ಮೇಲ್ಸೇತುವೆಯೂ ಇಲ್ಲ -ಚತುಷ್ಪಥವೂ ಇಲ್ಲ!

ಕುಮಟಾ-ಹೊನ್ನಾವರ-ಭಟ್ಕಳ ತಾಲೂಕಿನ ಜನರ ಗೋಳು ಕೇಳುವವರ್ಯಾರು?

Team Udayavani, May 26, 2022, 5:51 PM IST

24

ಹೊನ್ನಾವರ: ದಕ್ಷಿಣ ಕನ್ನಡದ ಚತುಷ್ಪಥದಂತೆ ಉತ್ತರ ಕನ್ನಡದಲ್ಲೂ 60 ಅಡಿ ಚತುಷ್ಪಥವಾಗುತ್ತಿದೆ. ಅಗತ್ಯವಿದ್ದಲ್ಲಿ ಮೇಲ್ಸೇತುವೆ, ಸರ್ವಿಸ್‌ ರಸ್ತೆಗಳಾಗುತ್ತಿವೆ. ಆದರೆ ಓಡಾಡುವುದು ಸುಲಭವಾಗಲಿದೆ ಎಂಬ ಕುಮಟಾ, ಹೊನ್ನಾವರ, ಭಟ್ಕಳ ನಗರದವರ ಕನಸು ಭಗ್ನವಾಗಿದೆ.

60 ಅಡಿ ಚತುಷ್ಪಥವೂ ಇಲ್ಲ, ಮೇಲ್ಸೇತುವೆ ಇಲ್ಲ, ಸರ್ವಿಸ್‌ ರಸ್ತೆಯೂ ಇಲ್ಲ. ಈ ಮಾರ್ಗದಲ್ಲಿ ದಿನಕ್ಕೊಂದು ಅಪಘಾತವಾಗುತ್ತಿದೆ. ಓಡಾಡುವವರು ದುಸ್ವಪ್ನ ಕಾಣುತ್ತಿದ್ದಾರೆ.

ತಮ್ಮತಮ್ಮ ಆಸ್ತಿ ಉಳಿಸಿಕೊಳ್ಳಲು ಕೆಲವರು ಮಾಡಿದ ತಂತ್ರವೋ, ಕುತಂತ್ರವೋ ಯಶಸ್ವಿಯಾಗಿದ್ದು ಕುಮಟಾ ಮಿರ್ಜಾನ್‌, ಹೆಗಡೆ, ಚಂದಾವರ, ಧಾರೇಶ್ವರ, ಹಳದೀಪುರ. ಹೊನ್ನಾವರ-ಬೆಂಗಳೂರು ರಸ್ತೆ, ಕಾಸರಕೋಡು, ಮಂಕಿ, ಮುಡೇìಶ್ವರ, ಶಿರಾಲಿವರೆಗಿನ ಗ್ರಾಮಗಳ ಜನಕ್ಕೆ ಹೆದ್ದಾರಿಗೆ ಬರಲು ಸರ್ವಿಸ್‌ ರಸ್ತೆ ಇಲ್ಲ, ರಾಜ್ಯ ಹೆದ್ದಾರಿಗಳನ್ನು ಜೋಡಿಸುವಲ್ಲಿ ಚತುಷ್ಪಥವೂ ಇಲ್ಲ.

