ಬೈಕ್ ಕಳ್ಳರ ಬಂಧನ: 2 ಬೈಕ್ ಜಪ್ತಿ
Team Udayavani, Aug 12, 2022, 5:31 PM IST
ಬಸವಕಲ್ಯಾಣ: ನಗರದ ಅಂಗಡಿ, ಹೋಟೆಲ್ಗಳ ಮುಂದೆ ನಿಲ್ಲಿಸಿದ ಬೈಕ್ ಕದಿಯುತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ, ಅವರಿಂದ 2 ಬೈಕ್ ಜಪ್ತಿ ಮಾಡುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಖಡಿಝಂಡಾ ಬಡಾವಣೆ ನಿವಾಸಿ ದಿಲೀಪ್ ಗಾಯಕವಾಡ ಮತ್ತು ಹುಮನಾಬಾದ ಪಟ್ಟಣದ ವಾಂಜರಿ ನಿವಾಸಿ ರಾಜು ಇಳಗಾರ ಬಂಧಿತ ಆರೋಪಿಗಳು.
ನಗರದ ಖಡಿಝಂಡಾ ಬಡಾವಣೆ ಹಾಗೂ ನಗರ ರಾಜಬಾಗ್ ಸವಾರ್ ದರ್ಗಾದ ಬಳಿ ನಿಲ್ಲಿಸಿದ ಬೈಕ್ಗಳನ್ನು ಬಂಧಿತರು ಕಳವು ಮಾಡಿದ್ದರು. ಎಸ್ಪಿ ಡೆಕ್ಕಾ ಕಿಶೋರಬಾಬು, ಎಎಸ್ಪಿ ಶಿವಾಂಸು ರಾಜಪುತ್, ಸಿಪಿಐ ರಘುವೀರ್ಸಿಂಗ್ ಠಾಕೂರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಚರಣೆ ನಡೆಸಿದ ನಗರ ಠಾಣೆ ಪಿಎಸ್ಐ ಅಮರ ಕುಲ್ಕರ್ಣಿ, ಅಪರಾಧ ವಿಭಾಗದ ಪಿಎಸ್ಐ ರೇಣುಕಾ ನೇತೃತ್ವದಲ್ಲಿ ಸಿಬ್ಬಂದಿಗಳಾದ ಫ್ರಾಂಚೀಸ್, ಸೀಮನ್, ಅಶೋಕ ಪವಾರ್, ಯಶ್ರಫ್ ಕಾಜ್ಮಿ ಅವರನ್ನೊಳಗೊಂಡ ತಂಡ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ 80 ಸಾವಿರ ರೂ. ಮೌಲ್ಯದ ಎರಡು ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