ಬಂಡವಾಳಶಾಹಿ ಕಾಂಗ್ರೆಸ್-ಬಿಜೆಪಿಗೆ ತಕ್ಕ ಪಾಠ ಕಲಿಸಿ
ಜಿಎಸ್ಟಿಯಿಂದಾಗಿ ಸಹಸ್ರಾರು ಸಣ್ಣ ಉದ್ಯಮಗಳು ದಿವಾಳಿ
Team Udayavani, Apr 19, 2019, 1:44 PM IST
ಯಾದಗಿರಿ: ಗಾಂಧಿ ವೃತ್ತದಲ್ಲಿ ನಡೆದ ಎಎಸ್ಯುಸಿಐ ಪಕ್ಷದ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕೆ.ಸೋಮಶೇಖರ ಮಾತನಾಡಿದರು.
ಯಾದಗಿರಿ: ದೇಶದಲ್ಲಿ ಬಂಡವಾಳಶಾಹಿಗಳ ಪರವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಸ್ಯುಐಸಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಚ್.ವಿ. ದಿವಾಕರ್ ಹೇಳಿದರು.
ನಗರದ ಗಾಂಧಿ ಧಿವೃತ್ತದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಅಭ್ಯರ್ಥಿ ಕೆ. ಸೋಮಶೇಖರ ಪರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ-2ರ ದುರಾಡಳಿತ, 2ಜಿ ತರಂಗ, ಕಾಮನ್ವೆಲ್ತ್ ಗೇಮ್ ಹಗರಣ ಹೀಗೆ ಹಲವಾರು ಹಗರಣಗಳಿಂದ ಬೇಸತ್ತ ಜನರು ಆಕ್ರೋಶ ಮತ್ತು ಅಬ್ಬರದ ಪ್ರಚಾರದಿಂದ ಅಚ್ಛೇ
ದಿನ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನಂತರ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿಗಳ ಏಜೆಂಟ್ನಂತೆ ವರ್ತಿಸಿದೆ ಎಂದು ದೂರಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ನೋಟು
ಬ್ಯಾನ್ನಿಂದಾಗಿ 4 ಕೋಟಿಗೂ ಅಧಿಕ ಉದ್ಯೋಗ ನಷ್ಟವಾಗಿರುವುದನ್ನು ಮುಚ್ಚಿಡಲಾಗಿದೆ. ಜಿಎಸ್ ಟಿಯಿಂದಾಗಿ ಸಹಸ್ರಾರು ಸಣ್ಣ ಉದ್ಯಮಗಳು ದಿವಾಳಿಯಾಗಿವೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿ ಪ್ರಕಾರ 2017-18ರಲ್ಲಿ ನಿರುದ್ಯೋಗ ಪ್ರಮಾಣ ಶೇ. 6.1ರಷ್ಟು ಹೆಚ್ಚಳವಾಗಿವೆ. ಇದು ಕಳೆದ
45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ದಾಖಲಾಗಿದೆ ಎಂದು ಹೇಳಿದರು. ಹೋರಾಟದ ಹಿನ್ನೆಲೆ ಇರುವ ದುಡಿಯುವ, ಕಾರ್ಮಿಕ ವರ್ಗದ ನೈಜ ಪ್ರತಿನಿಧಿ ಎಸ್ಯುಸಿಐ ಕಮ್ಯನಿಸ್ಟ್ದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಅಭ್ಯರ್ಥಿ ಕೆ. ಸೋಮಶೇಖರ ಮಾತನಾಡಿ, ನಮ್ಮ ಪಕ್ಚದ ಹಲವು ಹೋರಾಟಗಳಿಗೆ ದೇಶದ ಸ್ವಾತಂತ್ರ್ಯ ಹೋರಟಗಾರರು, ಮಹಾನ್ ಕ್ರಾಂತಿಕಾರಿಗಳ ಆದರ್ಶವೇ ಸ್ಫೂರ್ತಿ. ಹಾಗಾಗಿ ಪಕ್ಷಕ್ಕೆ ಚುನಾವಣೆ
ಒಂದು ಹೋರಾಟದ ಭಾಗ. ತನ್ನನ್ನು ಗೆಲ್ಲಿಸಿದ್ದಲ್ಲಿ ಈ ಭಾಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಗಟ್ಟಿಯಾಗಿ ಎತ್ತಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಡಿ.ಉಮಾದೇವಿ, ಶರಣಗೌಡ ಗೂಗಲ್, ಶರಣಪ್ಪ ಉದಾºಲ, ಸದಸ್ಯ ರಾಮಲಿಂಗಪ್ಪ ಬಿ.ಎನ್., ಸೈದಪ್ಪ ಎಚ್.ಪಿ., ಜಮಾಲ್ಸಾಬ್, ಎಚ್.ಜಿ. ದೇಸಾಯಿ, ಸಿದ್ದಲಿಂಗ ಬಾಗೇವಾಡಿ, ಎಚ್.ಜಿ. ದೇಸಾಯಿ, ಸುಭಾಷ್ಚಂದ್ರ, ಭರತಕುಮಾರ, ಸುನೀಲ, ಶಿವಬಾಳಮ್ಮ, ಮಹಾದೇವಿ ಶೋಭಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