ಸೊರಗುತ್ತಿದ್ದಾಳೆ ಶರಾವತಿ-ಮುಂದೇನು?

•ಬೇಸಿಗೆಯಲ್ಲಿ ಪ್ರವಾಹದಿಂದ ಅಲ್ಲಲ್ಲಿ ಭಗ್ನವಾಗಿದೆ•ಒರತೆ ಸೇರಿ ಹಾಗೋ ಹೀಗೋ ಸಾಗಿದೆ

Team Udayavani, May 28, 2019, 7:28 AM IST

uk-tdy-2..

ಹೊನ್ನಾವರ: ಶಿವಮೊಗ್ಗಾ ಜಿಲ್ಲೆಯ ಅಂಬುತೀರ್ಥದಲ್ಲಿ ರಾಮನ ಬಾಣಕ್ಕೆ ಜನಿಸಿದ ತಾಯಿ ಶರಾವತಿ 130ಕಿಮೀ ಚಲಿಸಿ ಹೊನ್ನಾವರದಲ್ಲಿ ಸಮುದ್ರ ಸೇರುವ ಮಾರ್ಗದಲ್ಲಿ ವಿದ್ಯುತ್‌, ಜಲಪಾತ, ಲಕ್ಷಾಂತರ ಎಕರೆಗೆ ನೀರುಣ್ಣಿಸುತ್ತ ಬಂದಿದ್ದಾಳೆ. ಈ ಬೇಸಿಗೆಯಲ್ಲಿ ಶರಾವತಿಯ ಪ್ರವಾಹ ಅಲ್ಲಲ್ಲಿ ಭಗ್ನವಾಗಿದೆ. ಸ್ಥಳೀಯ ಒರತೆಗಳನ್ನು ಸೇರಿಕೊಂಡು ಹಾಗೋ ಹೀಗೋ ತೆವಳಿಕೊಂಡು ಸಾಗಿದೆ. ಮುಂದೇನು?

ರಾಜ್ಯದ ಜಲ ವಿದ್ಯುತ್ತಿನಲ್ಲಿ ಶೇ. 30ರಷ್ಟನ್ನು ಅತೀ ಅಗ್ಗದಲ್ಲಿ ಯುನಿಟ್‌ಗೆ 20 ಪೈಸೆಯಂತೆ ಒದಗಿಸುವ, ಜೋಗ ಜಲಪಾತ ಸೃಷ್ಠಿಸಿರುವ ಶರಾವತಿಯ ಪ್ರವಾಹ ಸೊರಗಿದೆ. ಈವರೆಗೆ ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಭರ್ಜರಿ ಮಳೆ ಬಂದು ಹಲವು ಬಾರಿ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಟೇಲರೀಸ್‌ ಅಣೆಕಟ್ಟಿನ ಮುಖಾಂತರ ನೀರು ಬಿಡಲಾಗಿತ್ತು. ಶರಾವತಿ ಪಾತಳಿ ಮೀರಿ ಗದ್ದೆ, ಮನೆ, ತೋಟವನ್ನು ಆವರಿಸಿತ್ತು. ಈಗ ಲಿಂಗನಮಕ್ಕಿಯಲ್ಲಿ ನೀರು ಸಾಕಷ್ಟಿದೆ. ವಿದ್ಯುತ್‌ ಉತ್ಪಾದಿಸಿ ಬಿಟ್ಟ ನೀರು ಟೇಲರೀಸ್‌ ಅಣೆಕಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ರಾಜ್ಯದ ವಿದ್ಯುತ್‌ ಬೇಡಿಕೆಯನ್ನು ಆಧರಿಸಿ ಟೇಲರೀಸ್‌ನಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದ ಜಲಮಟ್ಟ 51.6ಅಡಿ ಇದೆ. ಎಲ್ಲ ಜನರೇಟರ್‌ಗಳನ್ನು ಆರಂಭಿಸಿದರೆ 5500 ಕ್ಯುಸೆಕ್‌ ನೀರು ಹೊರಬರುತ್ತದೆ. ಆ ನೀರು ಈಗ ಗೇರಸೊಪ್ಪಾ ಭಾಗದ ಜೀವಜಲ. ಎಲ್ಲ ಜನರೇಟರ್‌ ಆರಂಭಿಸಿ, ಗೇಟ್ ತೆರೆದು ನೀರು ಬಿಟ್ಟಾಗ ಸೇತುವೆಯ ಮೇಲಿಂದ ನೀರು ಹರಿದು ಹೋಗುತ್ತಿತ್ತು. ಈಗ ಸೇತುವೆಯ ಅಡಿ ಜುಳುಜುಳು ಹರಿಯುತ್ತಿದೆ. ನದಿಯ ಪಾತಳಿಯ ತಗ್ಗು ಪ್ರದೇಶದಲ್ಲಿ ದನ ಮೇಯುತ್ತಿದೆ. ಎಡಬಲ ದಂಡೆಯ ಮಾತ್ರವಲ್ಲ ಒಳಭಾಗದ ಅಂತರ್ಜಲವನ್ನು ಹೆಚ್ಚಿಸಲು ನಿಧಾನವಾಗಿ 35ಕಿಮೀ ಕೊಳ್ಳದಲ್ಲಿ ಸಾಗುತ್ತಿದ್ದ ಶರಾವತಿ ಸೊರಗಿದ ಕಾರಣ ತಾಲೂಕಿನ ಹಳ್ಳಗಳು ಮಾತ್ರವಲ್ಲ ಬಾವಿಗಳು ತಳ ಕಂಡಿವೆ.

