ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು
Team Udayavani, Jan 16, 2022, 3:08 PM IST
ದಾಂಡೇಲಿ: ವೀಕೆಂಡ್ ದಿನಗಳಲ್ಲಿ ಜನಜಂಗುಳಿಯಿಂದ ತುಂಬಿರುತ್ತಿದ್ದ ದಾಂಡೇಲಿ ನಗರ ಇದೀಗ ವೀಕೆಂಡ್ ಕರ್ಪ್ಯೂ ಹಿನ್ನಲೆಯಲ್ಲಿ ಬಿಕೋ ಎನ್ನತೊಡಗಿದೆ.
ವೀಕೆಂಡು ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿದ್ದರು. ಪರಿಣಾಮವಾಗಿ ವೀಕೆಂಡ್ ದಿನಗಳಲ್ಲಿ ಆಟೋಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಡಿಗೆಯು ಸಿಗುತ್ತಿತ್ತು. ವಾರದ ಐದು ದಿನಗಳಲ್ಲಿ ಹೇಳಿಕೊಳ್ಳುವಷ್ಟು ಬಾಡಿಗೆ ಇಲ್ಲದಿದ್ದರೂ ವಾರದ ಶನಿವಾರ ಮತ್ತು ಭಾನುವಾರ ಸಿಗುತ್ತಿದ್ದ ಬಾಡಿಗೆಗಳು ಆಟೋ ಚಾಲಕರಿಗೆ ನೆಮ್ಮದಿಯನ್ನು ನೀಡುತ್ತಿತ್ತು.
ಆದರೆ ಇದೀಗ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುವುದರಿಂದ ಪ್ರವಾಸಿಗರು ವೀಕೆಂಡ್ ದಿನಗಳಲ್ಲಿ ನಗರಕ್ಕೆ ಬರುವುದು ಸಂಪೂರ್ಣ ಸ್ಥಗಿತವಾಗಿದೆ ಎಂದೆ ಹೇಳಬಹುದು.
ಪ್ರವಾಸಿಗರೆ ಬರುತ್ತಿಲ್ಲ ಅಂದ್ಮೇಲೆ ಆಟೋ ಚಾಲಕರಿಗೆ ಬಾಡಿಗೆ ಸಿಗುವುದುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ನಗರದ ಎಲ್ಲ ಆಟೋ ನಿಲ್ದಾಣಗಳಲ್ಲಿ ಶನಿವಾರ ಬೆಳಿಗ್ಗೆ ಬಂದು ನಿಂತಿರುವ ಆಟೋಗಳು ಅಲುಗಾಡದೇ ಪ್ರಯಾಣಿಕರ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿವೆ. ಮೊದಲೆ ಒಂದನೇ ಮತ್ತು ಎರಡನೇ ಕೊರೊನಾ ಅಲೆಯಿಂದಾದ ಸಂಕಷ್ಟದಿಂದ ಚೇತರಿಸಿಕೊಳ್ಳದ ಆಟೋ ಚಾಲಕರಿಗೆ ಇದೀಗ ವೀಕೆಂಡ್ ಕರ್ಪ್ಯೂ ಮತ್ತಷ್ಟು ಸಂಕಷ್ಟಕ್ಕೆ ಬೀಳಿಸಿದೆ ಎಂದು ಹೇಳಬಹುದು. ಒಣ ಬಿಸಿಲಲ್ಲಿ ನಿಂತು ಪ್ರಯಾಣಿಕರಿಗಾಗಿ ಕಾಯುತ್ತಿರುವ ಆಟೋ ಚಾಲಕರ ಬದುಕು ಮಾತ್ರ ದುಸ್ತರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