ಹೂಳು ತುಂಬಿದ ಕಡವಿನಕಟ್ಟೆ ಜಲಾಶಯ

•ಹಣ ಮಂಜೂರಾದರೂ ಡ್ಯಾಂ ಸೈಟ್ ಅರ್ಧಂಬರ್ಧ ದುರಸ್ತಿ: ಜನರ ಆಕ್ರೋಶ

Team Udayavani, May 21, 2019, 10:41 AM IST

uk-tdy.01

ಭಟ್ಕಳ: ನೀರೇ ಇಲ್ಲದ ಕಡವಿನಕಟ್ಟೆ ಜಲಾಶಯ.

ಭಟ್ಕಳ: ಪುರಸಭೆ, ಜಾಲಿ ಪಪಂ, ಶಿರಾಲಿ, ಮಾವಿನಕುರ್ವೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಡವಿನಕಟ್ಟೆ ಡ್ಯಾಂ ಹೂಳು ತುಂಬಿ ನೀರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ಜನ ಪರದಾಡುವಂತಾಗಿದೆ.

ಹಲವಾರು ವರ್ಷಗಳಿಂದ ಹೂಳು ತೆಗೆಯುವಂತೆ ಆಗ್ರಹಿಸಲಾಗಿದ್ದರೂ ಸಂಬಂಧ ಪಟ್ಟ ಇಲಾಖೆ ನಿರ್ಲಕ್ಷ್ಯದಿಂದ ಇಂದು ಜನರು ಹನಿ ನೀರಿಗಾಗಿ ಸಂಕಷ್ಟ ಪಡುವಂತಾಗಿದೆ. ಕಳೆದ ಸುಮಾರು ಒಂದು ದಶಕದ ಹಿಂದೆ ಕಡವಿನಕಟ್ಟೆ ಡ್ಯಾಂ ರಿಪೇರಿಗಾಗಿ ಹಣ ಮಂಜೂರಾಗಿತ್ತು. ಡ್ಯಾಂ ಸೈಟ್‌ನಲ್ಲಿ ರಿಪೇರಿ ಕಾರ್ಯ ವಹಿಸಿಕೊಂಡ ಗುತ್ತಿಗೆದಾರರು ಕೆಲಸ ಮುಗಿಸಿದ್ದು ಗೇಟ್ ವಾಲ್ವ್ ರಿಪೇರಿ ಮಾಡಬೇಕಾಗಿದ್ದರೂ ತಾಂತ್ರಿಕ ಕಾರಣ ನೀಡಿ ಹಾಗೆಯೇ ಬಿಟ್ಟಿದ್ದು ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು. ಅಲ್ಲದೇ ಅಂದು ರಿಪೇರಿ ಮಾಡುವ ಸಮಯದಲ್ಲಿ ನೀರಿನ ಒತ್ತಡವನ್ನು ತಡೆಯಲು ಡ್ಯಾಂ ಸೈಟ್ ಒಳಗಡೆಯಲ್ಲಿ ತುಂಬಿದ್ದ ಮಣ್ಣನ್ನು ಸಂಪೂರ್ಣ ತೆಗೆಯುವುದರೊಳಗಾಗಿ ಮಳೆ ಆರಂಭವಾಗಿದ್ದರಿಂದ ಅಲ್ಲಿದ್ದ ಮಣ್ಣನ್ನು ಹಾಗೆಯೇ ಬಿಟ್ಟ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲು ಯಾವುದೇ ಅಡ್ಡಿಯಾಗಿಲ್ಲ. ಇದರಿಂದ ಮುಂದಿನ ವರ್ಷದಿಂದ ಡ್ಯಾಂ ಒಳಗಡೆ ನೀರು ಸಂಗ್ರಹಣೆ ಕಡಿಮೆಯಾಗುತ್ತಾ ಬಂತಲ್ಲದೇ ಇಂದು ಸಂಪೂರ್ಣ ಒಣಗಿದೆ.

ಡ್ಯಾಂ ಹೂಳೆತ್ತುವ ಕುರಿತು ಸ್ವತಃ ಶಾಸಕ ಸುನೀಲ್ ನಾಯ್ಕ ಅವರು ಭೇಟಿ ಕೊಟ್ಟು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸೂಚನೆ ಕೊಟ್ಟು ಆರು ದಿನಗಳು ಕಳೆದರೂ ಕೂಡಾ ಇನ್ನೂ ತನಕ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ ಎನ್ನುವುದು ಬೇಸರದ ಸಂಗತಿ. ಓರ್ವ ಜನಪ್ರತಿನಿಧಿಗಳ ಮಾತಿಗೇ ಈ ರೀತಿಯ ನಿರ್ಲಕ್ಷ ಮಾಡಿದರೆ ಇನ್ನು ಜನಸಾಮಾನ್ಯರ ಧ್ವನಿಗೆ ಬೆಲೆ ಇದೆಯೇ ಎನ್ನುವುದು ಇಲ್ಲಿ ನಾಗರಿಕರು ಕೇಳುವ ಪ್ರಶ್ನೆಯಾಗಿದೆ.

ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಪುರಸಭೆಯವರು ನೀರನ್ನು ಉಪಯೋಗಿಸುತ್ತಾ ಬಂದಿದ್ದು ಇನ್ನೂ ತನಕ ಪುರಸಭೆಯಿಂದ ಡ್ಯಾಂ ನಿರ್ವಹಣೆಗೆ ಹಣ ಖರ್ಚು ಮಾಡಿದ್ದು ಇಲ್ಲ ಎನ್ನುವ ಮಾಹಿತಿ ಸ್ವತಹ ಶಾಸಕರ ಎದುರೇ ಬಹಿರಂಗ ಗೊಂಡಿದ್ದು, ಜಾಲಿ ಪಪಂ, ಮಾವಿನಕುರ್ವೆ ಹಾಗೂ ಶಿರಾಲಿ ಗ್ರಾಪಂಗಳು ನೀರೆತ್ತಿಕೊಂಡು ಹೋಗುತ್ತಿರುವುದು ಮಾತ್ರವಾಗಿದ್ದು ನೀರಿನ ಸಂಗ್ರಹದ ಬಗ್ಗೆಯಾಗಲೀ, ನೀರಿನ ನಿರ್ವಹಣೆ ಬಗ್ಗೆಯಾಗಲೀ ಯಾವುದೇ ಯೋಜನೆ ರೂಪಿಸಿಲ್ಲ ಎನ್ನುವುದು ಮಾತ್ರ ವಿಪರ್ಯಾಸವಾಗಿದೆ. ಚಿಕ್ಕ ನೀರಾವರಿ ಇಲಾಖೆ ವತಿಯಿಂದ ರೈತರ ಜಮೀನಿಗೆ ನೀರುಣಿಸಲು ಕಟ್ಟಿದ ಡ್ಯಾಂ ನೀರನ್ನು ಕುಡಿಯುವ ನೀರಿನ ಉಪಯೋಗ ಮಾಡುತ್ತಾ ಬಂದಿದ್ದರೂ ಯಾವುದೇ ನಿರ್ವಹಣೆ ಮಾಡದಿರುವ ಕುರಿತು ಶಾಸಕರು ತರಾಟೆಗೆ ತೆಗೆದುಕೊಂಡು ಇರುವ ಅನುದಾನ ಬಳಸಿ ಹೂಳೆತ್ತುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹೂಳೆತ್ತುವುದಾಗಿ ಭರವಸೆ ನೀಡಿದ ಅಧಿಕಾರಿಗಳು ಕೂಡಾ ಇತ್ತ ಸುಳಿಯದೇ ಯಾವುದೇ ಕಾರ್ಯವಾಗಿಲ್ಲ. ಪುರಸಭಾ ಮುಖ್ಯಾಧಿಕಾರಿಗಳು ಕಡವಿನಕಟ್ಟೆ ಡ್ಯಾಂ ಕೆಳಗಡೆಯಿಂದ ಕಾಲುವೆ ಮಾಡಿಕೊಟ್ಟು ಪಂಪ್‌ಹೌಸ್‌ಗೆ ನೀರು ಬರುವಂತೆ ಕಾಮಗಾರಿ ಮಾಡುತ್ತಿರುವುದು ಬಿಟ್ಟರೆ ಬೇರೆ ಯಾವುದೇ ಕೆಲಸವಾಗಿಲ್ಲ. ಈ ಕುರಿತು ಶಾಸಕರ ಮಾತಿಗೂ ಬೆಲೆ ಇಲ್ಲ ಎನ್ನುವಂತಾಗಿದ್ದು, ಈ ಬಾರಿಯೂ ಹೂಳೆತ್ತದೇ ಹೋದರೆ ಮುಂದಿನ ವರ್ಷ ಮಾರ್ಚ್‌ನಲ್ಲಿಯೇ ನೀರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ. ಇನ್ನಾದರೂ ಅಧಿಕಾರಿಗಳು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಂಡು ಮಳೆ ಆರಂಭ‌ಕ್ಕೆ ಮುನ್ನ ಕನಿಷ್ಠ 100 ಲಾರಿಗಷ್ಟು ಮಣ್ಣನ್ನಾದರೂ ಹೊರ ಹಾಕಿದರೆ ಜನತೆ ನಿಟ್ಟುಸಿರು ಬಿಡುವಂತಾಗುವುದಂತೂ ಸತ್ಯ.

•ಆರ್ಕೆ, ಭಟ್ಕಳ

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.