ಅಧ್ವಾನ ಸೃಷ್ಟಿಸಿದ ನಗರೋತ್ಥಾನ ಯೋಜನೆ

ನಗರದ ಸೌಂದರ್ಯ ಅವನತಿಇದ್ದ ರಸ್ತೆ-ಗಟಾರಗಳು ಹಾಳಾದವುಅನುದಾನ ಬಂದರೂ ವಿನಿಯೋಗವಾಗುತ್ತಿಲ್ಲ

Team Udayavani, Mar 5, 2020, 7:05 PM IST

5-March-20

ಯಲ್ಲಾಪುರ: ವಾಸ್ತವವಾಗಿ ಇಲ್ಲಿಯ ಪಟ್ಟಣ ಪಂಚಾಯತ ಎಂದರೆ ಹೇಳುವವರು ಕೇಳುವವರು ಯಾರೂ ಇಲ್ಲದ ಆಡಳಿತ ವ್ಯವಸ್ಥೆಯಾಗಿದೆ. ಸರಕಾರದಿಂದ ಕೋಟ್ಯಾಂತರ ಹಣ ಬಂದರೂ ಜನರಿಗೆ ಮಾತ್ರ ಯಾವ ಮಾಹಿತಿಯೂ ಸಿಗುತ್ತಿಲ್ಲ. ರಾತ್ರಿ ಬೆಳಗಾಗುವುದರೊಳಗೆ ರಸ್ತೆ ಪಕ್ಕ, ನಡು ರಸ್ತೆ ಅಗೆಯುತ್ತಾರೆ.

ಎಲ್ಲೋ ರಸ್ತೆಯೇ ಆಗಿಬಿಡುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ ಅವರಿಗೆ ಸಂಬಂಧವೇ ಇಲ್ಲವೆನ್ನುತ್ತಾರೆ. ಮಧ್ಯಂತರದಲ್ಲಿ ಒಮ್ಮೆ ಬಂದ ಈ ನಗರೋತ್ಥಾನ ಕಾಮಗಾರಿ ಸೃಷ್ಟಿಸಿದ್ದೇ ಅಧ್ವಾನಗಳನ್ನು ಮಾತ್ರ. ಈ ಕಾಮಗಾರಿ ಹೆಸರಲ್ಲಿ ಹಣ ಬರತೊಡಗಿತೋ ಅಂದಿನಿಂದ ನಗರದ ಸೌಂದರ್ಯ ಅವನತಿ. ಇದ್ದ ರಸ್ತೆ ಗಟಾರಗಳು ಹಾಳಾದವು.
ಅಭಿವೃದ್ಧಿಗಿಂತ ಅಧ್ವಾನವೇ ಆಗಿದ್ದೇ ಹೆಚ್ಚಾದವು. ಈ ನಗರೋತ್ಥಾನ ಕಾಮಗಾರಿ ಮಾಡಿದವರು ಇಲ್ಲಿಯವರ ನಿಯಂತ್ರಣದಲಿಲ್ಲ. ವಿಳಾಸವೂ ಸಿಗಲ್ಲ ಅಂತಹ ಸ್ಥಿತಿ.

