ಮನೆಗಳಿಗೆ ನುಗ್ಗಿದ ನೀರು

•ಸಮಸ್ಯೆ ಪರಿಹಾರಕ್ಕೆ ಜನರ ಮನವಿ •ಜಲಾವೃತ ಪ್ರದೇಶಕ್ಕೆ ಪೌರಾಯುಕ್ತ ಯೋಗೇಶ್ವರ ಭೇಟಿ

Team Udayavani, Jul 16, 2019, 10:51 AM IST

uk-tdy-1..

ಕಾರವಾರ: ಮನೆಯ ಹೊರ ಭಾಗದಲ್ಲಿ ಮಳೆ ನೀರು.

ಕಾರವಾರ: ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ದಿನವಿಡಿ ಸುರಿದ ಭಾರೀ ಮಳೆಗೆ ನಗರದ ವಿವಿಧ ವಾರ್ಡ್‌ಗಳ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು.

ಪದ್ಮನಾಭ ನಗರ, ಮಹಾದೇವ ನಗರ, ನ್ಯೂ ಕೆಎಚ್ಬಿ ಕಾಲೊನಿ, ಗಿಡ್ಡಾರಸ್ತೆಯ ಅಡ್ಡ ರಸ್ತೆಗಳ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಅನಾಹುತ ಉಂಟುಮಾಡಿತು. ಮಳೆ ಬಿಟ್ಟು ಬಿಟ್ಟು ರಭಸವಾಗಿ ಸುರಿಯುತ್ತಿದೆ. ಮಳೆ ನೀರು ಹರಿಯಲು ಸ್ಥಳವಿಲ್ಲದೇ ರಸ್ತೆಗಳಲ್ಲಿ ನಿಂತಿದೆ.

ಸಮುದ್ರ ಮಟ್ಟದಿಂದ 2 ಅಡಿ ತಗ್ಗಿನಲ್ಲಿರುವ ಕಾರವಾರ ಮಳೆ ಹೆಚ್ಚಾದರೆ ತೀವ್ರ ತೊಂದರೆ ಅನುಭವಿಸುತ್ತದೆ. ದಶಕಗಳ ಹಿಂದೆ ಕಂಡ ಮಳೆ ಈಗ ಮರುಕಳಿಸಿದ್ದು, ಸಹ್ಯಾದ್ರಿ ಪರ್ವತಗಳು ಮೋಡ ಮತ್ತು ಮಂಜಿನಿಂದ ತುಂಬಿಹೋಗಿವೆ. ಸೂರ್ಯನ ದರ್ಶನ ಎಂಬುದೇ ಇಲ್ಲವಾಗಿದೆ. ಪಶ್ಚಿಮಘಟ್ಟಗಳಲ್ಲಿ ಮೋಡಗಳ ಆಟ ಚೆಲುವಾಗಿ ನಡೆದಿದೆ. ಮಳೆಯನ್ನು ರೈತರು ಎಂಜಾಯ್‌ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆ ವೇಗವಾಗಿ ನಡೆದಿವೆ.

ಅಪಾರ್ಟಮೆಂಟ್‌ಗಳಿಗೆ ಅನುಮತಿ ನಿಲ್ಲಲಿ;

ನಗರದಲ್ಲಿ ಮಳೆ ನೀರು ಹರಿವ ಸಮಸ್ಯೆಗೆ ಅಪಾರ್ಟಮೆಂಟ್ ಸಂಸ್ಕೃತಿ ಕಾರಣ. ನಗರಸಭೆ ಅಪಾರ್ಟಮೆಂಟ್ ಕಟ್ಟದಂತೆ ಠಾರವು ಮಾಡಲಿ. ಈಗಾಗಲೇ ನಗರದಲ್ಲಿ 49 ಅಪಾರ್ಟಮೆಂಟ್‌ಗಳಿವೆ. ಇನ್ನು ಅಪಾರ್ಟಮೆಂಟ್ ನಿರ್ಮಿಸುತ್ತಾ ಹೋದರೆ ಕಾರವಾರ ಬಹುದೊಡ್ಡ ಸಮಸ್ಯೆ ಎದುರಿಸಲಿದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ.

