ದಿವ್ಯಾಂಗ ಹುಡುಗಿ ಅದ್ಭುತ ಸಾಧನೆ


Team Udayavani, May 4, 2019, 4:11 PM IST

nc

ಶಿರಸಿ: ಸಂಪೂರ್ಣ ವಿಶೇಷ ಚೇತನ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93ರಷ್ಟು ಸಾಧನೆ ಮಾಡಿ ಚಿನ್ನದ ಹುಡುಗಿಯಾಗಿ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಓಟದಲ್ಲಿ, ಆಟದಲ್ಲಿ ತೊಡಗಿಕೊಳ್ಳುವ ಎಲ್ಲ ಮಕ್ಕಳಂತೆ ಇಲ್ಲಿನ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಗೆ ತೆರಳಿ ಈಕೆ ಮಾಡಿದ ಸಾಧನೆ ಸಣ್ಣದಲ್ಲ. ಎಲ್ಲವನ್ನೂ ಪರರ ಸಹಾಯದಿಂದ ಮಾಡಿಕೊಳ್ಳಬೇಕಾದ ಹುಟ್ಟು ವೈಕಲ್ಯದಲ್ಲಿದ್ದ ಈ ಪ್ರತಿಭಾವಂತೆ ಪಾಲಕರ, ಪೋಷಕರ, ಶಿಕ್ಷಕರ ನಿರಂತರ ಶ್ರಮದಿಂದ ಈ ಸಾಧನೆ ಮಾಡಿ ಬೆರಗುಗೊಳಿಸಿದ್ದಾಳೆ.

ಇಲ್ಲಿನ ಕೆಎಚ್ಬಿ ಕಾಲನಿಯ ಹರೀಶ ಗಾಂವಕರ್‌ ಹಾಗೂ ಶಾಂತಲಾ ಗಾಂವಕರ್‌ ಮಗಳಾದ ಈಕೆ ಹುಟ್ಟನಿಂದಲೇ ಅಂಗವೈಕಲ್ಯ ಹೊಂದಿದ್ದಳು. ಆದರೆ, ಎಲ್ಲರಂತೆ ಶಾಲೆ ಕಲಿಸಬೇಕು, ಶಾಲೆಯ ಬದುಕು ಕೂಡ ಗೊತ್ತಾಗಬೇಕು ಎಂದು ದಿನವೂ ಆಟೋದಲ್ಲಿ ಮಡಿಲ ಮೇಲೆ ಕುಳಿಸಿಕೊಂಡು ಶಾಲೆಗೆ ಕಳುಹಿಸಿ, ಜೊತೆಗೆ ಕಳೆದ ಹತ್ತು ವರ್ಷದಿಂದ ಓರ್ವ ಸಹಾಯಕಿಯನ್ನೂ ಇಟ್ಟು, ಮಧ್ಯಾಹ್ನ ಮನೆಗೆ ಕರೆತಂದು, ನಂತರ ಶಾಲೆಯ ಓದನ್ನು ಮನೆಯಲ್ಲಿ ಓದಿಸಿ ಈಗ ಈ ಸಾಧನೆ ಮಾಡಿಸಿದ್ದು ಈ ಫಲಿತಾಂಶಕ್ಕೆ ಸಾಧ್ಯವಾಗಿದೆ. ಎಂಥ ಸಂದರ್ಭವಿದ್ದರೂ ಮನಸ್ಸಿದ್ದರೆ ಅಕ್ಷರಶಃ ಸಹ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೇಯಾ ಮೇಲ್ಪಂಕ್ತಿಯಾದಳು.

