ಅಂಜುದೀವ್‌ ಚರ್ಚ್‌ನಲ್ಲಿದ್ದ ಪುರಾತನ ಕಲಾಕೃತಿಗಳ ಕಳವು


Team Udayavani, Nov 29, 2019, 1:22 PM IST

uk-tdy-1

ಕಾರವಾರ: ನೌಕಾನೆಲೆ ಅಧೀನದಲ್ಲಿರುವ ಅಂಜುದೀವ್‌ ನಡುಗಡ್ಡೆಯ ಅತೀ ಪ್ರಾಚೀನ ಚರ್ಚ್‌ನಲ್ಲಿ ಕೆಲ ಕಲಾಕೃತಿಗಳು ಕಳವಾಗಿವೆ ಎಂದು ಕಾಣಕೋಣ ನಾಗರಿಕರೊಬ್ಬರು ಗೋವಾ ಪೊಲೀಸರಿಗೆ ದೂರು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಅಂಜುದೀವ್‌ ದ್ವೀಪವನ್ನು ಭಾರತೀಯ ನೌಕಾನೆಲೆಗೆ ವಹಿಸಿಕೊಟ್ಟ ಎರಡೂವರೆ ದಶಕಗಳ ನಂತರ ಅಲ್ಲಿದ್ದಅಮೂಲ್ಯ ಪೋರ್ಚುಗೀಸ್‌ ಕಲಾಕೃತಿಗಳನ್ನು ಕಳುವುಮಾಡಲಾಗಿದೆ ಎಂದು ಗೋವಾ ರಾಜ್ಯದ  ಕಾಣಕೋಣ ನಗರ ಪೊಲೀಸ್‌ ಠಾಣೆಯಲ್ಲಿ ನಾಗರಿಕ ನೆಟಿವಿದಾಡೆ ಡಿ’ಸಾ ಎಂಬುವವರು ದೂರು ನೀಡಿದ್ದಾರೆ. ಈ ದೂರಿನ ನಂತರ ಕಾಣಕೋಣ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಅಲ್ಲಿನ ಸಹಾಯಕ ಆಯುಕ್ತರಿಗೆ ಪತ್ರ

ಬರೆದು ತನಿಖೆಗೆ ಅಂಜುದೀವ್‌ ದ್ವೀಪಕ್ಕೆ ತೆರಳಲು ಅನುಮತಿ ಕೋರಿದ್ದರು. ಸಹಾಯಕ ಆಯುಕ್ತರು ಈ ಅರ್ಜಿಯನ್ನು ದಕ್ಷಿಣ ಗೋವಾದ ಕಲೆಕ್ಟರ್‌ ಗೆ ವರ್ಗಾಯಿಸಿದ್ದರು. ಈ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಕಾಣಕೋಣದ ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ಸಹಾಯಕ ಆಯುಕ್ತರಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತೆ ಪತ್ರ ಬರೆದಿದ್ದಾರೆ. ಈ ದೂರಿನಿಂದ ಕಾಣಕೋಣದ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂಜುದೀವ್‌ ನಡುಗಡ್ಡೆ (ದ್ವೀಪ) 25 ವರ್ಷಗಳ ಹಿಂದೆಯೇ ಗೋವಾ ಸರ್ಕಾರ ದೇಶದ ರಕ್ಷಣಾ ಇಲಾಖೆಗೆ ನೀಡಿದೆ. ಅಂಜುದೀವ್‌ ಐಲ್ಯಾಂಡ್‌ನ್ನು “ನೋಟಿಫೈಡ್‌’ ಏರಿಯಾ ಎಂದು ಗುರುತಿಸಿದೆ. ಈ ದ್ವೀಪದ ಮೇಲೆ ಗೋವಾ ಸರಕಾರಕ್ಕೆ ಈಗ ಯಾವ ಹಕ್ಕೂ ಉಳಿದಿಲ್ಲ. ಅಲ್ಲದೇ ಕಾಣಕೋಣ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ದ್ವೀಪ ಈಗ ಬರುತ್ತಿಲ್ಲ. ನೌಕಾನೆಲೆಯಲ್ಲಿ ಏನಾದರೂ ಅಪರಾಧದ ಘಟನೆಗಳು ಜರುಗಿದರೆ, ಅಲ್ಲಿನ ನೇವೀ ಪೊಲೀಸರೇ ತನಿಖೆ ನಡೆಸಿ, ಪ್ರಕರಣವನ್ನು ಕಾರವಾರ ಗ್ರಾಮೀಣ ಠಾಣೆಗೆ ವರ್ಗಾಯಿಸುತ್ತಾರೆ. ಅಂಜುದೀವ್‌ ಹಾಗೂ ನೇವಿಯಲ್ಲಿನ ಘಟನೆಗಳಿಗೆ ಗೋವಾ ಪೊಲೀಸರ ಯಾವ ಪಾತ್ರವೂ ಇರುವುದಿಲ್ಲ. ತಮ್ಮ ವ್ಯಾಪ್ತಿಯಲ್ಲೇ ಬಾರದ ಪ್ರದೇಶವೊಂದರಲ್ಲಿ ನಡೆದಿದೆ ಎಂದು ಆರೋಪಿಸಲಾದ ಕಳವು ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಪೊಲೀಸರ ವ್ಯಾಪ್ತಿಯನ್ನು ಧಿಕ್ಕರಿಸಿ, ತನಿಖೆಗೆ ಇಳಿಯುವ ಗೋವಾ ಪೊಲೀಸರ ಪ್ರಯತ್ನ ಭಾರಿ ಕಾನೂನು ಸಮಸ್ಯೆಗೆ ಕಾರಣವಾಗಲಿದೆ.

