ವಿಮೆ ಮಾಡಿಸಲು ರೈತರ ಹಿಂದೇಟು!

ಕಳೆದ ವರ್ಷ ಅರ್ಧಕ್ಕೂ ಹೆಚ್ಚು ರೈತರಿಗೆ ಸಿಗದ ಬೆಳೆವಿಮೆ

Team Udayavani, Jul 18, 2019, 11:16 AM IST

Udayavani Kannada Newspaper

ಅನೀಲ ಬಸೂದೆ
ಯಾದಗಿರಿ
: ಜಿಲ್ಲೆಯ ರೈತರಿಗೆ 2018-19ನೇ ಸಾಲಿನ ಬೆಳೆ ವಿಮೆ ಹಣ ಬಾರದೇ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ಬೆಳೆ ವಿಮೆ ಮಾಡಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಮೊದಲೇ ಬರದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ವಿಮೆ ಕಂಪನಿಗಳು ನಷ್ಟ ಪರಿಹಾರ ನೀಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

2015-16ನೇ ಕೃಷಿ ಗಣತಿ ಪ್ರಕಾರ ಜಿಲ್ಲೆಯಲ್ಲಿ 232623 ರೈತರಿದ್ದು ಇವರಲ್ಲಿ 2018-19ನೇ ಸಾಲಿನಲ್ಲಿ 27551ರೈತರು ವಿವಿಧ ಬೆಳೆಯ ವಿಮೆ ವಂತಿಕೆ ಪಾವತಿಸಿದ್ದಾರೆ. ಆದರೆ ಮಳೆ ಆಗದೇ ಇರುವುದರಿಂದ ಬೆಳೆ ನಷ್ಟವಾಗಿದ್ದರೂ ಸತತ ಬರದಿಂದ ಕಂಗಾಲಾಗಿರುವ ರೈತರಿಗೆ ಸಮರ್ಪಕ ವಿಮೆ ಪಾತಿಯಾಗಿಲ್ಲ. ಕೇವಲ 12527 ರೈತರಿಗೆ 14,42,65,589 ರೂಪಾಯಿ ರೈತರ ಖಾತೆಗೆ ಜಮಾಗೊಂಡಿದೆ ಎಂದು ದಾಖಲೆಗಳು ಹೇಳುತ್ತಿವೆ.

27 ಸಾವಿರಕ್ಕೂ ಹೆಚ್ಚು ರೈತರು ವಿಮಾ ಕಂಪನಿಗೆ ವಂತಿಗೆ ಪಾವತಿಸಿದ್ದಾರೆ. ಇವರ ಜಮೀನಿನಲ್ಲಿ ಬೆಳೆ ನಷ್ಟವಾಗಿದೆ ಪರಿಹಾರ ಮಾತ್ರ ಸಿಕ್ಕಿಲ್ಲ. ಹಾಗಾಗಿ ಬೆಳೆ ವಿಮೆ ವಿಷಯವಾಗಿ ಜಿಲ್ಲೆಯ ರೈತರು ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ.

ಈ ಮಧ್ಯೆ ಕೆಂಭಾವಿ ವ್ಯಾಪ್ತಿಯ ರೈತ ತಿರುಪತಿ ಎಂಬುವರು ತನ್ನ 9 ಎಕರೆ ಜಮೀನಿನಲ್ಲಿ ತೊಗರಿ ಬಿತ್ತನೆ ಮಾಡಿ ವಿಮೆ ಕಂಪನಿಗೆ 3059 ರೂ. ವಂತಿಗೆ ಪಾವತಿಸಿದ್ದರು. ಕಂಪನಿಯ ಷರತ್ತಿನ ಪ್ರಕಾರ ಅವರ 9 ಎಕರೆಯಲ್ಲಿನ ಬೆಳೆಗೆ 152976 ಪರಿಹಾರ ನೀಡಬೇಕಿತ್ತು. ಆದರೆ ವಿಮಾ ಕಂಪನಿ ಕೇವಲ 13 ಸಾವಿರ ರೂ.ಗಳನ್ನು ಖಾತೆಗೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ರೈತರು ಬೆಳೆವಿಮೆ ಪಾವತಿಸಿದ್ದರೂ ಅವರಿಗೆ ಬೆಳೆ ವಿಮೆ ಸಿಗದಿರಲು ಹಲವು ತಾಂತ್ರಿಕ ಕಾರಣಗಳು ಕಂಡು ಬಂದಿವೆ. ಪ್ರಮುಖವಾಗಿ ಬೆಳೆಯ ವಿಮಾ ಪರಿಹಾರ ವಿತರಣೆ ವೇಳೆ ಕಳೆದ 5 ವರ್ಷಗಳ ಇಳುವರಿ ಗಮನಿಸಿ ಬೆಳೆ ವಿಮೆ ಕಟ್ಟಿದ ವರ್ಷ ಆ ಭಾಗದ ಗ್ರಾಪಂ, ಹೋಬಳಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ ಇಳುವರಿ ಆಧಾರವಾಗಿಟ್ಟುಕೊಂಡು ವಿಮೆ ಪರಿಹಾರ ನೀಡಲಾಗುತ್ತಿದೆ ಎನ್ನುವ ಅಂಶ ತಿಳಿದು ಬಂದಿದೆ. ರೈತರ ಪಹಣಿಯಲ್ಲಿ ನೋಂದಾಯಿಸಿರುವ ಬೆಳೆ, ಸಾಲದ ವೇಳೆ ನೋಂದಾಯಿಸಿರುವುದು ಒಂದೇ ಆಗಿರಬೇಕು. ಉದಾ: ತೊಗರಿ ಬೆಳೆಗೆಂದು ಸಾಲ ಪಡೆದು ಹೊಲದಲ್ಲಿ ಹತ್ತಿ ಬೆಳೆದರೆ ಪರಿಹಾರದಿಂದ ವಂಚಿತವಾಗಬಹುದು ಎನ್ನಲಾಗಿದೆ.

ಪ್ರಮುಖವಾಗಿ ಬೆಳೆ ವಿಮೆಯ ವಂತಿಕೆ ಕಟ್ಟುವ ಸಮಯದಲ್ಲಿ ಯಾವ ಬೆಳೆಯನ್ನು ನಮೂದಿಸಲಾಗಿದೆಯೋ ಅದೇ ಬೆಳೆ ಬಿತ್ತಿರಬೇಕು. ಬೇರೆ ಬೀಜ ಬಿತ್ತಿದರೆ ಸಮಸ್ಯೆಯಾಗುತ್ತದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಿಂದ ತಿಳಿದು ಬಂದಿದೆ.

ಹಾಗಾಗಿ ಬೆಳೆ ವಿಮೆ ಮಾಡಿಸುವ ಸಂದರ್ಭದಲ್ಲಿ ರೈತರು ವಿಮೆ ಮಾಡಿಸುವ ವೇಳೆ ಎಲ್ಲವನ್ನೂ ಸರಿಯಾಗಿ ಅರಿಯುವುದು ಒಳಿತು.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.