ನಿರಂತರ ಅರಣ್ಯ ನಾಶ, ನೀರಿನ ದುರ್ಬಳಕೆ, ಕೊಳವೆ ಬಾವಿಗಳ ಹಾವಳಿ ಪ್ರಕೃತಿಯಲ್ಲಿ ಅಸಮತೋಲನ ಉಂಟುಮಾಡಿದೆ. ಅಣೆಕಟ್ಟಿನ ತಗ್ಗು ಪ್ರದೇಶದಲ್ಲಿ ಇಷ್ಟು ಕಡಿಮೆ ನೀರು ಇದ್ದರೆ ಗೇರುಸೊಪ್ಪಾದಿಂದ ಹೊನ್ನಾವರಕ್ಕೆ ಬರುವ 300ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ನೀರಿನ ಯೋಜನೆ ಗತಿಯೇನು? ಅಣೆಕಟ್ಟಿನಿಂದಲೇ ಬೆಂಗಳೂರಿಗೆ ಕುಡಿಯುವ ನೀರು ಒಯ್ಯುವ ಯೋಜನೆ ಜಾರಿಗೆ ಬಂದರೆ ಏನಾದೀತು? ಬಹುಕಾಲ ನಿರ್ಲಕ್ಷಿಸಿ ರೋಗ ಉಲ್ಭಣವಾಗಿದೆ ಅನ್ನುವಾಗ ಸರಿಯಾಗಲು ಬಹುಕಾಲ ಚಿಕಿತ್ಸೆ ಬೇಕು. ಶರಾವತಿ ಮತ್ತೆ ಸುಧಾರಿಸಬಹುದೇ?

ಪ್ರಸ್ತುತ ಲಿಂಗನಮಕ್ಕಿಯಲ್ಲಿ ನೀರು ಸಾಕಷ್ಟಿದೆ. ವಿದ್ಯುತ್‌ ಉತ್ಪಾದಿಸಿ ಬಿಟ್ಟ ನೀರು ಟೇಲರೀಸ್‌ ಅಣೆಕಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ರಾಜ್ಯದ ವಿದ್ಯುತ್‌ ಬೇಡಿಕೆಯನ್ನು ಆಧರಿಸಿ ಟೇಲರೀಸ್‌ನಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದ ಜಲಮಟ್ಟ 51.6ಅಡಿ ಇದೆ.
•ಜೀಯು, ಹೊನ್ನಾವರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.