ಅದಕ್ಕೂ ಮುನ್ನ ಭಾರಿ ಭದ್ರತಾ ಪ್ರದೇಶದಲ್ಲಿ ಈ ಕಲಾಕೃತಿಗಳ ಕಳವಾಗಿದೆ ಎಂದು ಈ ದೂರುದಾರ ವ್ಯಕ್ತಿಗೆ ತಿಳಿದದ್ದು ಹೇಗೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಇತ್ತೀಚಿನ ದಿನಗಳಲ್ಲಿ ಈ ದೂರುದಾರರು ಅಂಜುದೀವ್‌ಗೆ ಹೋಗಿದ್ದರೆ? ಅಲ್ಲಿಗೆ ಹೋಗಿರದಿದ್ದರೆ ಇಂತಹ ದೂರನ್ನು ನೀಡಿದ್ದು ಹೇಗೆ? ಈ ಕಲಾಕೃತಿಗಳು ಕಾಣೆಯಾಗಿದ್ದು ಯಾವಾಗ? ಅಂಜುದೀವ್‌ ಭಾರಿ ಭದ್ರತಾ ಪ್ರದೇಶವಾಗಿದ್ದು ಅಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಹೀಗಾಗಿ ಇಲ್ಲಿನ ಕಲಾಕೃತಿಗಳ ಕಳ್ಳತನ ಮಾಡಿದ್ದು ಯಾರು ಎಂಬ ನೂರಾರು ಪ್ರಶ್ನೆಗಳು ಉದ್ಭವವಾಗಿವೆ. ಸುಮಾರು 300 ರಿಂದ 400 ವರ್ಷಗಳ ಹಿಂದಿನ ಕಲಾಕೃತಿಗಳ (ಪೋರ್ಚುಗೀಸರು ತಂದಿರಿಸಿದ್ದು) ಮೌಲ್ಯ ಹಲವು ಲಕ್ಷ ಬೆಲೆ ಬಾಳಬಹುದು. 2004ರ ನಂತರ ಅಂದರೆ ಸುಮಾರು 15 ವರ್ಷಗಳವರೆಗೆ ಅಂಜುದೀವ್‌ಗೆ ಯಾರನ್ನು ಬಿಟ್ಟಿಲ್ಲ ಎಂದು ಭಾರತೀಯ ನೌಕಾಪಡೆ ಹೇಳಿಕೊಂಡಿದೆ. 2004 ರಲ್ಲಿ ನಡೆದ “ಕಾರವಾರ ಚಲೋ’ ಪ್ರಕರಣದ ನಂತರ ಅಂಜುದೀವ್‌ಗೆ ಪ್ರವೇಶಿಸುವ ವ್ಯಕ್ತಿಗಳನ್ನು ಉತ್ತರಕನ್ನಡ ಜಿಲ್ಲಾಡಳಿತ ಜಲಮಾರ್ಗ ಅಥವಾ ರಸ್ತೆ ಮಾರ್ಗವಾಗಿ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. 15 ವರ್ಷ ಯಾರೂ ಸಾರ್ವಜನಿಕರು ಪ್ರವೇಶಿಸದ ಪ್ರದೇಶದಲ್ಲಿ ಕಳ್ಳತನವಾಗಿದೆ ಎಂದು ದೂರನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಎಂಬುದು ತರ್ಕಕ್ಕೆ ನಿಲುಕದ ವಿಷಯವಾಗಿದೆ.

ಏತನ್ಮಧ್ಯೆ ಗೋವಾ ವಿಧಾನಸಭೆ ಉಪಸ್ಪೀಕರ್‌ ಇಸದೋರ್‌ ಫರ್ನಾಂಡಿಸ್‌ ಗೋವಾ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಗೋವಾದ ಕ್ರೈಸ್ತ ಸಮುದಾಯದವರನ್ನು ಬರುವ ಫೆ.2 ರಂದು ಅಂಜುದೀವ್‌ ನ ಲೇಡಿ ಬೊತ್ರಾಸ್‌ ಚರ್ಚ್‌ಗೆ ಪ್ರವೇಶ ದೊರಕಿಸುವಂತೆ ಕೋರಿದ್ದಾರೆ. ಈ ವಿಷಯವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.