ಉತ್ತಮ ಕಾಂಕ್ರೀಟ್‌ ರಸ್ತೆಯನ್ನು ಪೈಪ್‌ ಮಾರ್ಗಕ್ಕಾಗಿ ಮಾರು ಮಾರಿಗೆ ಅಗೆದಿದ್ದಾರೆ. ಒಳ್ಳೆಯ ರಸ್ತೆ ಅಂದುಕೊಂಡರೆ ಈಗ ಅದರಲ್ಲಿ ಬಿದ್ದೆದ್ದು ಹೋಗಬೇಕಾದ ಸ್ಥಿತಿ. ಸರಿಪಡಿಸಲು
ದೂರಿಕೊಂಡರೆ ಆ ಕಾಮಗಾರಿ ತಮ್ಮದಲ್ಲ ಎಂಬ ಉತ್ತರ ಪಪಂನಿಂದ ಸಿದ್ಧ. ಹಣ ಈ ಯೋಜನೆ ಬರದಿರಲಿ ಎಂದು ಜನ ಪ್ರಾರ್ಥಿಸಿಕೊಳ್ಳುವ ಸ್ಥಿತಿ ಬಂದಿದೆ. ಕಳೆದೆರಡು ವರ್ಷದಿಂದ ಈ ಅಧ್ವಾನಗಳನ್ನು ಸರಿಪಡಿಸಲು ರಸ್ತೆ ಗಟಾರಗಳಿಗೆ ವಿಶೇಷ ಅನುದಾನಗಳನ್ನು ಹಾಕುವುದೇ ಪ.ಪಂನವರ ಕೆಲಸವಾಗಿದೆ. ಪ.ಪಂಗೆ ಏನಿಲ್ಲವೆಂದರೂ ಜಾತ್ರಾ ಅನುದಾನಗಳು ಮೂರು ವರ್ಷಕ್ಕೊಮ್ಮೆ, ಶಾಸಕರ ವಿಶೇಷ ಅನುದಾನ, ಎಸ್‌ ಎಫ್‌ಸಿ ಕಾಯಂ ಅನುದಾನ ಹದಿನಾಲ್ಕನೇ ಹಣಕಾಸು ಹೀಗೆ ಅನುದಾನಗಳು ಹರಿದು ಬರುತ್ತಲೆ ಇದೆ. ಈಗಂತು ಸಚಿವರದ್ದೇ ಪಪಂ ಇಷ್ಟು ಅನುದಾನಗಳಲ್ಲಿ ಯಾವುದೇ ಒಂದು ಕಾಮಗಾರಿ ಸಮರ್ಪಕವಾಗಿದ್ದರೆ, ಯೋಗ್ಯವಾಗಿದ್ದರೆ ಸಾರ್ವಜನಿಕರ ಬೇಡಿಕೆಯಂತೆ ಇದೆ ಎಂಬುದನ್ನು ದುರ್ಬಿನು ಹಿಡಿದು ಹುಡಕಬೇಕಾಗುತ್ತದೆ.

ಸ್ಲ್ಯಾಬ್ ತರಹದಲ್ಲೆ ಕಾಂಕ್ರೀಟ್‌ ರಸ್ತೆಗಳನ್ನು ಮಾಡಬೇಕಿದ್ದರೂ
ನಗರ ಹೃದಯ ಭಾಗದಲ್ಲೇ ಕಂದಾಯ ತೋಟಗಾರಿಕೆ ಇಲಾಖೆಗಳಿಗೆ ಹೋಗುವ ರಸ್ತೆಗಳನ್ನು ಮನಸಿಗೆ ತೋಚಿದ ಹಾಗೇ ಮಾಡುತ್ತಿರುವುದು ತಾಜಾ ಉದಾಹರಣೆಯಾಗಿದೆ. ಬೆಲ್‌ ರಸ್ತೆಯ ಪಕ್ಕಕ್ಕೆ ಗಟಾರ್‌, ಸ್ಲ್ಯಾಬ್ ಕವರಿಂಗ್‌ ಅಳವಡಿಸಿ ಫೆವರ್ಸ್‌ ಹಾಕಿ ಫುಟ್‌ಪಾತ್‌ ನಿರ್ಮಾಣದ 97 ಲಕ್ಷ ವೆಚ್ಚದ ಕಾಮಗಾರಿಯಲ್ಲಿ ಅರ್ಧದಷ್ಟು ಕೆಲಸವನ್ನೂ ಮಾಡಿಲ್ಲ. ಆದರೆ ವಿಶೇಷ ಅನುದಾನದಲ್ಲಿ 85 ಲಕ್ಷ ಖರ್ಚು ಕಾಣಿಸಿದೆ. ಯಾರಿಗೆ ದೂರಿಯೂ ಈ ತನಕ ಪ್ರಯೋಜನವಾಗಿಲ್ಲ. ಇಂತಹ ಹತ್ತಾರು ಅಧ್ವಾನಗಳು ಪ್ರತಿ ಕಾಮಗಾರಿಯಲ್ಲೂ ಇದೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