ನಗರಸಭೆ ಚುನಾವಣೆ ನಡೆದು ಸಹ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿಲ್ಲ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಸಂಗತಿ ಕೋರ್ಟ್‌ನಲ್ಲಿದ್ದು, ಜನಪ್ರತಿನಿಧಿಗಳು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಕಾರಣ ಸಿಕ್ಕಿದೆ. ಅಧಿಕಾರಿಗಳು ಅಸಹಾಯಕರಾಗಿದ್ದು, ಅವರು ಮೇಲಿನ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಪಾರ್ಟಮೆಂಟ್‌ಗಳಿಗೆ ಕಾನೂನು ಮೀರಿ ಅನುಮತಿ ನೀಡುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರತೊಡಗಿದೆ. ಕೊಳಚೆ ನೀರು ನಿರ್ವಹಣೆ ಮತ್ತು ಮಳೆ ನೀರು ಸಮಸ್ಯೆ ನಿವಾರಣೆಗೆ ನಗರದಲ್ಲಿ ಇನ್ನು ಮುಂದಾದರು ಅಪಾರ್ಟಮೆಂಟ್‌ಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂಬ ಮಾತು ಕೇಳಿ ಬಂದಿದೆ.

ಕಾಲುವೆ ನಿರ್ಮಾಣಕ್ಕೆ ಜನ ಸಹಕರಿಸಬೇಕು: ಕಾರವಾರದಲ್ಲಿ ಚರಂಡಿ ನಿರ್ಮಾಣಕ್ಕೆ ಸಹ ಜಾಗ ಬಿಡದೇ ಕಂಪೌಂಡ್‌ ನಿರ್ಮಿಸಿಕೊಳ್ಳಲಾಗಿದೆ. ರಸ್ತೆ ಪಕ್ಕ ಚರಂಡಿ ನಿರ್ಮಾಣಕ್ಕೆ ಅವಕಾಶವನ್ನು ಕೆಲವು ಕಡೆ ಸ್ಥಳೀಯರು ಬಿಟ್ಟಿಲ್ಲ. ಚರಂಡಿ ನಿರ್ಮಾಣಕ್ಕೆ ಜನ ಸಹಕರಿಸಿದರೆ ಮಳೆ ನೀರು ನಿರ್ವಹಣೆ ಸಾಧ್ಯ. ಮಳೆ ನೀರು ಮನೆ ನುಗ್ಗದಂತೆ ಮತ್ತು ರಸ್ತೆ ಮೇಲೆ ನಿಲ್ಲದಂತೆ ಮಾಡಲು ಅವಕಾಶವಿದೆ. ಚರಂಡಿ ನಿರ್ಮಾಣಕ್ಕೆ ಜನ ಸಹಕರಿಸಬೇಕು ಎಂದು ನಗರಸಭೆ ಸಿಬ್ಬಂದಿ ಹೇಳುತ್ತಿದ್ದಾರೆ.

ಮಳೆ ಪ್ರಮಾಣ ಹೆಚ್ಚಾದಾಗ ನೀರು ಸಹಜವಾಗಿ ಮನೆಗಳಿಗೆ ನುಗ್ಗುತ್ತದೆ. ಇದಕ್ಕೆ ಕಾರಣ ಕಾರವಾರ ನಗರ ಸಮುದ್ರ ಮಟ್ಟದಿಂದ ಕೆಳ ಹಂತದಲ್ಲಿರುವುದು. ಸಾರ್ವಜನಿಕರು ಮನೆ ನಿರ್ಮಿಸುವಾಗ ನೆಲಗಟ್ಟನ್ನು ನಾಲ್ಕು ಅಡಿ ಎತ್ತರ ಇಟ್ಟು ನಿರ್ಮಿಸಿಕೊಳ್ಳಬೇಕಾಗಿದೆ ಎಂಬುದು ಎಂಜಿನಿಯರ್‌ಗಳ ಸಲಹೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು: ಪದ್ಮನಾಭನಗರ ಮತ್ತು ಗಿಡ್ಡಾ ರಸ್ತೆ ಹಾಗೂ ಮಹಾದೇವ ನಗರಗಳಿಗೆ ನಗರಸಭೆ ಪೌರಾಯುಕ್ತ ಎಸ್‌.ಯೋಗೇಶ್ವರ ಖುದ್ದಾಗಿ ಭೇಟಿ ನೀಡಿ, ಮಳೆ ನೀರಿನಲ್ಲಿ ಅಡ್ಡಾಡಿದರು. ಪೌರಕಾರ್ಮಿಕರ ನೆರವಿನಿಂದ ಮಳೆ ನೀರು ಹರಿಯಲು ಅಡಚಣೆಯಾದ ಸ್ಥಳಗಳನ್ನು ಬಿಡಿಸಿಕೊಟ್ಟರು. ಎಂಜಿನಿಯರ್‌ ಮೋಹನ್‌ ರಾಜ ಜತೆ ಇದ್ದರು.

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.