ಬಸವ ಪಂಥದಿಂದ ದೇಶಾಭಿವೃದ್ಧಿ

ಸ್ಥಾವರ ಪೂಜೆ ಮೇಲುಗೈ ಸಾಧಿಸಿದ್ದರಿಂದ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿವೆ ಗುಡಿ-ಮಂದಿರಗಳು

Team Udayavani, Aug 29, 2019, 10:48 AM IST

29-Agust-8

ವಿಜಯಪುರ: ನಗರದ ಬಿಎಲ್ಡಿಇ ವೈದ್ಯಕೀಯ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಮತ್ತೆ ಕಲ್ಯಾಣ ಸಂವಾದ ಕಾರ್ಯಕ್ರಮವನ್ನು ಗದುಗಿನ ತೋಂಟದಾರ್ಯ ಮಠದ ಡಾ| ಸಿದ್ದರಾಮ ಶ್ರೀ ಉದ್ಘಾಟಿಸಿದರು.

ವಿಜಯಪುರ: ದೇಶದಲ್ಲಿ ಈಚೆಗೆ ಎಡ ಪಂಥ, ಬಲ ಪಂಥ ಅಂತೆಲ್ಲ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ದೇಶದ ಅಭಿವೃದ್ಧಿ ಹಾಗೂ ನೆಮ್ಮದಿಗಾಗಿ ಬಸವ ಪಂಥ ಮಾತ್ರವೇ ಇಂದಿನ ಅತ್ಯಂತ ಅವಶ್ಯ ಎಂದು ಗದಗ ತೋಂಟದಾರ್ಯ ಮಠದ ಡಾ| ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಬುಧವಾರ ನಗರದ ಬಿಎಲ್ಡಿಇ ಸಂಸ್ಥೆಯ ವೈದ್ಯಕೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು ಮಾತನಾಡಿದರು. ಎಡ-ಬಲ ಪಂಥ ಎಂಬ ವಿಷಯಗಳ ಕುರಿತು ಈಚೆಗೆ ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ ಇದೆಲ್ಲವೂಗಳಿಗಿಂತ ಸಮಾನತೆ, ಕಾಯಕ ಶ್ರೇಷ್ಠತೆಯನ್ನು ಸಾರುವ ಹಾಗೂ ದೇಶ ಕಟ್ಟುವ ಬಸವ ಪಂಥವೇ ಶ್ರೇಷ್ಠ ಎಂದು ಪ್ರತಿಪಾದಿಸಿದರು.

12ನೇ ಶತಮಾನದಲ್ಲಿ ಇದ್ದ ಶ್ರದ್ಧೆಯ ಭಕ್ತಿ ಭಾವ ಈಗ ಏಕೆ ಕಾಣುತ್ತಿಲ್ಲ ಎಂಬ ವಿದ್ಯಾರ್ಥಿನಿ ಗಂಭೀರವಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಣೆಹಳ್ಳಿಯ ಡಾ| ಪಂಡಿತಾರಾಧ್ಯ ಶ್ರೀಗಳು, 12ನೇ ಶತಮಾನದಲ್ಲಿ ಶರಣರು ಸ್ಥಾವರ ಪೂಜೆಗೆ ಆಸ್ಪದ ನೀಡದೇ ಆತ್ಮ ಸಾಕ್ಷಾತ್ಕಾರಕ್ಕಾಗಿ ಇಷ್ಟಲಿಂಗದ ಮೂಲಕ ಭಕ್ತಿ ಭಾವ ಮೂಡಿಸಿದರು. ಹೀಗಾಗಿ ತನ್ನಿಂದ ತಾನೇ ಭಕ್ತಿಭಾವದ ಪೂಜೆ, ಶ್ರದ್ಧೆ ನೆಲೆಗೊಂಡಿತು. ಆದರೆ ಈಗ ಸ್ಥಾವರ ಪೂಜೆ ಮೇಲುಗೈ ಸಾಧಿಸಿದ ಪರಿಣಾಮ ಗಲ್ಲಿಗಳಲ್ಲಿ ನಾಲ್ಕಾರು ಗುಡಿ-ಮಂದಿರಗಳು ತಲೆ ಎತ್ತುವಂತಾಗಿದೆ ಎಂದು ವಿಷಾದಿಸಿದರು.

ಇನ್ನು ವರ್ಷ ಪೂರ್ತಿ ದೇವರತ್ತ ಕಣ್ಣೆತ್ತಿ ನೋಡದ ವಿದ್ಯಾರ್ಥಿ ಯುವ ಸಮೂಹ ಪರೀಕ್ಷೆ ಬರುತ್ತಲೇ ದೇವರನ್ನೆಲ್ಲ ಹುಡುಕಿಕೊಂಡು ಆಲೆಯುತ್ತಾರೆ, ಕಾಯಿ-ಕರ್ಪೂರ ಮಾಡಿಸುತ್ತಾರೆ. ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಹಣ್ಣು-ಕಾಯಿ ಸೇರಿದಂತೆ ಇತರೆ ಕಾಣಿಕೆ-ದೇಣಿಗೆ ನೀಡುವುದಾಗಿ ಹರಕೆ ಹೊರುವ ಮೂಢನಂಬಿಕೆ ಮೈಗೂಡಿಸಿಕೊಂಡಿದ್ದಾರೆ. ಬದಲಾಗಿ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿ ಯುವ ಸಮೂಹ ಓದಿನಲ್ಲಿ ಶ್ರದ್ಧೆ ಇರಿಸಿಕೊಂಡು, ಬದ್ಧತೆಯಿಂದ ಶಿಕ್ಷಣ ಪಡೆದಲ್ಲಿ ಪರೀಕ್ಷೆಗಳಲ್ಲಿ ಸ್ವಯಂ ಪರಿಶ್ರಮದ ಓದಿನ ಉತ್ತರ ಬರೆದಲ್ಲಿ ಮಾತ್ರವೇ ಉತ್ತೀರ್ಣರಾಗಲು ಸಾಧ್ಯ ಎಂಬುದನ್ನು ಅರಿಯಬೇಕು ಎಂದು ವಿವರಿಸಿದರು.

