ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಾಟ್ಸ್‌ ಆ್ಯಪ್‌ ಕಲಿಕೆ

ಜೋಯಿಡಾ ತಾಲೂಕಿನಲ್ಲಿ ಮಾದರಿ ಪ್ರಯೋಗ

Team Udayavani, Jul 28, 2020, 9:48 AM IST

ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಾಟ್ಸ್‌ ಆ್ಯಪ್‌ ಕಲಿಕೆ

ಜೋಯಿಡಾ: ಕೋವಿಡ್ ಹೆಮ್ಮಾರಿ ಮಕ್ಕಳ ಕಲಿಕೆಗೆ ಮುಳುವಾಗಿ ನಿಂತಿದ್ದು, ಶಿಕ್ಷಣ ಕ್ಷೇತ್ರವನ್ನು ಕಂಗೆಡಿಸಿದೆ. ಈ ಭಯದಲ್ಲಿ ಮಕ್ಕಳ ಕಲಿಕೆ ಹೇಗೆ ಎಂದು ಪೋಷಕರು ಚಿಂತೆಯಲ್ಲಿರುವಾಗಲೇ ನಂದಿಗದ್ದೆ ಕ್ಲಸ್ಟರ್‌ ಮಟ್ಟದಲ್ಲಿ ಶಿಕ್ಷಕರು ವಾಟ್ಸ್‌ಆ್ಯಪ್‌ ಮೂಲಕ ಮಕ್ಕಳ ಕಲಿಕೆ ಪ್ರಾರಂಭಿಸಿದ್ದಾರೆ. ಇದು ಪಾಲಕರಲ್ಲಿ ಸಂತಷ ತಂದಿದೆ.

ಜೋಯಿಡಾ ತಾಲೂಕಿನ ನಂದಿಗದ್ದೆ ಕ್ಲಷ್ಟರ್‌ ಶಿಕ್ಷಕರು ಅಲ್ಲಿನ ಸಿಆರ್‌ಪಿ ಭಾಸ್ಕರ್‌ ಗಾಂವಕರ್‌ ಮಾರ್ಗದರ್ಶನದಲ್ಲಿ ಅಲ್ಲಿನ 13 ಪ್ರಾಥಮಿಕ ಶಾಲೆ, 1 ಉರ್ದು ಶಾಲೆ ಹಾಗೂ 2 ಪ್ರೌಢಶಾಲೆ ಸೇರಿ ಒಟ್ಟು 16 ಶಾಲೆಗಳಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮಾರ್ಗದರ್ಶನದಂತೆ 1ರಿಂದ 10ನೇ ತರಗತಿಯವರೆಗೆ ಆಯಾ ತರಗತಿಗೆ ಅನುಗುಣವಾಗಿ ಪ್ರತಿನಿತ್ಯ ಎಲ್ಲ ವಿಷಯಗಳ ಪಾಠ ಕಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ತಯಾರಿಸಿ ಮುಖ್ಯ ಶಿಕ್ಷಕರ ಮುಖೇನ ಮಕ್ಕಳ ಎಲ್ಲ ಪಾಲಕರ ವಾಟ್ಸ್‌ಆ್ಯಪ್‌ಗೆ ರವಾನಿಸುತ್ತಾರೆ. ಜೋಯಿಡಾ ತಾಲೂಕಿನಲ್ಲಿಯೇ ಇದು ಪ್ರಥಮ ಪ್ರಯೋಗವಾಗಿದ್ದು, ಯಶಸ್ವಿ ಕಂಡಂತಿದೆ.

ವಿದ್ಯಾರ್ಥಿಗಳಲ್ಲಿ ಹೊಸ ಹುರುಪು: ಹೊಸತನದ ಈ ವಾಟ್ಸ್‌ಆ್ಯಪ್‌ ಕಲಿಕೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತುಂಬಿದೆ. ಕಲಿಕೆಯಲ್ಲಿ ಪ್ರತಿನಿತ್ಯ ಭಾಗವಹಿಸುವ ವಿದ್ಯಾರ್ಥಿಗಳು ಶಿಕ್ಷಕರಿಂದ ವಾಟ್ಸ್‌ಆ್ಯಪ್‌ಗೆ ಬಂದಿರುವ ದೈನಂದಿನ ಪಾಠಗಳನ್ನು ಓದಿ, ತಿಳಿದುಕೊಳ್ಳುವ ಮೂಲಕ ಪ್ರಶ್ನೆಗಳಿಗೆ ಉತ್ತರ ಬರೆದು ಶಿಕ್ಷಕರ ವಾಟ್ಸ್‌ಆ್ಯಪ್‌ಗೆ ಮರಳಿ ಕಳಿಸುತ್ತಾರೆ. ಶಿಕ್ಷಕರು ಮಕ್ಕಳ ಉತ್ತರ ನೋಡಿ ತಪ್ಪಿದ್ದಲ್ಲಿ ಸರಿಪಡಿಸಿ ಮರಳಿ ಪಾಲಕರ ವಾಟ್ಸ್ ಆ್ಯಪ್‌ಗೆ ಕಳಿಸುವ ಮೂಲಕ ಕಲಿಕೆಯಲ್ಲಿ ಮಕ್ಕಳು ಪೂರ್ಣವಾಗಿ ತೊಡಗುವಂತೆ ಮಾಡುತ್ತಿದ್ದಾರೆ.

