆ ಇಲ್ಲ. ಈ ಕಾರಣದಿಂದ ರೈತರು ಹೈನುಗಾರರೂ ಆಗಿದ್ದರೂ ಒಂದು ಆಕಳಿದ್ದರೆ ಕನಿಷ್ಠ 400 ಸುಗಡು (ಹುಲ್ಲಿನ ಕಟ್ಟು) ಖರೀದಿಸುವುದು ಸಾಮಾನ್ಯವಾಗಿತ್ತು.

ದುಬಾರಿ ಬೆಲೆ: ಕಳೆದ ವರ್ಷ ಒಂದೂವರೆ ಎರಡು ಕೇಜಿ ತೂಕದ ಹುಲ್ಲಿಗೆ 20ರಿಂದ 25 ರೂ. ತನಕ ಮಾರಾಟ ಆಗಿದ್ದರೆ ಈ ಬಾರಿ ಅದೇ ಮಾದರಿ ಹುಲ್ಲಿನ ಕಟ್ಟು 35ರಿಂದ 40 ರೂ. ತನಕ ಆಗಿದೆ. ಹುಲ್ಲೇ ರೈತರ ಬಳಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಗುಣಮಟ್ಟದ, ಮಳೆ ತಾಗದ ಹುಲ್ಲು ಬೇಕೆಂದರೆ ಬಯಲು ಸೀಮೆಯ ಕಘಟಗಿ, ಪಾಳಾ, ತಡಸ, ಬೆನ್ನೂರು ಸೊರಬಗಳ ತನಕ ಹೋದರೂ ಸಿಗುತ್ತಿಲ್ಲ. ಭತ್ತದ ಕೊಯ್ಲಾದ ಬಳಿಕ ಅಥವಾ ಕೋಯ್ಲಿನ ವೇಳೆಯಲ್ಲೇ ಮಳೆ ಬಂದಿದ್ದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಅಕಾಲಿಕ ಮಳೆ ಇದ್ದ ಬಿಳೆ ಹುಲ್ಲು, ಬೈ ಹುಲ್ಲಿಗೆ ಸಮಸ್ಯೆ ಆದರೂ ಭತ್ತದ ಕೃಷಿಕರು ಭತ್ತದ ಕೃಷಿ ನಷ್ಟ ಎಂದೋ ಅಥವಾ ಅಲ್ಲಿ ಅಡಕೆ ಬೇಸಾಯ ಆರಂಭ ಮಾಡಿಧ್ದೋ, ಅನಾನಸ್‌ ಬೆಳೆಸಿಧ್ದೋ ಪಶು ಸಂಗೋಪನೆಗೆ ತೊಡಕಾಗಿದೆ. ಭತ್ತ ಆಗಿದ್ದರೆ ಭತ್ತದ ಕಾಳು ಮನುಷ್ಯನಿಗೂ, ಹುಲ್ಲು ಜಾನುವಾರಿಗೂ ಆಗುತ್ತಿತ್ತು. ಜೋಳದ ದಂಟು ಒಂದು ಲಾರಿಗೆ 15 ಸಾವಿರದಿಂದ 20 ಸಾವಿರಕ್ಕೆ ಏರಿದೆ. ಇದರ ಪರಿಣಾಮ ಎಂಬಂತೆ ಈ ಬಾರಿ ಹಣ ಕೊಟ್ಟರೂ ಹುಲ್ಲು ಸಿಗುತ್ತಿಲ್ಲ.

