ನ್ಯಾಯಾಲಯದ ಮೆಟ್ಟಿಲೇರಿದ ಪಟ್ಟಣ ಪಂಚಾಯಿತಿ ಮೀಸಲಾತಿ

ಈಗಲೇ ಹೀಗಾದರೆ ಪಟ್ಟಣದ ಉದ್ಧಾರ ಹೇಗೆ? ಜನರ ಅನುಮಾನ

Team Udayavani, Oct 18, 2020, 4:04 PM IST

uk-tdy-1

ಹೊನ್ನಾವರ: ಬಿಜೆಪಿ ಅಭ್ಯರ್ಥಿಗಳು, ಬೆಂಬಲಿಗರು ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಜಯಗಳಿಸಿದ್ದರೂ ಮೀಸಲಾತಿ ಪ್ರಕಟವಾದ ಮೇಲೆ ಕೆಲವು ಅತೃಪ್ತ ಇದನ್ನುಪ್ರಶ್ನಿಸಿ ಉಚ್ಚ ನ್ಯಾಯಾಲದ ಮೆಟ್ಟಿಲೇರಿದ್ದಾರೆ.

ಸೋಮವಾರ, ಮಂಗಳವಾರದವರೆಗೆ ವಿಚಾರಣೆಗೆ ಬರಬಹುದಾಗಿದ್ದು ಈ ಮಧ್ಯೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆಅ.22 ನಿಗದಿಪಡಿಸಿ ಚುನಾವಣಾಧಿಕಾರಿ ತಹಶೀಲ್ದಾರ್‌ ವಿವೇಕ ಶೇಣ್ವಿ ನೋಟಿಸ್‌ ಮುಟ್ಟಿಸಿದ್ದಾರೆ. ಚುನಾವಣಾ ದಿನಾಂಕ ನಿಗದಿಯಾದ ಕಾರಣ ನ್ಯಾಯಾಲಯ ತಡೆಯಾಜ್ಞೆ ಕೊಡದಿದ್ದರೆ ಮೀಸಲಾತಿಯಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ತಡೆಯಾಜ್ಞೆ ಕೊಟ್ಟರೆ ಒಂದೂವರೆವರ್ಷದ ನಂತರ ನಡೆಯಬೇಕಾಗಿದ್ದ ಆಯ್ಕೆ ಇನ್ನಷ್ಟು ವಿಳಂಬವಾಗಲಿದೆ.

ರಿಕ್ಷಾ ಯೂನಿಯನ್‌ ಅಧ್ಯಕ್ಷರೂ, ಮದ್ಯವರ್ಜನ ಸಂಘಟನೆಸದಸ್ಯರೂ ಆಗಿರುವ ಶಿವರಾಜ ಮೇಸ್ತ ತಮ್ಮ ನೇತೃತ್ವದಸಂಘಟನೆಗಳನ್ನು ತೃಪ್ತಿಕರವಾಗಿ ನಡೆಸಿದ್ದಾರೆ. ಇವರ ಕುರಿತು ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇನ್ನೊಬ್ಬಆಕಾಂಕ್ಷಿ ವಿಜಯ್‌ ಕಾಮತ್‌ ಆಗಿದ್ದರು, ಮೀಸಲಾತಿಯಿಂದ ಇವರಿಗೆ ಅವಕಾಶ ತಪ್ಪಿದೆ. ಪಕ್ಷೇತರವಾಗಿ ಆಯ್ಕೆಯಾದಇವರ ಅತ್ತೆ ತಾರಾ ಕುಮಾರಸ್ವಾಮಿ ನ್ಯಾಯಾಲಯಕ್ಕೆಹೋಗಿದ್ದಾರೆ. ಅಂದ ಮೇಲೆ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಹೇಳಬೇಕಾಗಿಲ್ಲ.

ಒಂದು ಪಕ್ಷದ ಬಹುಮತ ಬಂದು ಮೀಸಲಾತಿಯನ್ನು ಅದೇ ಪಕ್ಷದ ಸರ್ಕಾರ ಪ್ರಕಟಿಸಿದ ಮೇಲೆ ಅದರ ವಿರುದ್ಧ ಸ್ವರ ಎತ್ತುವುದು ಪಕ್ಷವಿರೋಧಿ ಚಟುವಟಿಕೆಯಾಗುತ್ತದೆ. ಶಿಸ್ತಿನ ಪಕ್ಷ ಬಿಜೆಪಿ ಅಧ್ಯಕ್ಷರೂ, ಶಾಸಕರೂ ಇಲ್ಲಿಮೌನವಾಗಿದ್ದಾರೆ. ಮೀಸಲಾತಿ ಬರುವ ಮೊದಲು ಪೈಪೋಟಿ ಸರಿ. ಬಂದ ಮೇಲೆ ಆ ಪ್ರಕಾರ ವಿಪ್‌ ಹೊರಡಿಸಬೇಕಾದದ್ದು ಪಕ್ಷದ ಕರ್ತವ್ಯವಾಗಿತ್ತು. ಈ ಒಳರಾಜಕೀಯವನ್ನುಹಿಂದುಳಿದ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ತಪ್ಪಿಸುವ ಪಿತೂರಿ ಇದೆ ಎಂದು ಶಿವರಾಜ ಮೇಸ್ತ ಬಹಿರಂಗ ಹೇಳಿಕೆ ನೀಡಿದ್ದಾರೆ.