ಅಂತರ್ಜಾಲಕ್ಕಾಗಿ ಡೊಂಗಲ್‌ ಖರೀದಿ: ನಂದಿಗದ್ದೆ ಕ್ಲಷ್ಟರ್‌ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ ಎಲ್‌ ನೆಟ್‌(ಅಂತರಜಾಲ ಸಂಪರ್ಕ)ತುಂಬಾ ನಿಧಾನವಾಗಿದ್ದರಿಂದ ಅನೇಕ ಪಾಲಕರು ನೆಟ್‌ನ ವೇಗಕ್ಕಾಗಿ ಬಿಎಸ್‌ಎನ್‌ಎಲ್‌ನ ಡೊಂಗಲ್‌ ಖರೀದಿಸುವ ಮೂಲಕ ವಾಟ್ಸ್‌ಆ್ಯಪ್‌ ಕಲಿಕೆಗೆ ಅನುಕೂಲಮಾಡಿಕೊಳ್ಳುತ್ತಿದ್ದಾರೆ. ಪುಸ್ತಕ ವಿತರಣೆ: ಕ್ಲಷ್ಟರ್‌ನ ಪ್ರತಿಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವಲ್ಲಿ ಬಿಇಒ, ಪಠ್ಯಪುಸ್ತಕಗಳ ನೋಡಲ್‌ ಅಧಿಕಾರಿಗಳು, ಸಿಆರ್‌ಪಿ ಹಾಗೂ ಶಿಕ್ಷಕರು ಉತ್ತಮ ಕೆಲಸಮಾಡಿದ್ದು, ವಾಟ್ಸ್ ಆ್ಯಪ್‌ ಕಲಿಕೆಗೆ ಉತ್ತೇಜನ ನೀಡುತ್ತಿದೆ. ಆದರೆ ತಾಲೂಕು ಹಳ್ಳಿಗಳಿಂದ ಕೂಡಿದ್ದು, ಶೇ. 30ರಷ್ಟು ಗ್ರಾಮೀಣ ಪ್ರದೇಶಗಳು ವಾಟ್ಸ್‌ಆ್ಯಪ್‌ ಗಳಿಂದ ಮುಕ್ತವಾಗಿಸೆ. ಕೆಲವೆಡೆ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಇಲ್ಲ. ಆದರೆ ನೆಟ್‌ವರ್ಕ್‌ ಸೇವೆ ದೊರೆಯುವ ಹತ್ತಿರದ ಪ್ರದೇಶಕ್ಕೆ ಬಂದು ವಾಟ್ಸ್ ಆ್ಯಪ್‌ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ಕಲಿಕೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದರ ಹೊರತಾಗಿ ಶೇ. 70ರಷ್ಟು ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.

ತಾಲೂಕಿನ ನಂದಿಗದ್ದಾ ಕ್ಲಸ್ಟರ್‌ನಲ್ಲಿನ ವಾಟ್ಸ್‌ಆ್ಯಪ್‌ ಕಲಿಕಾ ಪ್ರಯತ್ನ ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಒಂದು ಮಾದರಿಯಾಗಿದೆ. ಇದರ ಯಶಸ್ಸು ಅಲ್ಲಿನ ಸಿಆರ್‌ಪಿಗಳಿಗೆ ಸಲ್ಲುತ್ತದೆ. ಇದೇ ರೀತಿ ತಾಲೂಕಿನ ಇತರೆಡೆಯಲ್ಲಿಯೂ ಕಲಿಕೆಗೆ ಆರಂಭಿಸುವ ಪ್ರಯತ್ನ ಮಾಡಲಾಗುವುದು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲು ನಮ್ಮ ಪ್ರಯತ್ನ ನಿರಂತರವಾಗಿರಲಿದೆ. -ಪಿ.ಎಸ್‌. ಹಿರೇಮಠ, ಬಿಇಒ

ಹೊಸದಾರಿಯ ಅನ್ವೇಷಣೆ ಅನಿವಾರ್ಯ. ಈ ಕ್ರಮದಿಂದ ಶೇ. 75ರಷ್ಟು ವಿದ್ಯಾರ್ಥಿಗಳನ್ನು ಈಗಾಗಲೆ ನಾವು ತಲುಪಿದ್ದೇವೆ. ಇದರಲ್ಲಿ ಪಾಲಕರ ಸಹಕಾರ ನೆನೆಯುತ್ತೇವೆ. ಈ ಪ್ರಯತ್ನದಲ್ಲಿ ಸಿಆರ್‌ಪಿ ಭಾಸ್ಕರ್‌ ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. -ಜನಾರ್ದನ ಹೆಗಡೆ, ನಂದಿಗದ್ದೆ ಮುಖ್ಯಶಿಕ್ಷಕರು

ಮಕ್ಕಳು ಉತ್ಸಾಹದಿಂದ ವಾಟ್ಸ್‌ಆ್ಯಪ್‌ ವೀಕ್ಷಿಸಿ ಕಲಿಕೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಹಾಗೂ  ಶಿಕ್ಷಕರ ನಡುವಿನ ಸಹಸಂಬಂಧಕ್ಕೆ ಈ ಕಾಲದಲ್ಲಿ ಇದು ಅತ್ಯುತ್ತಮ ಹಾಗೂ ಅನಿವಾರ್ಯ ಕೂಡಾ. -ವಿದ್ಯಾ ಮಾಟಗೇಕರ್‌, ವಿದ್ಯಾರ್ಥಿ ಪಾಲಕರು ಹೆಣಕೊಳ

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.