ಪರೀಕ್ಷೆ ಬರೆಯಲು ಒಂಬತ್ತನೇ ವರ್ಗದ ವಿದ್ಯಾರ್ಥಿನಿ ಸಹಾಯ ಪಡೆದಿದ್ದಾಳೆ. ಮೊನ್ನೆ ಬಂದ ಫಲಿತಾಂಶದಲ್ಲಿ ಈ ಸಾಧನೆ ಅಚ್ಚರಿ ತಂದಿತು. 125 ಅಂಕದ ಕನ್ನಡಕ್ಕೆ 118, ಇಂಗ್ಲಿಷ 100ಕ್ಕೆ 97, ಹಿಂದಿಗೆ 93, ಸಮಾಜ ಶಾಸ್ತ್ರಕ್ಕೆ 95, ರಾಜ್ಯ ಶಾಸ್ತ್ರಕ್ಕೆ 89, ಸಮಾಜ ವಿಜ್ಞಾನಕ್ಕೆ 85 ಅಂಕ ಪಡೆದು ಈ ಸಾಧನೆ ಮಾಡಿದ್ದಾಳೆ. ಈಗಾಗಲೇ ಹಲವಾರು ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾದ ಈಕೆ ಈ ಸಾಧನೆ ಮಾಡಿದ್ದು ಹೆಮ್ಮೆ ಮೂಡಿಸಿದೆ.

ಮುಂದೆ ರೇಡಿಯೋ ಜಾಕಿ ಆಗಬೇಕು ಎಂಬ ಕನಸು ಹೊತ್ತ ಶ್ರೇಯಾಳಿಗೆ ಮಾನಸಿಕ ಕೌನ್ಸಲರ್‌ ಕೂಡ ಆಗಬೇಕು ಎಂಬ ಆಸೆ ಇದೆ. ಸರಕಾರದಿಂದ ಈವರೆಗೆ ಯಾವುದೇ ಸೌಲಭ್ಯವನ್ನೂ ಪಡೆಯದೇ ಈ ಸಾಧನೆ ಮಾಡಿದ ಈ ಪ್ರತಿಭಾವಂತೆಗೆ ಸರಕಾರದ, ಶಿಕ್ಷಣ ಇಲಾಖೆಯ ನಿಜವಾದ ಸೌಲಭ್ಯಗಳು ಸಿಗಬೇಕಿದೆ. ಚಂದ್ರಿಕಾ ಎಂಬ ಸಹಾಯಕಿಯ ನೆರವು ಕಳೆದ ಹತ್ತು ವರ್ಷಗಳಿಂದ ಈಕೆಗೆ ಸಿಕ್ಕಿದೆ ಎಂದು ಮನದಾಳದ ಮಾತುಗಳನ್ನು ಶ್ರೇಯಾ ತಾಯಿ ಶಾಂತಲಾ ಗಾಂವಕರ್‌ ಹೇಳುತ್ತಾರೆ.

ಇಂಥ ಮಕ್ಕಳಿಗೆ ಮನೆ ಶಿಕ್ಷಣ ಕೊಡಿಸಿ ಎಂದಿದ್ದರೆ ಇಂದಿನ ಸ್ಪರ್ಧಾತ್ಮಕ ಸಂಗತಿ ಗೊತ್ತೇ ಆಗೋದಿಲ್ಲ. ಸಾಮಾನ್ಯರಂತೆ ಶಿಕ್ಷಣ ಕೊಡಿಸಲು ಮುಂದಾದರೆ ಮಾತ್ರ ಈ ಸಾಧ್ಯವಿದೆ ಎಂಬುದಕ್ಕೆ ಶ್ರೇಯಾ ದೊಡ್ಡ ಉದಾಹರಣೆ. ನನ್ನ ಡಿಸೆಬಿಲಿಟಿಯೇ ನನ್ನ ಎಬಿಲಿಟಿ ಎನ್ನೋದು ಶ್ರೇಯಾ ಮಾತಿನಲ್ಲಿ ಅದೆಷ್ಟು ಅರ್ಥವಿದೆ.

ಓದಿದ್ದು ಎಲ್ಲರಂಥ ಶಾಲೆ; ಸಾಧಿಸಿದ್ದು ಶೇ.93

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.