ರಾಜ್ಯಪಟ್ಟಿಯಲ್ಲಿ ಗುಮ್ಮಟಕ್ಕೂ ಸ್ಥಾನ
ಪ್ರವಾಸೋದ್ಯಮ ದಿನಾಚರಣೆಗೆ ಈ ಬಾರಿ ಭಾರತಕ್ಕೆ ಆತಿಥ್ಯ ಪ್ರವಾಸೋದ್ಯಮ ಮತ್ತು ಉದ್ಯೋಗ' ಘೋಷವಾಕ್ಯ
Team Udayavani, Sep 27, 2019, 1:24 PM IST
ವಿಶೇಷ ವರದಿ
ವಿಜಯಪುರ: ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಈ ಬಾರಿ ಭಾರತ ಆತಿಥ್ಯ ವಹಿಸಿದ್ದು, ಸೆ.27ರಂದು ನಡೆಯುವ “ಸರ್ವರಿಗೂ ಉಜ್ವಲ ಭವಿಷ್ಯ’ ಟ್ಯಾಗ್ ಲೈನ್ನೊಂದಿಗೆ “ಪ್ರವಾಸೋದ್ಯಮ ಹಾಗೂ ಉಜ್ವಲ ಭವಿಷ್ಯ’ ಘೋಷವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.
ಮತ್ತೂಂದೆಡೆ ದೇಶದ ಜನತೆಗೆ ಪ್ರಧಾನಿ ಮೋದಿ ವಿಶ್ವ ಸುತ್ತುವ ಮೊದಲು ಪ್ರತಿ ಭಾರತೀಯ ತನ್ನದೇ ದೇಶದೊಳಗಿನ ಪಾರಂಪರಿಕ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವುದು ಅಗತ್ಯ ಎಂದು ಕರೆ ನೀಡಿದ್ದಾರೆ. ಪ್ರಧಾನಿ ಕರೆಯಂತೆ ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪಟ್ಟಿ ಮಾಡಿರುವ 20 ತಾಣಗಳಲ್ಲಿ ವಿಜಯಪುರ ಜಿಲ್ಲೆಯ ಗೋಲಗುಮ್ಮಟಕ್ಕೂ ಸ್ಥಾನ ಸಿಕ್ಕಿದೆ.
ಕಳೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾರತೀಯರು ದೇಶದ ಪ್ರವಾಸದ ಕುರಿತು ಆಸಕ್ತಿ ತೋರುವಂತೆ ಕರೆ ನೀಡಿದ್ದರು. ವಿಶ್ವದ ಇತರೆ ರಾಷ್ಟ್ರಗಳ ಪ್ರವಾಸಕ್ಕೆ ಹೊರಡುವ ಮುನ್ನ ನಮ್ಮದೇ ದೇಶದಲ್ಲಿರುವ ಕನಿಷ್ಟ 15 ತಾಣಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವ ಕೆಲಸವಾಗಬೇಕು. ಇದರಿಂದ ದೇಶದಲ್ಲಿ ಒಂದೆಡೆ ಪ್ರವಾಸೋದ್ಯಮ ಅಭಿವೃದ್ಧಿಗೊಂಡು ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ. ಭಾರತೀಯರಾದ ನಮಗೆ ನಮ್ಮ ದೇಶದ ಸಮಗ್ರ ಮಾಹಿತಿ ಹೊಂದಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದರು.
ದೇಶ ಸುತ್ತ-ಇಲ್ಲವೇ ಕೋಶ ಓದು ಎಂಬಂತೆ ರಾಜ್ಯದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ರಾಜ್ಯದ 20 ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಶ್ರೀರಂಗಪಟ್ಟಣದ ಕೋಟೆ, ತಲಕಾವೇರಿ, ಬನವಾಸಿ, ಯಾದಗಿರಿ ಕೋಟೆ, ಬೀದರ ಕೋಟೆ, ಕಲಬುರಗಿ ಕೋಟೆ, ಚಿತ್ರದುರ್ಗದ ಕೋಟೆ, ನಂದಿಬೆಟ್ಟ, ಭೋಗಾನಂದಿಶ್ವರ ದೇವಾಲಯ, ಆನೆಗುಂದಿ ಸೇರಿದಂತೆ ಇತರೆ ಸ್ಮಾರಕಗಳನ್ನು ಪ್ರವಾಸೋದ್ಯಮ ಆಕರ್ಷಣೆಗೆ ಅಭಿವೃದ್ಧಿ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಯೋಜಿಸಲಾಗಿದೆ. ಇದರಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟ ಸ್ಮಾರಕವೂ ಸೇರಿದೆ ಎಂಬುದು ಗಮನೀಯ.
ಇಂದು ವಿವಿಧ ಕಾರ್ಯಕ್ರಮ: ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಅಪರ ಜಿಲ್ಲಾಧಿಕಾರಿ ಪ್ರಸನ್ನ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸೋಮಲಿಂಗ್ ಗೆಣ್ಣೂರು ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನವಾದ ಸೆ.27ರಂದು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಲಪಡಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆಯುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ. ಪಾಟೀಲ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ಪ್ರತ್ಯೇಕ www.vijayapuratourism.in ವೆಬ್ಸೈಟ್, ರಾಜ್ಯದಲ್ಲೇ ಮೊದಲ ಬಾರಿಗೆ ಅಂಧರಿಗಾಗಿ ಪ್ರವಾಸಿ ಧ್ವನಿ ಮಾರ್ಗದರ್ಶಿ ಆ್ಯಪ್, ದೈಹಿಕ ವಿಕಲಚೇತನರಿಗೆ 360 ಡಿಗ್ರಿ ವಚ್ಯೂವಲ್ ರಿಯಾಲಿಟಿ ಟೂರ್ ವಿಡಿಯೋ ಆ್ಯಪ್, ಗುಮ್ಮಟ ಏರಲಾಗದ ವಿಕಲಚೇತನರಿಗೆ ವಿಜಯಪುರ ದರ್ಶನ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ವಿ.ಆರ್, ಪ್ರವಾಸಿ ಧ್ವನಿ ಮಾರ್ಗದರ್ಶಿಗಳಂಥ ಆಧುನಿಕ ತಾಂತ್ರಿಕ ಸೌಲಭ್ಯಗಳು ಬಿಡುಗಡೆ ಪಡೆಯಲಿವೆ. 8 ಜನರಿಗೆ ಮಾರ್ಗದರ್ಶಿಗಳಿಗೆ ಸಮವಸ್ತ್ರ ವಿತರಣೆ ನಡೆಯಲಿದೆ.
ಇದಲ್ಲದೇ ಬೇಗಂ ತಾಲಾಬ್ನಲ್ಲಿ ಬೋಟಿಂಗ್, ಭೂತನಾಳ ಕೆರೆಯ ಜಲಾಭಿಮುಖ ಕೆರೆ ಅಭಿವೃದ್ಧಿಗೆ ವೂಡಾ ಯೋಜನೆಯಡಿ 10 ಕೋಟಿ ರೂ. ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆಯಂತ ಹಲವು ಯೋಜನೆಗಳಿಗೆ ಚಾಲನೆ ದೊರೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