ಕೊಟ್ಟೂರು: ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ
30 ರಿಂದ 40 ಲಕ್ಷ ರೂ ಮೌಲ್ಯದ ಬೆಳೆ ಹಾನಿ: ರೈತ ಕಂಗಾಲು
Team Udayavani, May 9, 2022, 5:43 PM IST
ಕೊಟ್ಟೂರು: ನಿಂಬಳಗೇರಿ ಗ್ರಾಮ ಹಾಗೂ ಸುತ್ತಮುತ್ತ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.
ಬಿರುಗಾಳಿಗೆ ಹಾರಿಹೋದ ಮನೆ ಶೀಟುಗಳು, ಹೆಂಚುಗಳು, ಆಲಿಕಲ್ಲು ಮಳೆಗೆ ನೆಲಕಚ್ಚಿದ 20ರಿಂದ 30 ಎಕರೆ ದಾಳಿಂಬೆ ತೋಟ ಹತ್ತರಿಂದ ಹದಿನೈದು ಎಕರೆ ಬಾಳೆತೋಟ, 10 ಎಕರೆ ಪಪ್ಪಾಯಿ ಒಟ್ಟು ಸುಮಾರು 30ರಿಂದ 40 ಲಕ್ಷ ರೂ. ಹಾನಿಯಾಗಿದೆ.
ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ ಗಿಡಗಳು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು, ರೈತರು ಬೆಳೆದಿದ್ದ ಫಸಲು ಬಂದಿದ್ದ ಬಾಳೆತೋಟ ದಾಳಿಂಬೆ ತೋಟ ಪಪ್ಪಾಯಿ ಇನ್ನೂ ಅನೇಕ ಬೆಳೆಗಳಿಗೆ ಹಾನಿಯಾಗಿದ್ದು ಅನಿರೀಕ್ಷಿತವಾಗಿ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದ್ದಕ್ಕಿದ್ದಂತೆ ಸುರಿದ ಬಿರುಗಾಳಿ ಸಹಿತ ಮಳೆ ರೈತರಿಗೆ ದಿಕ್ಕು ತೋಚದಂತಾಗಿದೆ.
ರೈತರಿಗೆ ಚಿಂತೆ
ಕಾಡು ಹಂದಿ ಹಾವಳಿ ಭೀತಿ ಇಲ್ಲ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆ. ವರ್ಷಕಾಲ ಕಷ್ಟಪಟ್ಟರೆ ಒಂದಷ್ಟು ಆದಾಯ ಬರುತ್ತದೆ ಎಂದು ಕಷ್ಟಪಟ್ಟು ಬೆಳೆದ ಬಾಳೆ, ಅಲ್ಪಾವಧಿ ಬೆಳೆಯಾಗಿ ತರಕಾರಿ ಬೆಳೆಗಳಾದ ಟೊಮೆಟೋ ಸೋಲಾರ್ ಬೀನ್ಸ್ ಇತರೆ ತರಕಾರಿ ಬೆಳೆಗಳು ನಾಶವಾಗಿರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಬಿರುಗಾಳಿಯಿಂದ ಬೆಳೆಗಳು ಕ್ಷ ಣಾರ್ಧದಲ್ಲೇ ನಾಶವಾದವು. ಈ ರೀತಿ ಆದರೆ ಮಾಡಿದ ಸಾಲ ತೀರಿಸುವುದು ಹೇಗೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎಂದು ನಿಂಬಳಗೇರಿ ಗ್ರಾಮದ ನಷ್ಟಕ್ಕೆ ಸಿಲುಕಿದ ರೈತ ಕೊಟ್ರೇಶ್, ಜಿ. ಶಾಂತಮ್ಮ, ಮಹಾಂತೇಶ್, ರಾಜೇಂದ್ರ ಗೌಡ, ಎಸ್.ಪ್ರಕಾಶ್, ಗಂಗಾಧರ, ಮರುಳಸಿದ್ದಪ್ಪ ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ
BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ
Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!
Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ
Ayodhya: ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ: ಶ್ರೀರಾಮುಲು ಆಕ್ರೋಶ
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?