ಕೃತಕ ಜಲ ಸಂಕಷ್ಟ ಭೀತಿ

ಅಗತ್ಯ ನೀರಿದ್ದರೂ ಗುತ್ತಿಗೆದಾರ-ಅಧಿಕಾರಿಗಳಿಂದ ನಿರ್ವಹಣೆಯಲ್ಲಿ ಲೋಪ

Team Udayavani, May 13, 2019, 11:21 AM IST

13-MAY-10

ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಆದರ್ಶ ನಗರ ನಿವಾಸಿಗಳು ರಸ್ತೆ ಸಂಚಾರ ತಡೆದು ಖಾಲಿ ಕೊಡಗಳ ಪ್ರದರ್ಶಿಸಿ ಪ್ರತಿಭಟಿಸಿದರು. (ಸಂಗ್ರಹ ಚಿತ್ರ)

ವಿಜಯಪುರ: ಐತಿಹಾಸಿಕ ರಾಜಧಾನಿ ವಿಜಯಪುರ ನಗರಕ್ಕೆ ಬೇಸಿಗೆ ಹಂಗಾಮಿನ ಬಿರು ಬಿಸಿಲಿನ ಈ ಹಂತದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇತರೆ ಕಡೆಗಳಲ್ಲಿ ಜಲ ಮೂಲಗಳಿಲ್ಲದೇ ಸಂಕಷ್ಟ ಎದುರಾಗಿದ್ದರೆ, ವಿಜಯಪುರ ನಗರದ ಮಟ್ಟಿಗೆ ನೀರಿದ್ದರೂ ಗುತ್ತಿಗೆದಾರರ ಕಾಮಗಾರಿ ವಿಳಂಬ, ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ಲೋಪದಿಂದಾಗಿ ಕೃತಕ ಜಲ ಸಂಕಷ್ಟದಿಂದಾಗಿ ಗುಮ್ಮಟ ನಗರಿ ಜನರು ತತ್ತರಿಸುವಂತಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ಗಡಿಯಲ್ಲಿ ಬಂದಿರುವ ಕಾರಣ ಜನರು ಬಿಸಿಲ ಬೇಗೆಗೆ ತತ್ತರಿಸುವಂತೆ ಮಾಡಿದೆ. ವಿಜಯಪುರ ನಗರಕ್ಕೆ ಆಲಮಟ್ಟಿಯ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಿನ್ನೀರಿನಿಂದ ಜಲಮೂಲ ಕಂಡುಕೊಳ್ಳಲಾಗಿದೆ. ನಗರದ ಜನಸಂಖ್ಯೆಗೆ ಬೇಕಾಗುವ ನೀರಿಗಾಗಿ ಜಲಾಶಯದಲ್ಲಿ 510 ಅಡಿ ನೀರು ಇರುವಂತೆ ನಿರ್ವಹಣೆ ಮಾಡಲಾಗಿದೆ. ಈ ಜಲಾಶಯದ ಜಲ ಮೂಲದಿಂದ ನಗರದಲ್ಲಿ ಸದ್ಯ ಇರುವ ಸುಮಾರು 4 ಲಕ್ಷ ಜನಸಂಖ್ಯೆಗೆ ನಿತ್ಯವೂ ಸುಮಾರು 75 ಗ್ಯಾಲನ್‌ ನೀರು ಪಡೆಯಲಾಗುತ್ತದೆ.

ವಿಜಯಪುರ ನಗರಕ್ಕೆ ನೀರು ಪೂರೈಸುವ ಜಲ ಸಂಗ್ರಹಗಳಾದ ಭೂತನಾಳ ಕೆರೆಯಲ್ಲಿ 8 ಎಂಎಲ್ಡಿ, ಕೃಷ್ಣಾ ನದಿಯ ಕೊಲಾØರ ಜಾಕ್‌ವೆಲ್ನಲ್ಲಿ 65 ಎಂಎಲ್ಡಿ, ಮಲಘಾಣ ಜಾಕ್‌ವೆಲ್ನಿಂದ 5 ಎಂಎಲ್ಡಿ ನೀರು ಸಂಗ್ರಹವಿದೆ.

