ಯಲ್ಲಾಪುರ : ಕಾರು ತಡೆದು 14 ಲಕ್ಷ ಮೌಲ್ಯದ ನಗ ನಗದು ದೋಚಿದ ದುಷ್ಕರ್ಮಿಗಳು
Team Udayavani, Jun 15, 2022, 10:59 PM IST
ಯಲ್ಲಾಪುರ : ಕಾರನ್ನು ತಡೆದು ದರೋಡೆಕೋರರ ತಂಡವೊಂದು ಸುಮಾರು 14 ಲಕ್ಷ ಮೌಲ್ಯದ ನಗ ನಗದು ದೋಚಿ ಪರಾರಿಯಾದ ಘಟನೆ ತಾಲೂಕಿನ ಮಂಚಿಕೇರಿಯ ಬಿಳಕಿ ಗ್ರಾಮದ ಶಿಡ್ಲಗುಂಡಿಗೆ ಹೋಗುವ ರಸ್ತೆಯಲ್ಲಿ ನಡೆದಿದೆ.
ಈ ಕುರಿತು ಅಂತೋನಿ ದಿವ್ಯಕುಮಾರ ಅವರ ತಂದೆ ಪ್ರಾನ್ಸಿಸ್ ಪೆರೇರಾ ಮುಂಬಯಿ ಠಾಣೆಗೆ ದೂರು ನೀಡಿದ್ದಾರೆ. ಸ್ನೇಹಿತರೊಂದಿಗೆ ಎರಡು ಕಾರುಗಳಲ್ಲಿ ಹೋಗುತ್ತಿದ್ದಾಗ, ಬಿಳಕಿ ಸಮೀಪ ಶಿಡ್ಲಗುಂಡಿಗೆ ಹೋಗುವ ರಸ್ತೆಯಲ್ಲಿ, ಬೈಕಿನಲ್ಲಿ ಬಂದ 4-5 ಜನರ ತಂಡ ಕಾರನ್ನು ಅಡ್ಡಗಟ್ಟಿ ತಡೆದು, ಕಾರಿನಲ್ಲಿದ್ದವರಿಗೆ ಹಲ್ಲೆ ನಡೆಸಿ, ಕತ್ತಿ ಹಾಗೂ ದೊಣ್ಣೆಯನ್ನು ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ.
ಈ ವೇಳೆ ಕಾರಿನೊಳಗೆ ಬ್ಯಾಗಿನಲ್ಲಿ ಇಟ್ಟಿದ್ದ 9 ಲಕ್ಷ 3300 ಸಾವಿರ ರೂ ನಗದು ಹಣ, 1 ಲಕ್ಷ ರೂ ಮೌಲ್ಯದ ಐಫೋನ್, 2 ಮೋಬೈಲ್ಗಳು, 25000 ರೂ ಮೌಲ್ಯದ ಪವರ್ ಬ್ಯಾಂಕ್, ದೂರುದಾರರ ಕೈಬೆರಳಿನಲ್ಲಿ ಇದ್ದ 2 ಲಕ್ಷ ರೂ ಮೌಲ್ಯದ ನವರತ್ನ ಉಂಗುರ, ಇವರ ಸ್ನೇಹಿತರ ಬಳಿ ಇದ್ದ ಮೂರು ಮೊಬೈಲ್ ಗಳು ಸೇರಿದಂತೆ ಒಟ್ಟೂ 14 ಲಕ್ಷ 30 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ ಮೂವರು ಆರೋಪಿಗಳು ಬೈಕಿನಲ್ಲಿ ಪರಾರಿಯಾಗಿದ್ದು, ಇನ್ನುಳಿದ ಆರೋಪಿಗಳು ಕಾಡಿನಲ್ಲಿ ಓಡಿಹೋಗಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಣಜಿ ಟ್ರೋಫಿ ಸೆಮಿಫೈನಲ್: ತಮೋರೆ ಶತಕ; ಮುಂಬಯಿ ಮೇಲುಗೈ; ಉತ್ತರ ಪ್ರದೇಶ ಕುಸಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