ಗ್ರಾಮೀಣ ರಸ್ತೆ ಆಗ್ತಿದೆ ಕಸದ ತೊಟ್ಟಿ
•ಚಿಪಗಿ ಬನವಾಸಿ ರಸ್ತೆಯಲ್ಲಿ ತ್ಯಾಜ್ಯ ಹಾಕುವವರಿಗೆ ಎಚ್ಚರಿಕೆ
Team Udayavani, Jul 1, 2019, 2:42 PM IST
ಬಾಟಲಿಗಳ ರಾಶಿ
ಶಿರಸಿ: ಚಿಪಗಿ ಬನವಾಸಿ ರಸ್ತೆಯಲ್ಲಿ ಹದ್ದಿನ ಕಣ್ಣು ತ್ಯಾಜ್ಯ ಹಾಕುವವರ ಬಗ್ಗೆ ಇದ್ದಂತೆ ಇನ್ನೊಂದೆಡೆ ಶಿರಸಿಯಿಂದ ಕುಮಟಾ ಹಾಗೂ ಸಿದ್ದಾಪುರಕ್ಕೆ ತೆರಳುವ ಗ್ರಾಮೀಣ ಭಾಗದ ರಸ್ತೆಗಳು ಕಸದ ತೊಟ್ಟಿಗಳಾಗುತ್ತಿವೆ.
ಜೀವಜಲ ಕಾರ್ಯಪಡೆ ಮುಖ್ಯಸ್ಥ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ಬಹುಕಾಲದಿಂದ ಬೇಕಾಬಿಟ್ಟಿಯಾಗಿ ತ್ಯಾಜ್ಯ ಚೆಲ್ಲುತ್ತಿದ್ದ ಚಿಪಗಿ ರಸ್ತೆ, ಜಿಲ್ಲಾ ಕ್ರೀಡಾಂಗಣ ಸಮೀಪವನ್ನು ಸ್ವತಃ ಸ್ವಚ್ಛಗೊಳಿಸಿದ್ದರು. ಬನವಾಸಿ ಮಾರ್ಗದಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಸಿದ್ದರು. ಒಮ್ಮೆ ಸ್ವಚ್ಛಗೊಳಿಸಿದ್ದು ಮಾತ್ರ ಅಲ್ಲದೇ ಯಾರೇ ಕಸ ಚೆಲ್ಲಲು ಬಂದರೂ ತಡೆಯುತ್ತಿದ್ದರು. ಈಗ ಈ ಭಾಗದಲ್ಲಿ ಕಸ ಚೆಲ್ಲುವವರಿಗೆ ಆತಂಕ ಸೃಷ್ಟಿಯಾಗಿದೆ.
ಈ ಮಧ್ಯೆ ತ್ಯಾಜ್ಯವನ್ನು ಬೇಕಾಬಿಟ್ಟಿ ಚೆಲ್ಲುವ ಮನಸ್ಥಿತಿಯವರು ಸ್ಥಳ ಬದಲಾಯಿಸಿಕೊಂಡಂತೆ ಇದೆ. ಕುಮಟಾ ರಸ್ತೆಯ ಹೀಪನಳ್ಳಿ, ಮೆಣಸಿಕೇರಿ, ಶಿರಸಿಮಕ್ಕಿ ಕತ್ರಿಗಳ ತನಕವೂ ನಡು ರಾತ್ರಿ ಕಸ ಚೆಲ್ಲುತ್ತಿದ್ದಾರೆ.
ಇನ್ನೊಂದೆಡೆ ಸಿದ್ದಾಪುರ ಮಾರ್ಗದ ಅಬ್ರಿಮನೆ ಕತ್ತರಿ, ಗಿಡಮಾವಿನಕಟ್ಟೆ, ಸಣ್ಣಕೇರಿ, ಬೆಳ್ಳೆಕೇರಿ, ಕಾಗೇರಿ, ಯಡಹಳ್ಳಿ ತನಕವೂ ಕಸ ಚೆಲ್ಲುತ್ತಿದ್ದಾರೆ. ಅಬ್ರಿಮನೆ ಕತ್ರಿ ಬಳಿ ಇರುವ ಮೋರಿ ಕಟ್ಟೆ ಕೂಡ ಬಾರ್ ಕಟ್ಟೆ ಆಗಿದೆ. ಇದೂ ಅಲ್ಲದೇ ಸಾವಿರಕ್ಕೂ ಅಧಿಕ ಬಾಟಲಿಗಳು ಮೋರಿ ಕಟ್ಟೆ ಕೆಳಗೆ ಬಿದ್ದಿವೆ. ಕಂಪ್ಯೂಟರ್ಗಳು, ಫ್ರಿಜ್ ಐಟಂಗಳು, ಮನೆಯ ತ್ಯಾಜ್ಯಗಳೂ ಗಟಾರದಲ್ಲಿ ಬೀಳುತ್ತಿವೆ.
ಈ ಮಧ್ಯೆ ಹೀಪನಳ್ಳಿ ಭಾಗದ ನಾಗರಿಕರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಕೂಡ ಮನವಿ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಈ ತ್ಯಾಜ್ಯಗಳು ತೋಟ ಪಟ್ಟಿ, ನದಿಗಳನ್ನೂ ತಲುಪಿ ಅನೇಕ ಅಧ್ವಾನ ಮಾಡುತ್ತಿವೆ ಎಂಬುದೂ ಗ್ರಾಮಸ್ಥರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