ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಅವಕಾಶದ ಬಾಗಿಲು


Team Udayavani, Sep 7, 2021, 12:04 PM IST

7-2

ದಾಂಡೇಲಿ: ಸೋಲರಿಯದ ಮುತ್ಸದ್ದಿ ರಾಜಕಾರಣಿ ಆರ್.ವಿ.ದೇಶಪಾಂಡೆಯವರಿಗೆ ಒಮ್ಮೆ ಸೋಲಿನರುಚಿ ತೋರಿಸುವ ಮೂಲಕ ರಾಜ್ಯ ರಾಜಕಾರಣದ ಚಿತ್ತ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಕಡೆಗೆ ಹರಿಸುವಂತೆ ಮಾಡಿದ ಮಾಜಿ ಶಾಸಕರು ಹಾಗೂ ಪ್ರಸಕ್ತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಸುನೀಲ ಹೆಗಡೆಯವರಿಗೆ ಇದೀಗ ಬಸವರಾಜ ಬೊಮ್ಮಯಿ ಸಾರಥ್ಯದ ರಾಜ್ಯ ಸರಕಾರದ ನಿಗಮ ಮಂಡಳಿಯಲ್ಲಿ ಬಹುದೊಡ್ಡ ಅವಕಾಶ ಒಲಿದು ಬರುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆಂದು ಇದು ಕ್ಷೇತ್ರದಲ್ಲಿ ಮುಖಂಡರಾದಿಯಾಗಿ, ಕಾರ್ಯಕರ್ತರಲ್ಲಿಯೂ ಬಹು ಚರ್ಚೆಯ ವಿಷಯವಾಗಿದೆ.

ಹಾಗೆ ನೋಡಿದರೇ, ಒಮ್ಮೆ ಶಾಸಕರಾಗಿ ಅನುಭವವನ್ನು ಹೊಂದಿರುವ ಹಾಗೂ ಬಿಜೆಪಿಯ ಪ್ರಮುಖ ನಾಯಕರ ಜೊತೆ ಆತ್ಮೀಯ ಓಡನಾಟವಿರುವ ಕಾರಣದಿಂದ ನಿಗಮ ಮಂಡಳಿಯಲ್ಲಿ ಸುನೀಲ ಹೆಗಡೆಯವರಿಗೆ ಅದೃಷ್ಟ ಖುಲಾಯಿಸಬಹುದಾಗಿದೆ.  ಇನ್ನೂ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಬಹಳ ಹತ್ತಿರದ ಓಡನಾಡಿಯೆಂದೆ ಹೇಳಬಹುದಾದ ಸುನೀಲ ಹೆಗಡೆಯವರ ಮೇಲೆ ಪ್ರಹ್ಲಾದ್ ಜೋಶಿಯವರ ಪ್ರೀತಿಯು ಇದೆ. ಇತ್ತ ಬಸವರಾಜ ಬೊಮ್ಮಯಿಯವರಿಗೂ ಸುನೀಲ ಹೆಗಡೆಯವರು ಹತ್ತಿರವಾಗಿಯೆ ಇರುವುದು ನೋಡಿದರೇ ಹಾಗೂ ಮಗದೊಮ್ಮೆ ಕಾಂಗ್ರೆಸ್ಸಿನ ಆರ್.ವಿ.ದೇಶಪಾಂಡೆಯವರನ್ನು ಮಣಿಸಲು ಸುನೀಲ ಹೆಗಡೆಯವರಲ್ಲಿ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಬಾರಿ ನಿಗಮ ಮಂಡಳಿಯಲ್ಲೊಂದು ಬಹುದೊಡ್ಡ ಅವಕಾಶ ನೀಡಬಹುದಾದ ಸಾಧ್ಯತೆ ಕಂಡುಬರುತ್ತಿದೆ.

ಇದನ್ನೂ ಓದಿ : ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಿದ ತಾಲಿಬಾನ್

ಸುನೀಲ ಹೆಗಡೆಯವರು ಏನು ಮಾಡಿದ್ದಾರೆ ಎನ್ನುವುದಕ್ಕಿಂತ ಜನಸಾಮಾನ್ಯರಲ್ಲಿ ಜನಸಾಮಾನ್ಯರಂತೆ ಸರಳತೆಯನ್ನು ಮೈಗೂಡಿಸಿಕೊಂಡ ಜನನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ರಾಜಧಾನಿಯಲ್ಲಿ ನಾಯಕನಾಗದೇ, ಕ್ಷೇತ್ರದ ಜನತೆಯ ನಾಯಕನಾಗಿರುವುದು ಸುನೀಲ ಹೆಗಡೆಯವರಿಗೆ ಪ್ಲಸ್ ಪಾಯಿಂಟ್. ರಾಜಕೀಯದಲ್ಲಿ ಏನು ಆಗಬಹುದು. ಹಾವು ಮುಂಗುಸಿಯಂತಿದ್ದವರು ಕೈ ಕೈ ಕೂಡಿಸಿ ಸ್ನೇಹ ಬೆಳೆಸಿ ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ-ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ನಮ್ಮದಾಗಿರುವಾಗ, ಕ್ಷೇತ್ರದಲ್ಲಿಯೂ ಹಾವು ಮುಂಗುಸಿಯಂತಿರುವ ಘೋಟ್ನೇಕರ ಮತ್ತು ಸುನೀಲ ಹೆಗಡೆಯವರು ಒಂದಾದರೇ ಕ್ಷೇತ್ರವನ್ನು ಬೇರೊಬ್ಬರು ಆಳುವುದುಂಟೆ ಎಂಬ ಮಾತು ಕುತೂಹಲಕರ ರೀತಿಯಲ್ಲಿ ಚರ್ಚೆಯಲ್ಲಿರುವುದಂತು ಸತ್ಯ. ಇವರಿಗೆ ಇನ್ನೂ ವಯಸ್ಸು ಇರುವುದರಿಂದ ಅವರಿವರ ವಯಸ್ಸು ನೋಡಿ ಈ ಭಾರಿ ಅವರಿಗೆ ಅವಕಾಶ ಕೊಟ್ಟು ಮುಂದಿನ ಬಾರಿಗೆ ಇವರಿಗೆ ಅವಕಾಶ ಕೊಡುವ ವಾಗ್ದಾನದ ಜೊತೆ ಉತ್ತಮ ಹುದ್ದೆಯನ್ನು ದಯಾಪಾಲಿಸಿದ್ದಲ್ಲಿ ಏನು ಆಗಬಹುದು? ಯಾಕೆಂದ್ರೆ ಜ್ಯೋತಿಷ್ಯರಿಗೂ ಹಾಗೂ ರಾಜಕೀಯ ವಿಶ್ಲೇಷಕರಿಗೂ ಹೇಳಲಾರದ ಸಂಗತಿಗಳಿಗೆ ಕಾರಣವಾಗುತ್ತಿರುವ ಹಾಗೂ ಮರುಭೂಮಿಯಲ್ಲಿ ಜಲಾಧಾರೆಯನ್ನು ಸೃಷ್ಟಿಸುವಂತಹ ಕನಸನ್ನು ಬಿತ್ತುವ ರಾಜಕೀಯದಲ್ಲಿ ಏನು ಆಗಬಹುದು.

ಈ ಎಲ್ಲ ಸಾಧ್ಯತೆಗಳ ನಡುವೆ ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಬಹುದೊಡ್ಡ ಅವಕಾಶ ಅರಸಿ ಬಂದರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿಬರತೊಡಗಿದೆ.

ಇದನ್ನೂ ಓದಿ : Increase testing in areas with high Covid-19 cases: Min Angara

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.