ಏರಿದ ದರ: ಈ ಮಧ್ಯೆ ಧಾರವಾಡ ಹಾಲು ಒಕ್ಕೂಟದ ಮೂಲಕ ವಿತರಿಸಲಾಗುವ ಕೆಎಂಎಫ್‌ ಪಶು ಆಹಾರ ಹೊರತುಪಡಿಸಿದರೆ ಉಳಿದೆಲ್ಲ ಪಶು ಆಹಾರಗಳ ಬೆಲೆ ಏರಿದೆ. ಹಾಲಿನ ದರಕ್ಕೂ ಪಶು ಸಂಗೋಪನಾ ವೆಚ್ಚಕ್ಕೂ ಹೋಲಿಸಿದರೆ ಈಗ ಪಶು ಸಂಗೋಪನೆ ದುಬಾರಿ ಆಗುತ್ತಿದೆ. ರೈತರಿಗೆ ಬಿಳೆ ಹುಲ್ಲಿನ ಕೊರತೆ ನೀಗಿಸಿಲು ಬೆಟ್ಟದಲ್ಲಿ, ಖಾಲಿ ಜಾಗದಲ್ಲಿ ಹಸಿ ಹುಲ್ಲು ಬೆಳೆಸುವುದೇ ಪರಿಹಾರ ಎನ್ನುತ್ತಾರೆ. ಆದರೆ, ಊರಲ್ಲಿ ಇರುವ ಕೃಷಿಕರೇ ಕಡಿಮೆ. ಅದರಲ್ಲೂ ವಯಸ್ಸಾದವರೇ ಹೆಚ್ಚು. ಇಂಥ ಸಂಕೀರ್ಣ ಸ್ಥಿತಿಯಲ್ಲಿ ಪಶುಸಂಗೋಪನೆ ಬಿಡಬಾರದು, ಧಾರ್ಮಿಕ ನಂಬಿಕೆ ಎಂದು ಮಾಡಿಕೊಂಡು ಬಂದವರು ಮುನ್ನಡೆಸುತ್ತಿದ್ದಾರೆ. ವೈಜ್ಞಾನಿಕವಾಗಿ ಮಾಡಿದರೆ ಲಾಭವಾದರೂ ಒಂದೆರಡು ಆಕಳು ಕಟ್ಟಿಕೊಂಡವರಿಗೆ ಅಲ್ಲ ಎಂಬುದೂ ಬೇರೆ ಹೇಳಬೇಕಿಲ್ಲ. ಜಾನುವಾರಿನ ಜೊತೆ ಇರುವ ಮಾನಸಿಕ ಸಂಬಂಧ ಪಶುಸಂಗೋಪನೆ ಉಳಿಸಿಕೊಂಡಿದೆ ಎಂಬುದೂ ಸುಳ್ಳಲ್ಲ.

ದಾರಿ ಕಾಣದಾಗಿದೆ: ಪಶು ಸಂಗೋಪನಾದಾರರಿಗೆ ದುಬಾರಿ ಬೆಲೆ ಕೊಟ್ಟು ಪಶು ಆಹಾರ ಖರೀದಿಸಲು ಮುಂದಾದರೂ ಪಶು ಆಹಾರಗಳಿಲ್ಲ. ಬಿಳೆಹುಲ್ಲು, ಜೋಳದ ದಂಟುಗಳು, ತೆನೆಗಳೂ ಸಿಗುತ್ತಿಲ್ಲ. ಗುಣಮಟ್ಟದ್ದು ಬೇಕು ಎಂದರೆ ಓಡಾಟ, ದುಬಾರಿ ಬೆಲೆ ತೆರಬೇಕಾಗಿದೆ.

ನಮ್ಮ ಮನೆಗೇ 3 ಲಾರಿ ಬಿಳೆಹುಲ್ಲು ಬೇಕಿತ್ತು. ಆದರೆ, ಸಿಕ್ಕಿದ್ದು ಒಂದೇ ಲಾರಿ ಎನ್ನುವ ವಿಕಾಸ ಹೆಗಡೆಯಂತಹ ಯುವ ಕೃಷಿಕರು ಕೂಡ ಈ ಕೊರತೆಗೆ ತಲೆಬಿಸಿ ಮಾಡಿಕೊಂಡಿದ್ದಾರೆ.

ಮೊದಲು ಈ ಸೀಸನ್‌ನಲ್ಲಿ ತಿಂಗಳಿಗೆ 200-25 ಟ್ರಿಪ್‌ ಹುಲ್ಲು ತರುತ್ತಿದ್ದೆ. ಆದರೆ, ಈವರೆಗೆ ಕೊಟ್ಟಿದ್ದು ಕೇವಲ 4 ಟ್ರಕ್‌ ಹುಲ್ಲು. ನಮಗೂ ವ್ಯಾಪಾರವಿಲ್ಲ, ಟ್ರಕ್ಕಿಗೂ ಕೆಲಸವಿಲ್ಲ. ಹಣಕೊಟ್ಟರೂ ಹುಲ್ಲಿಲ್ಲ. ಇಷ್ಟು ದುಬಾರಿಗೆ ಈ ಹುಲ್ಲು ನೀಡಿದ್ದು ಇದೇ ಮೊದಲು. –ರಮೇಶ, ಹುಲ್ಲಿನ ವ್ಯಾಪಾರಿ.

35 ರೂ. ಆದರೂ ಹುಲ್ಲಿನ ಕಟ್ಟು ದೊಡ್ಡದಲ್ಲ, ಮಳೆ ತಾಗಿ ಕರ್ರಗಾಗಿದೆ. ಕಹಿ ಆದರೆ ದನವೂ ತಿನ್ನೋದಿಲ್ಲ. ಆದರೂ ಖರೀದಿ ಅನಿವಾರ್ಯ. –ಸೀತಾರಾಮ ಹೆಗಡೆ ಕಲ್ಲಕೈ, ಹೈನುಗಾರ

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.