ಮಂಗಳೂರಿಗೆ ನೀರು ಪೂರೈಸಲು ಶಂಭೂರಿನಿಂದ ತುಂಬೆಗೆ ನೀರು
ತುಂಬೆ ಡ್ಯಾಂನಲ್ಲಿ 6 ಮೀ. ಏರಿಕೆ | ಎಎಂಆರ್ ಡ್ಯಾಂನಲ್ಲಿ 4 ಮೀ.ಗೆ ಇಳಿಕೆ
Team Udayavani, Mar 24, 2019, 12:27 PM IST
ಬಂಟ್ವಾಳ: ಸುಮಾರು 60 ದಿನಗಳ ಕಾಲ ಮಂಗಳೂರು ನಗರಕ್ಕೆ ನೀರು ಪೂರೈಸುವ ಸಲುವಾಗಿ ತುಂಬೆ ಆಣೆಕಟ್ಟಿಗೆ ಶಂಭೂರು ಎಎಂಆರ್ ಅಣೆಕಟ್ಟಿನಿಂದ ನೀರು ಹರಿಸಲಾಗಿದೆ.
ನೇತ್ರಾವತಿ ನದಿಯ ಒಳಹರಿವು ಕುಸಿತದ ಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟಿನಲ್ಲೂ ನೀರಿನ ಸಂಗ್ರಹ ಪ್ರಮಾಣ ಐದು ಮೀಟರ್ಗೆ ಕುಸಿದಿತ್ತು. ಶಂಭೂರು ಡ್ಯಾಂನಿಂದ ನೀರಿ ಹರಿಸಿದ ಪರಿಣಾಮ ಶನಿವಾರ ಮುಂಜಾನೆ 6 ಮೀಟರ್ಗೆ ಏರಿಕೆಯಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಮಾ. 21ರಂದು ಸಂಜೆ 6 ಗಂಟೆಗೆ ಅಣೆಕಟ್ಟಿನ ಒಂದು ಬಾಗಿಲನ್ನು ತೆರೆದು ನೀರು ಹರಿಸಲಾಗಿದ್ದು, ಮಾ. 22ರಂದು ರಾತ್ರಿ 8 ಗಂಟೆಗೆ ಸ್ಥಗಿತ ಗೊಳಿಸಲಾಯಿತು. ಪ್ರಸ್ತುತ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ 4 ಮೀ.ಗೆ ಇಳಿದಿದೆ. ಇದರಲ್ಲಿ ತಳಮಟ್ಟದಿಂದ 1.5 ಮೀ ನೀರು ಬಳಸುವಂತಿಲ್ಲ. ಹಾಗಾಗಿ ಬಳಕೆಗೆ 2.5 ಮೀ ನೀರು ಮಾತ್ರ ಲಭ್ಯವಾಗಲಿದೆ.
ಉರಿಬಿಸಿಲಿನ ಝಳಕ್ಕೆ ನೇತ್ರಾವತಿ ನದಿಯ ನೀರು ಆವಿಯಾಗುತ್ತಿದ್ದು, ನದಿ ಮೇಲ್ಗಡೆ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೂ ನೀರು ಅಗತ್ಯವಿದೆ. ಮುಂದಿನ 10 ದಿನಗಳ ಕಾಲ ಇದೇ ಮಟ್ಟವನ್ನು ಕಾಯ್ದುಕೊಳ್ಳಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಮುಂದಿನ 60 ದಿನಗಳ ಕಾಲ ಕುಡಿಯುವ ನೀರಿನ ಬೇಡಿಕೆಯನ್ನು ಪಡಿತರ ಮಾಡುವ ಮೂಲಕ ನಿಭಾಯಿಸಬೇಕಾದ ಅನಿವಾರ್ಯತೆ ಮಂಗಳೂರು ಮಹಾನಗರಪಾಲಿಕೆಗೆ ಎದು ರಾಗುವ ಸಂಭವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