ಅಪಾಯದಲ್ಲಿದೆ ಕಾಗಿಣಾ ಸೇತುವೆ
ಭಾರಿ ವಾಹನಗಳ ಭಾರ ತಾಳದೆ ಕಳೆದುಕೊಂಡಿದೆ ಶಕ್ತಿ •ಮುರಿದು ಬಿದ್ದಿವೆ ರಕ್ಷಣಾ ಕಂಬಗಳು
Team Udayavani, Sep 16, 2019, 11:08 AM IST
•ಮಡಿವಾಳಪ್ಪ ಹೇರೂರ
ವಾಡಿ: ಕಾಗಿಣಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಈಗ ಅಪಾಯದ ಅಂಚಿನಲ್ಲಿದೆ. ವಾಹನಗಳ ನಿರಂತರ ಅಪಘಾತ ಘಟನೆಗಳಿಗೆ ತುತ್ತಾಗಿ ಸೇತುವೆ ಮೇಲಿನ ಸುರಕ್ಷಾ ಕಂಬಗಳು ಪುಡಿಪುಡಿಯಾಗಿವೆ. ಸೇತುವೆಯತ್ತ ಬರುವ ವಾಹನಗಳಿಗೆ ಸ್ವಾಗತ ಕೋರಲು ಹೆಜ್ಜೆ-ಹೆಜ್ಜೆಗೂ ಕಂದಕಗಳು ಸೃಷ್ಟಿಯಾಗಿವೆ. ಇಕ್ಕಟ್ಟಾದ ಸೇತುವೆ ಮೇಲೆ ಹಲವಾತು ದುರ್ಘಟನೆಗಳಿಗೆ ಸಂಭವಿಸಿವೆ.
ಕಲಬುರಗಿ-ಯಾದಗಿರಿ ನಡುವಿನ ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಕೇಂದ್ರ ಮಾಜಿ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಇಚ್ಛಾಶಕ್ತಿಯಿಂದ ಸಾರಿಗೆ ಸೌಲಭ್ಯ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಬಸ್ ಸಂಚಾರವೇ ಇಲ್ಲವಾಗಿದ್ದ ಈ ರಸ್ತೆಯಲ್ಲೀಗ ಪ್ರತಿ 15 ನಿಮಿಷಕ್ಕೊಂದು ಈಶಾನ್ಯ ಸಾರಿಗೆ ಸಂಸ್ಥೆ ಬಸ್ಗಳು ಹಾಗೂ ಪ್ರತಿ ನಿಮಿಷಕ್ಕೊಂದು ಸಿಮೆಂಟ್ ಲಾರಿ ಸಾಗುವುದನ್ನು ಕಾಣಬಹುದಾಗಿದೆ.
ರಸ್ತೆ ಅಭಿವೃದ್ಧಿಯಾಗಿದೆ ಆದರೆ ಶಿಥಿಲ ಸೇತುವೆ ಅಪಾಯ ಆಹ್ವಾನಿಸುತ್ತಿದ್ದರೂ ಯಾರೂ ಕೇಳುವವರು ಇಲ್ಲದಂತಾಗಿದೆ.
ವಾಡಿ ಮತ್ತು ಶಹಾಬಾದ ನಗರಗಳ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಕಾಗಿಣಾ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ವಾಡಿ ಎಸಿಸಿ ಕಂಪನಿ, ಚಿತ್ತಾಪುರದ ಒರಿಯಂಟ್ ಸಿಮೆಂಟ್ ಘಟಕ ಹಾಗೂ ಸುಮಾರು 400ಕ್ಕೂ ಹೆಚ್ಚು ಕಲ್ಲು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಸಿಮೆಂಟ್ ಸೇರಿದಂತೆ ಪರ್ಷಿ ಕಲ್ಲುಗಳು ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಗೂಡ್ಸ್ ಲಾರಿಗಳ ಓಡಾಟಕ್ಕೇನು ಲೆಕ್ಕವಿಲ್ಲ. ಭಾರಿ ವಾಹನಗಳ ಭಾರ ತಾಳದೆ ಕಾಗಿಣಾ ಸೇತುವೆ ತನ್ನ ಶಕ್ತಿ ಸಾಮರ್ಥ್ಯ ಕಳೆದುಕೊಂಡಿರುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಭಾರಿ ವಾಹನಗಳ ಡಿಕ್ಕಿಯಿಂದ ಸೇತುವೆ ಮೇಲೆ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಕಾಂಕ್ರಿಟ್ ರಕ್ಷಣಾ ಗೋಡೆಗಳು ಮುರಿದು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದುಕೊಂಡು ಸೇತುವೆ ದಾಟಬೇಕಾದ ಭೀತಿ ಎದುರಾಗಿದೆ.
ಇತ್ತ ಚಿತ್ತ ಹರಿಸುವರೇ ಸಂಸದ ಜಾಧವ
ಗ್ರಾಮೀಣ ರಸ್ತೆಯಂತಿದ್ದ ಹದಗೆಟ್ಟ ಕಲಬುರಗಿ-ಗುತ್ತಿ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಿರುವ ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕಿರಿದಾದ, ಯಮಸ್ವರೂಪಿ ಕಾಗಿಣಾ ಸೇತುವೆ ಅಗಲೀಕರಣ ಮಾಡಿಸುವಲ್ಲಿ ಮರೆತಂತೆ ಕಾಣುತ್ತಿದೆ. ಈಗ ಸಂಸದ ಡಾ| ಉಮೇಶ ಜಾಧವ ಕಾಗಿಣಾ ಸೇತುವೆ ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವರೇ ಎಂಬ ಪ್ರಶ್ನೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್