ಆದರೆ ನಗರದ ಜನರಿಗೆ ನೀರಿನ ಸಮಸ್ಯೆ ನೀಗುವುದಕ್ಕಾಗಿ ನಗರದಲ್ಲಿ ಕಳೆದ ಆರೇಳು ವರ್ಷಗಳಿಂದ 24×7 ನೀರು ಪೂರೈಕೆ ಯೋಜನೆ ರೂಪಿಸಿದ್ದು, ಈ ವರೆಗೆ ಪೂರ್ಣಗೊಂಡಿಲ್ಲ. ಇದರಿಂದ ನಗರದ ಜನತೆ ವ್ಯವಸ್ಥೆಯ ಲೋಪದಿಂದಾಗಿ ನೀರಿನ ಕೃತಕ ಅಭಾವ ಎದುರಿಸುವಂತಾಗಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಜೈನ್‌ ಸಂಸ್ಥೆ ಪ್ರಸಕ್ತ ವರ್ಷದ ನವೆಂಬರ್‌ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಬೇಕಿದ್ದರೂ, ವಿವಿಧ ಹಂತಗಳ ಕಾಮಗಾರಿಗಳಲ್ಲಿ ತೀರಾ ವಿಳಂಬ ನೀತಿ ಅನುಸರಿಸುತ್ತಿದೆ. ವಿಳಂಬ ಕಾಮಗಾರಿಗಾಗಿ 2 ಕೋಟಿ ರೂ. ದಂಡ ವಿಧಿಸಿದ್ದರೂ ಕಾಮಗಾರಿ ವೇಗ ಪಡೆದಿಲ್ಲ.

ಇತ್ತ ನಗರದಲ್ಲಿ ಈಗಾಗಲೇ ಪೂರ್ಣಗೊಂಡಿರುವ 6 ಹಾಗೂ ಹೊಸದಾಗಿ ಸಂಪರ್ಕ ಕಲ್ಪಿಸಲಾಗುತ್ತಿರುವ 8 ವಾರ್ಡ್‌ಗಳಲ್ಲಿ 24×7 ನೀರಿನ ಪೂರೈಕೆಗೆ ಮುಂದಾಗಿದ್ದರೂ ವಾಸ್ತವಿಕವಾಗಿ ವಾರದಲ್ಲಿ 3 ದಿನ ನಿರಂತರ ನೀರು ಹರಿಸಿ, 4 ದಿನ ಸಂಪೂರ್ಣ ಸ್ಥಗಿತ ಮಾಡಲಾಗುತ್ತಿದೆ. ಸಂಪರ್ಕ ಕಲ್ಪಿಸಿರುವ ಪೈಪ್‌ ಮಾರ್ಗದಲ್ಲಿ 0.7 ಕೆ.ಜಿ. ಒತ್ತಡದ ನೀರು ಹರಿಯಬೇಕು. ಆದರೆ ಈ ಪ್ರಮಾಣದ ನೀರು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳು ಸಮಸ್ಯೆಗೆ ಪ್ರಾಯೋಗಿಕ ಪರೀಕ್ಷೆಯ ನೆಪ ಹೇಳುತ್ತಿದ್ದಾರೆ. ಇನ್ನು 24×7 ಸಂಪರ್ಕ ಕಲ್ಪಿಸದ ಇತರೆ 21 ವಾರ್ಡ್‌ಗಳಿಗೆ ವಿವಿಧ ಜಲಮೂಲಗಳಿಂದ 8-10 ದಿನಗಳಿಗೆ ಒಮ್ಮೆ ನೀರು ಸರಬರಾಜಾಗುತ್ತಿದೆ.

2017ರಲ್ಲಿ ಅಲಮಟ್ಟಿಯ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಲ್ಲಿ ನೀರು ಸಂಗ್ರಹಣೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿತ್ತು. ಪರಿಣಾಮ ಆಗ ಜಲಚರಗಳ ಜೀವ ಸಂರಕ್ಷಣೆಗೆ ಜಲಾಶಯದಲ್ಲಿ ಸಂಗ್ರಹ ಇದ್ದ ಡೆಡ್‌ ಸ್ಟೋರೆಜ್‌ ನೀರನ್ನು ಪಂಪ್‌ ಮಾಡಿ ಕೊಲ್ಹಾರ ಜಾಕ್‌ವೆಲ್ಗೆ ಹರಿಸಲಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಂದು ಜಲ ಸಂಪನ್ಮೂಲ ಸಚಿವರಾಗಿದ್ದ ಡಾ| ಎಂ.ಬಿ. ಪಾಟೀಲ ಬೇಸಿಗೆ ಹಂಗಾಮಿನಲ್ಲೂ ನಗರಕ್ಕೆ ಅಗತ್ಯ ಇರುವಷ್ಟು ನೀರನ್ನು ಶಾಶ್ವತವಾಗಿ ಜಲಾಶಯದಲ್ಲಿ ಸಂಗ್ರಹಿಸಿ ಇರಿಸಲು ಕ್ರಮ ಕೈಗೊಂಡಿದ್ದರು.