2019-20 ರಲ್ಲಿ ಮೂರು ಕೋಟಿಯಷ್ಟು ಅನುದಾನ ಲಭ್ಯವಿದ್ದು ರಸ್ತೆ ಚರಂಡಿ ಗಟಾರದ ಕಮಗಾರಿ ಕೈಗೆತ್ತಿಕೊಂಡಿದೆ. ಅನುದಾನ ವಾಪಸ್ಸಾಗದ ರೀತಿಯಲ್ಲಿ ಯೋಜನೆ ಸಿದ್ಧಗೊಂಡಿದ್ದು ಹೆಚ್ಚಿನ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದು ಮುಖ್ಯಾಧಿಕಾರಿ ಅರುಣ ನಾಯ್ಕ ಹೇಳಿಕೆ. ನಗರ ಅಭಿವೃದ್ಧಿಗೆ ವರ್ಷದಿಂದ ವರ್ಷಕ್ಕೆ ಹಣ ಬರುವುದಕ್ಕೇನೂ ಕೊರತೆಯಾಗುತ್ತಿಲ್ಲ. ಯಾವ ಕಾಮಗಾರಿಯನ್ನೂ ಪೂರ್ತಿಗೊಳಿಸಿ ಸರಿಪಡಿಸಿದ ಧಾಕಲೆ ಪ.ಪಂ ನ ಇತ್ತೀಚಿನ ಇತಿಹಾಸದಲ್ಲೇ ಇಲ್ಲವೆನ್ನಬಹುದಾಗಿದೆ. ಶಾಸಕರಾಗಿದ್ದಾಗ ಶಿವರಾಮ ಹೆಬ್ಟಾರವರು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಎರಡುವರೇ ಕೋಟಿ ಅನುದಾನ ತಂದಿದ್ದರೂ ಅದು ಸಾಧ್ಯವಾಗದೇ ಬೇರೆ ಯೋಜನೆಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆಗೆ ಹೋಗಿದೆ. ಹೀಗೆ ಹಣ ಎಷ್ಟೇ ಬಂದಿದ್ದರೂ ಸದ್ವಿನಿಯೋಗದ ಬಗ್ಗೆ ಪ್ರಶ್ನೆ ಮಾಡಿ ಅಭಿವೃದ್ಧಿ ಮಾಡಿಸುವ ಮನೋಭಾವದವರು ಇಲ್ಲದಾಗಿದೆ.

ಅನುದಾನ ವಾಪಸ್ಸಾಗದಿದ್ದರು ಪೋಲಾಗಿದ್ದೇ ಜಾಸ್ತಿ. ಬೇಡ್ತಿ ಶುದ್ಧ
ಕುಡಿಯುವ ನೀರು 25 ಕೋಟಿ ರೂ ಗಳ ಯೋಜನೆ ಹಳ್ಳ ಹಿಡಿದಿದೆ. ನಯಾಪೈಸೆ ಉಪಯೋಗವಿಲ್ಲದೇ ಕೋಟ್ಯಾಂತರ ರೂ. ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿದೆ. ಪ.ಪಂ.ಗೆ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದ ಕಾರಣ ಅಧಿಕಾರಿಗಳ ದರಬಾರು, ಶಾಸಕ ಸಚಿವರಿಗೆ ತೋಚಿದಲ್ಲಿ ಕೆಲಸ. ಈ ಮಧ್ಯೆ ಜನ ಬೇಡಿಕೆಯಿದ್ದಲ್ಲಿ ಕೆಲಸವಿಲ್ಲ. ಕಳೆದ ವರ್ಷ ಮಾಡಿದ ಫುಟ್‌ ಪಾತ್‌ ಈಗಲೇ ಕಿತ್ತು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಅಪಾಯದ ಪರಿ ಕೇಳುವವರಿಲ್ಲವಾಗಿದೆ. ಹೆಸರು ಮಾತ್ರ ನಗರೋತ್ಥಾನ. ಯಲ್ಲಾಪುರ ನಗರವಾಗುತ್ತಿದೆ ನರಕಸ್ಥಾನ ಎಂಬುದು ಕಟುಸತ್ಯ.

„ನರಸಿಂಹ ಸಾತೊಡ್ಡಿ.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.