ಕೆಲವು ಕಡೆ 40 ಅಡಿ ಹೆದ್ದಾರಿಗೆ ಮಧ್ಯೆ ಕಾಂಕ್ರೀಟ್‌ ಗೋಡೆ ಡಿವೈಡರ್‌ ಹಾಕಿದ್ದಾರೆ. ಮೇಲಿನ ಬೇಡಿಕೆಗಳನ್ನು ಮುಂದಿಟ್ಟು ತಡವಾಗಿ ಎಚ್ಚೆತ್ತುಕೊಂಡ ಜನ ಪ್ರತಿಭಟನೆ ನಡೆಸಿದರು. ಪತ್ರಿಕೆಗಳಲ್ಲಿ ವರದಿಯಾಯಿತು. ಶಾಸಕರು ಬಂದು ಭರವಸೆ ಕೊಟ್ಟರು. ಸಂಸದರು ಬಂದರು, ರಾಜ್ಯ ಸರ್ಕಾರದಿಂದ ಶಾಸಕರು ಭೂಮಿ ಕೊಡಿಸಿದರೆ ಮೊದಲು ಸರ್ವೇ ಮಾಡಿದಂತೆ 60 ಅಡಿ ಚತುಷ್ಪಥ, ಸರ್ವಿಸ್‌ ರಸ್ತೆ, ಮೇಲ್ಸೇತುವೆಗಳನ್ನು ಕೇಂದ್ರದಿಂದ ಮಂಜೂರು ಮಾಡಿಸಿಕೊಡುವುದಾಗಿ ಹೇಳಿದರು. ಯಾವ ಕೆಲಸವೂ ಆಗಲಿಲ್ಲ. ಮಳೆಗಾಲ ಬಂದಿದೆ.

ಯಾವುದೋ ರಾಜಕಾರಣಿಗೆ ಬೇಜಾರಾಗುತ್ತದೆ ಎಂದು ಸತ್ಯವನ್ನು ಬಚ್ಚಿಡುವ ಹೋರಾಟಗಾರರು ಯಾರ ಮೇಲೂ ಒತ್ತಡ ಹೇರಲಾರದಷ್ಟು ದುರ್ಬಲರು. ಒಕ್ಕಟ್ಟಿಲ್ಲದ ಹೋರಾಟದಿಂದ ಬೆಚ್ಚಿಬೀಳುವ ಸತ್ಯವನ್ನು ಬಿಚ್ಚಿಡಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ ಎಲ್ಲೂ ಇಲ್ಲದಂತಹ ಅರೆಬರೆ ಕಾಮಗಾರಿಯಾದ ಕುಮಟಾ-ಹೊನ್ನಾವರ-ಭಟ್ಕಳ ಮಧ್ಯೆಯ ಚತುಷ್ಪಥದ ಹೋರಾಟಕ್ಕೂ ಮೊದಲ ಮಳೆಯಲ್ಲಿ ಥಂಡಿಯಾದಂತಿದೆ.

ಇತ್ತೀಚೆ ಅತ್ಯಂತ ಪ್ರಮುಖವಾದ ಹೊನ್ನಾವರ ಪ್ರಭಾತ ಸರ್ಕಲ್‌ ಬಳಿ ಚರಂಡಿ ನಿರ್ಮಿಸ ಹೊರಟಾಗ ಜನ ತಡೆದರು. ಗುತ್ತಿಗೆದಾರರು ಕೆಲಸವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಹಳದೀಪುರದಲ್ಲಿ ವಾರಕ್ಕೊಂದು ಅಪಘಾತವಾಗುತ್ತಿದ್ದು ಜನ ಆಗಾಗ ಪ್ರತಿಭಟಿಸುತ್ತಿದ್ದಾರೆ. ಮೂರು ತಾಲೂಕುಗಳ ಹೋರಾಟ ಸಮಿತಿ ಒಟ್ಟಾಗಿ ಚತುಷ್ಪಥವನ್ನು ಚುನಾವಣೆ ವಿಷಯವನ್ನಾಗಿಟ್ಟು ಸತತ ಹೋರಾಡದಿದ್ದರೆ ಕೇಂದ್ರ ಸರ್ಕಾರದ ಮತ್ತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿಕೊಡಲು ಯಶಸ್ವಿಯಾಗದಿದ್ದರೆ ಚತುಷ್ಪಥ ಎಂಬುದು ದುಸ್ವಪ್ನವಾಗಿಯೇ ಉಳಿಯಲಿದೆ. –ಜೀಯು

ಟಾಪ್ ನ್ಯೂಸ್

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.