ಈ ಬಾರಿ ನೀರಿನ ಸಂಗ್ರಹ ಸಮಸ್ಯೆ ಇಲ್ಲದಿದ್ದರೂ ನೀರು ನಿರ್ವಹಣೆ ಲೋಪದಿಂದ ನಗರದ ಜನರು ಅಧಿಕಾರಿಗಳು ಸೃಷ್ಟಿಸಿರುವ ಕೃತಕ ಜಲ ಸಂಕಷ್ಟ ಎದುರಿಸುವಂತಾಗಿದೆ. ಭೂತನಾಳ ಕೆರೆ ಅವಲಂಬಿತ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಎದುರಾಗಿದೆ. ಆದರ್ಶ ನಗರ, ಕೆಎಚ್ಬಿ ಕಾಲೋನಿ, ಆಶ್ರಮ, ಗಚ್ಚಿನಕಟ್ಟಿ ಕಾಲೋನಿ, ಡಿಸಿಸಿ ಮುಖ್ಯ ಶಾಖೆ ಸುತ್ತಮುತ್ತಲಿನ ಬಡಾವಣೆಗಳು, ಆಲಕುಂಟೆ ನಗರ ಹೀಗೆ ಅನೇಕ ಭಾಗಗಳಲ್ಲಿ 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು ಜನತೆಯನ್ನು ಹೈರಾಣಕ್ಕೆಡವಿದೆ.

ಇದರಿಂದ ರೊಚ್ಚಿಗೆದ್ದಿರುವ ನಗರದ ಹಲವು ಬಡಾವಣೆ ಜನರು ಈಗಾಗಲೇ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ನಗರದ ಆಲಕುಂಟೆ ನಗರ, ಆದರ್ಶನಗರ ಸೇರಿ ಹಲು ಬಡಾವಣೆಗಳ ಜನರು ಬೀದಿಗಿಳಿದು ಖಾಲಿ ಕೊಡಗಳ ಮೂಲಕ ಹೋರಾಟ ನಡೆಸಿದ್ದಾರೆ.

ಆದರ್ಶನಗರ ಭಾಗದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆಪಾಯದ ಕುರಿತು ಸಾರ್ವಜನಿಕರು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ ಎಚ್ಚರಿಕೆ ನೀಡಿದ್ದರು. ಪಾಲಿಕೆ ಕೆಲ ಸದಸ್ಯರು ಜಲ ಮಂಡಳಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ಪತ್ರ ಬರೆದು ಮುನ್ನೆಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯಲಾರಂಭಿಸಿದೆ.

ಇನ್ನಾದರೂ ಜನರ ತಾಳ್ಮೆ ಪರೀಕ್ಷೆ ಮಾಡದೇ ಸಂಕಷ್ಟದ ಸಂದರ್ಭದಲ್ಲಿ ತ್ವರಿತ ಪರಿಹಾರಕ್ಕಾಗಿ ಜಿಲ್ಲೆಯ ಸಚಿವ-ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕಿದೆ. ಇದರೊಂದಿಗೆ ಜನರು ಅನುಭವಿಸುತ್ತಿರುವ ಜಲ ಸಂಕಷ್ಟಕ್ಕೆ ಪರಿಹಾರ ಕಂಡುಕೊಡಬೇಕಿದೆ.

ನಗರದಲ್ಲಿ ಜನರು ಯಾವುದೇ ವಾರ್ಡ್‌ ಯಾವುದೇ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಮಹಾನಗರ ಪಾಲಿಕೆ ಪೌರಾಯುಕ್ತ ಡಾ| ಔದ್ರಾಮ್‌ ಮೊ. 9449535101 ಅಥವಾ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಇ.ಇ. ಪ್ರಕಾಶ ಮಾಡಿಹಾಳ ಮೊ.9480813142 ಸಂಖ್ಯೆಗೆ ಸಂಪರ್ಕಿಸುವಂತೆ ಪಾಲಿಕೆ ಪ್ರಕಟಣೆ ಕೋರಿದೆ.

ನಗರದಲ್ಲಿ ಹೊಸದಾಗಿ 8 ವಾರ್ಡ್‌ಗಳಲ್ಲಿ ಕಲ್ಪಿಸಿರುವ 24×7 ಸಂಪರ್ಕ ವ್ಯವಸ್ಥೆಯಲ್ಲಿ ನಿರ್ವಹಣೆ ಲೋಪವಾಗುತ್ತಿದೆ. ಗುತ್ತಿಗೆದಾರರ ನಿಧಾನಗತಿ ಕಾಮಗಾರಿ ಹಾಗೂ ನಿರ್ವಹಣೆಯಲ್ಲಿನ ಲೋಪವೇ ಇದಕ್ಕೆ ಕಾರಣವಾಗಿದೆ. ನಗರದ ಜನರು ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇ 13ರಂದು ಜಲಮಂಡಳಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ.
ಡಾ| ಔದ್ರಾಮ್‌,
ಪೌರಾಯುಕ್ತರು, ಮಹಾನಗರ ಪಾಲಿಕೆ, ವಿಜಯಪುರ

ಜಿ.ಎಸ್‌. ಕಮತರ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.