ಹೊಸಪೇಟೆ: ಹಂಪಿ ವಿದ್ಯಾರಣ್ಯ ಭಾರತಿ ಶ್ರೀಗಳಿಂದ ಚಾತುರ್ಮಾಸ್ಯ ಸಂಕಲ್ಪ
Team Udayavani, Jul 13, 2022, 5:28 PM IST
ಹೊಸಪೇಟೆ: ದಕ್ಷಿಣಕಾಶಿ ಖ್ಯಾತಿಯ ಹಂಪಿಯ ಶ್ರೀ ವಿದ್ಯಾರಣ್ಯ ಮಠದ ಪೀಠಾಧ್ಯಕ್ಷರಾದ ವಿದ್ಯಾರಣ್ಯ ಭಾರತಿ ಸ್ವಾಮಿಗಳು, ಗುರು ಪೂರ್ಣಿಮೆ ದಿನವಾದ ಬುಧವಾರ ಚಾತುರ್ಮಾಸ್ಯ ಸಂಕಲ್ಪ ಕೈಗೊಂಡರು.
ಇತ್ತೀಚಿಗಷ್ಟೆ ತಿರುಪತಿಗೆ ತೆರಳಿ, ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದುಕೊಂಡು ಹಂಪಿಗೆ ಆಗಮಿಸಿರುವ ಶ್ರೀಗಳು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಗೈದು, ಚಾತುರ್ಮಾಸ್ಯ ಆರಂಭಿಸಿದರು.
ಬಳಿಕ ಶ್ರೀ ಮಠದಲ್ಲಿ ವ್ಯಾಸ ಮಂಟಪ ಪೂಜೆ ಹಾಗೂ ಸಂಜೆ ವಿರೂಪಾಕ್ಷೇಶ್ವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹರಾಷ್ಟ್ರರಾಜ್ಯದಿಂದ ಆಗಮಿಸಿದ ಶಿಷ್ಯವರ್ಗ ಶ್ರೀಗಳಿಗೆ ಸಾಮೂಹಿಕ ಪಾದ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್, ವೆಂಕಟೇಶ್ ಎಂ.,ಮಂಜುಳಾ ವೆಂಕಟೇಶ್, ಪ್ರವೀಣ್ ಶರ್ಮಾ, ಅನಂತರೆಡ್ಡಿ, ಆಂಜನೇಯ ಗೌಡ, ನಾಗರಾಜ ಪಾಟೇಲ್ ಸೇರಿದಂತೆ ಅಪಾರ ಶಿರ್ಷ ವೃಂದ ಹಾಜರಿದ್ದರು.
ಗುರು ಪೂರ್ಣಿಮೆ ದಿನದಿಂದ ಆರಂಭಗೊಂಡಿರುವ ಚಾತುರ್ಮಾಸ್ಯ ವೃತಾಚರಣೆ ಕಾರ್ತಿಕ ಪೂರ್ಣಿಮೆಯವರೆಗೆ ನಡೆಯಲಿದೆ.ಈ ಕಾಲದಲ್ಲಿ ಶ್ರೀಗಳು ಹಂಪಿ ಕ್ಷೇತ್ರದಲ್ಲಿ ಉಳಿದು ನಿತ್ಯ ಭಕ್ತರಿಗೆ ಪ್ರವಚನ, ಆರ್ಶಿವಚನ ನೀಡಿ ಆರ್ಶಿವಾದ ಮಾಡುವರು. ಶ್ರೀಗಳ ದರ್ಶನ ಪಡೆಯಲು ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹರಾಷ್ಟ್ರದಿಂದ ಭಕ್ತರು ಹಂಪಿಗೆ ಆಗಮಿಸುತ್ತಾರೆ.
ಚಾತುರ್ಮಾಸ್ಯ ವೃತಾಚರಣೆ ಪೂರ್ಣಗೊಳಿಸಿದ ನಂತರ ಶ್ರೀಗಳು ರಾಷ್ಟ್ರ ಪರ್ಯಟನೆ ಕೈಗೊಳ್ಳುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ
Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!
Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ
Ayodhya: ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ: ಶ್ರೀರಾಮುಲು ಆಕ್ರೋಶ
Hospete: ಫೆ.3 ರಂದು ಅಂತರಾಷ್ಟ್ರೀಯ ಪ್ರವಚನಕಾರರಾದ ಬಿ.ಕೆ.ಶಿವಾನಿ ಹೊಸಪೇಟೆಗೆ ಭೇಟಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