ದಿ|ಡಾ| ವಿಕೆಬಿ ಬಳಕೂರ, ಡಾ| ಎಂ.ಪಿ. ಕರ್ಕಿ, ಹಿರಿಯನ್ಯಾಯವಾದಿ ದಿನಕರ ಕಾಮತ ಮೊದಲಾದವರು ಪಪಂಅಧ್ಯಕ್ಷರಾಗಿದ್ದಾಗ ರಾಜ್ಯದಲ್ಲಿ ಹೊನ್ನಾವರಕ್ಕೆ ಒಳ್ಳೆಯ ಹೆಸರಿತ್ತು. ಇವರ ಕಾಲದ ಸಭೆಗಳಲ್ಲಿ ಭಾಗವಹಿಸುತ್ತಿರುವವರು ಹೇಳುವಂತೆ ಜಗಳ, ವಿವಾದ ಇರಲಿಲ್ಲ, ಎಲ್ಲಿ ಯಾವ ಕೆಲಸ ಆಗಬೇಕು, ಒಟ್ಟಾಗಿ ಮಾಡಿಸುತ್ತಿದ್ದರು. ಭ್ರಷ್ಟಾಚಾರದ ವಾಸನೆಯೂ ಇರಲಿಲ್ಲ. ಒಂದೂವರೆ ದಶಕಗಳಿಂದ ಪಕ್ಷ, ಜಾತಿ, ರಾಜಕೀಯ ಮಾತ್ರವಲ್ಲ ಪಕ್ಷದೊಳಗೇ ಒಳಜಗಳ, ಪರ್ಸಂಟೇಜ್‌ ರಾಜಕೀಯ ಗುಂಪುಗಾರಿಕೆಯಿಂದ ಪಪಂ ರಣಾಂಗಣವಾಗಿ ಅಬ್ಬರದಲ್ಲೇ ಕಳೆದು ಹೋಗುತ್ತಿತ್ತು. ಪತ್ರಕರ್ತರು ಹೋದ ಕೂಡಲೇ ಸದಸ್ಯರೂ ಎದ್ದುನಡೆಯುತ್ತಿದ್ದರು. ಠರಾವು ಬರೆಯುವವರೆಗೆ ಇರುವ ಸಹನೆ ಇರಲಿಲ್ಲ. ನಂತರ ಮೀಟಿಂಗ್‌ನಲ್ಲಿ ಹಿಂದಿನ ಮೀಟಿಂಗ್‌ ಠರಾವು ಓದಿ ಹೇಳುವಾಗಲೇ ಗದ್ದಲ ಆರಂಭವಾಗುತ್ತಿತ್ತು. ಮುಖ್ಯಾಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಅಥವಾ ಹೆದರಿಸಿ ಪ.ಪಂ ಆಡಳಿತನಡೆಸಲಾಗುತ್ತಿತ್ತು. ನಗರ ನಾರಿದರೂ, ಸಂಚಾರ ದಿಕ್ಕೆಟ್ಟರೂ ಮೂಲಭೂತ ಸೌಲಭ್ಯದ ಕೊರತೆಯಿದ್ದರೂ ಕೇಳುವವರಿರಲಿಲ್ಲ.

ಈ ಕೆಟ್ಟ ಸಂಪ್ರದಾಯವನ್ನು ಮೀರಿಸುವಂತೆ ಅಧ್ಯಕ್ಷರ ಆಯ್ಕೆ ಮೀಸಲಾತಿ ನೆಪದಲ್ಲಿ ಒಳಜಗಳ ತಾರಕಕ್ಕೇರಿದೆ. ತೀರ್ಪು ಏನೇ ಬಂದರೂ ಹೊರಗೆ ನಡೆಯುತ್ತಿರುವ ಒಳಜಗಳ ಸಭಾಂಗಣಕ್ಕೂ ಬರಲಿದೆ. ಈಗಲೇ ಹೀಗಾದರೆ ಇವರು ಏನು ಮಾಡಬಹುದು ಎಂದು ಜನ ಪ್ರಶ್ನಿಸುತ್ತಿದ್ದಾರೆ.

 

-ಜೀಯು, ಹೊನ್ನಾವರ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.