ಗುರು, ಲಿಂಗ, ಜಂಗಮ ತಾತ್ಪರ್ಯವೇನು ಎಂದು ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು ಹಾಗೂ ಜಂಗಮನಿಗೆ ಧನ ಅರ್ಪಿಸುವುದು, ಧನ ಎಂದರೆ ಸ್ವಾಮೀಜಿಗಳಿಗೆ ಹಣ ಕೊಡಬೇಕು ಎಂದರ್ಥವಲ್ಲ. ಸಂಗ್ರಾಮ ಮನಸ್ಥಿತಿ ಬೇಡ ಎಂಬುದನ್ನು ಹಾಗೂ ಬದಲಾಗಿ ಅರಿವು-ಆಚಾರವುಳ್ಳ ಪ್ರತಿ ವ್ಯಕ್ತಿಯೂ ಜಂಗಮ ಎಂಬುದನ್ನು ಹೇಳುವುದಾಗಿದೆ. ಗಂಡು-ಹೆಣ್ಣು, ಜಾತಿ-ಧರ್ಮ, ಕಸಬುಗಳ ಮೇಲ್ಮೆ-ಕೀಳರಿಮೆ ಬೇಧವಿಲ್ಲದ ಹಾಗೂ ಸಂಗ್ರಹ ಪ್ರವೃತ್ತಿ ಇಲ್ಲದ ಬದುಕು ನಿಜವಾದ ಶರಣತ್ವಕ್ಕೆ ಸಾಕ್ಷಿ. ಈ ಕಾರಣಕ್ಕಾಗಿಯೇ ತನು, ಮನ, ಧನವನ್ನು ಅರ್ಪಿಸಬೇಕು ಎಂದು ಶಿವಶರಣು ಸಾರಿದ್ದಾರೆ ಎಂದು ವಿಶ್ಲೇಷಿಸಿದರು.

ಗುರು ಎಂದರೆ ಅಕ್ಷರ ಕಲಿಸದಾತ, ಜ್ಞಾನ ಉಣ ಬಡಿಸಿದಾತ ಇತನಿಗೆ ನಾವು ಗೌರವಿಸಬೇಕು. ಅಂದರೆ ನಮ್ಮ ತನು ಗುರುವಿಗೆ ಸಮರ್ಪಿಸಬೇಕು ಎಂಬರ್ಥ, ಲಿಂಗವೆಂದರೆ ಭಗವಂತನಲ್ಲ, ಭಗಂತನ ಕುರುಹು ಅಷ್ಟೇ, ನಮ್ಮೊಳಗಿನ ಶಿವನ ಚೈತನ್ಯ ರೂಪದ ಸಾಂಕೇತಿಕ ಸಾಧನವೇ ಇಷ್ಟಲಿಂಗ ಎಂದು ವಿವರಿಸಿದರು.

ವಿದ್ಯಾರ್ಥಿಯೊಬ್ಬ ನಾನು ಲಿಂಗಾಯತ ಎಂದ ಮಾತ್ರ ಮೋಕ್ಷ ಸಿಗುತ್ತದೆಯೇ ಎಂದಾಗ ಉತ್ತರಿಸಿದ ಪಂಡಿತಾರಾಧ್ಯ ಶ್ರೀಗಳು, ಕೇವಲ ಲಿಂಗಾಯತನಾದರೆ ಮೋಕ್ಷ ಸಿಗುವುದಿಲ್ಲ. ಲಿಂಗಾಯತ ಧರ್ಮದ ತತ್ವಗಳನ್ನು ಅನುಷ್ಠಾನಗೊಳ್ಳಬೇಕು, ಕಾಯಕ, ದಾಸೋಹ, ಲಿಂಗಪೂಜೆ ತತ್ವಗಳು ಶ್ರದ್ಧೆಯಿಂದ ಮನದಲ್ಲಿ ಸಾಕಾರ ರೂಪ ಪಡೆಯಬೇಕು, ಆಗ ಅದು ಮೋಕ್ಷಕ್ಕೆ ದಾರಿಯಾಗುತ್ತದೆ ಎಂದರು. 12ನೇ ಶತಮಾನದಿಂದಲೂ ಸಮಾನತೆಯ ಕೂಗು ಮೊಳಗಿದರೂ 21ನೇ ಶತಮಾನದಲೂ ಸಾಧ್ಯವಾಗಿಲ್ಲ ಏಕೆ ಎಂದು ಓರ್ವ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರತಿ ವ್ಯಕ್ತಿಯಲ್ಲಿ ಸಮಾನತೆ ಕೇಳುವ ಹಾಗೂ ಸಮಾಜದಲ್ಲಿ ಸಮಾನತೆ ಮೂಡಿಸುವ ಮನಸ್ಥಿತಿ ಬಂದಾಗಲೇ ಸಮಾನತೆ ಸಮಾಜ ನಿರ್ಮಾಣ ಸಾಧ್ಯ ಎಂದರು.

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.