ಕಠಿಣ ಪರಿಶ್ರಮದಿಂದ ಸಾಧನೆ
ವಿದ್ಯಾರ್ಥಿಗಳು ಸಮಸ್ಯೆಗಳ ನಡುವೆ ಶ್ರಮಪಟ್ಟಲ್ಲಿ ಖಂಡಿತಾ ಫಲ
Team Udayavani, Jul 31, 2019, 11:24 AM IST
ಯಾದಗಿರಿ: ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ ನೀಟ್ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಯಾದಗಿರಿ: ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿ ಉಚಿತವಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಜಿಲ್ಲೆಯ ಮೂವರು ಸಾಧಕ ವಿದ್ಯಾರ್ಥಿಗಳನ್ನು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ತಮ್ಮ ಕಾರ್ಯಾಲಯದಲ್ಲಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿ ಅವರು, ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು ಗರಿಷ್ಠ ಸಾಧನೆ ಮಾಡಿದ್ದು, ಇತರರಿಗೆ ಮಾದರಿಯಾಗಿದೆ. ಹಿಮಲಾಪುರದ ಸಾಯಿ ಕಿರಣರೆಡ್ಡಿ 631 ಅಂಕ ಪಡೆಯುವ ಮೂಲಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿರುವುದು ನಾಡಿಗೆ ಮಾದರಿಯಾಗಿದೆ. ಹಿಮಲಾಪುರ ಗ್ರಾಮದ ಭವಾನಿ 507 ಅಂಕ ಗಳಿಸಿ ಬಳ್ಳಾರಿ ವಿಜಯನಗರ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸೀಟು ಪಡೆದುಕೊಂಡಿದ್ದಾಳೆ. ಇನ್ನು ಬೆಳಗೇರಾ ಗ್ರಾಮದ ನಿತೀಶಕುಮಾರ 497 ಅಂಕ ಗಳಿಸಿ ವಿಮ್ಸ್ನಲ್ಲಿಯೇ ಸೀಟು ಪಡೆದುಕೊಂಡು ಸಾಧನೆ ಗೈದಿರುವುದು ವಿಶೇಷ. ಈ ಮೂವರದ್ದು, ಜಿಲ್ಲೆಗೆ ಹೆಮ್ಮೆ ತರುವ ಸಾಧನೆಯಾಗಿದೆ ಎಂದು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಮೂವರು ಸಾಧಕ ವಿದ್ಯಾರ್ಥಿಗಳ ಪೋಷಕರಿಗೂ ಸನ್ಮಾನ ನೆರವೇರಿಸಲಾಯಿತು. ಮೂವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಕಠಿಣ ಪರಿಶ್ರಮದಿಂದ ಓದಿದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳ ನಡುವೆಯೇ ಶ್ರಮಪಟ್ಟಲ್ಲಿ ಖಂಡಿತ ಫಲ ಸಿಗುತ್ತದೆ ಎನ್ನಲು ಈ ಮೂವರು ಸಾಧಾರಣ ವಿದ್ಯಾರ್ಥಿಗಳ ಅಸಾಧಾರಣ ಸಾಧನೆ ಸಾಕ್ಷಿಯಾಗಿದೆ ಎಂದರು.
ನಿಂಗಪ್ಪ, ಮಾರ್ಥಂಡಪ್ಪ ಮೈಲಾಪುರ, ನಾಗಪ್ಪ ತಡಿಬಿಡಿ, ಗುಂಜಲಪ್ಪ ಆಶನಾಳ, ಭೀಮರಾಯ ಗಣಪೂರ, ಶಂಕರ ಬಸವರಾಜಪ್ಪ ಮುಷ್ಟೂರ, ಸಾಯಿಬಣ್ಣ ನೀಲಳ್ಳಿ, ನರಸಪ್ಪ ಬಾಗ್ಲಿ, ಭೀಮರಾಯ ಕಿಲ್ಲನಕೇರಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು