ಕ್ಷೇತ್ರದ ಸುಧಾರಣೆಗೆ ಪ್ರಯತ್ನ
Team Udayavani, Dec 17, 2018, 2:57 PM IST
ಗುರುಮಠಕಲ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನ ನಿಮಿತ್ತ ಮತಕ್ಷೇತ್ರದ 5 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ 26 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ನಾಗನಗೌಡ ಕಂದಕೂರ ವಿತರಿಸಿದರು.
ರವಿವಾರ ಪಟ್ಟಣದ ಗಾಂಧಿ ಮೈದಾನ ಆವರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನ ನಿಮಿತ್ತ ಜೆಡಿಎಸ್ ಆಯೋಜಿಸಿದ್ದ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ.
ಜಿಲಾಲಪುರ್-ಸೈದಾಪುರ ಕರಿಬೆಟ್ಟ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿಗೆ 50 ಕೋಟಿ ರೂ., ಮುಸ್ಟೂರ್-ಸೈದಾಪುರ ರಸ್ತೆಗೆ 40 ಕೋಟಿ ರೂ,, ಕಣೆಕಲ್-ಕಡೇಚೂರ್ ರಸ್ತೆಗೆ 18 ಕೋಟಿ ರೂ. ಹಾಗೂ ಹಂದರಕಿ-ಹೊಸಳ್ಳಿ ಮಾರ್ಗದ ರಸ್ತೆಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಕಂದಕೂರ ಕೊಂಡಮ್ಮ ದೇವಿ ಬೆಟ್ಟದ ಅಭಿವೃದ್ಧಿಗೆ 1 ಕೋಟಿ, ಗವಿಸಿದ್ಧಲಿಂಗೇಶ್ವರ
ದೇವಸ್ಥಾನ ಅಭಿವೃದ್ಧಿಗೆ 50 ಲಕ್ಷ ರೂ., ತೂಗು ಸೇತುವೆಗೆ 50 ಲಕ್ಷ ಹಾಗೂ ದಬದಬಿ ಜಲಪಾತದ ಅಭಿವೃದ್ಧಿಗೆ 50
ಲಕ್ಷ ರೂಪಾಯಿ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಯುವ ಉಪಾಧ್ಯಕ್ಷ ಶರಣಗೌಡ ಕಂದಕೂರ, ಜಿ. ತಮ್ಮಣ್ಣ, ಶರಣು ಆವಂಟಿ, ಭೀಮಶಪ್ಪ ಗುಡ್ಸೆ, ಕಿಷ್ಟಾರೆಡ್ಡಿ, ತಾಪಂ ಸದಸ್ಯ ಮಲ್ಲಿಕಾರ್ಜುನ ಅರುಣಿ, ನಾಗೇಶ ಚಂಡ್ರಿಕಿ, ಪುರಸಭೆ ಸದಸ್ಯ ಬಾಲಪ್ಪ ದಾಸರಿ, ನವಾಜ ರೆಡ್ಡಿ, ಶರಣಪ್ಪ ಲಿಕ್ಕಿ, ಪಾಪಣ್ಣ, ಬಾಲಪ್ಪ ನೀರೆಟಿ, ಸೀರಜ್ ಚಿಂತಕುಂಟಿ, ಪ್ರಕಾಶ ನಿರೇಟಿ, ವಿಜಯಕುಮಾರ್ ನೀರೆಟಿ, ಶಾರದ ಕಡೆಚೂರ, ಅಂಬದಾಸ್, ರಾಮಣ್ಣ ಬಳಿಚಕ್ರ, ಮಲ್ಲಣ್ಣ ಗೌಡ, ಈಶ್ವರ ನಾಯಕ್, ಬಾಬು ಗೌಡ, ನರಸಪ್ಪ,
ನರಸಿರೆಡ್ಡಿ ಬೂದೂರು, ಬಸರೆಡ್ಡಿ ಎಂ.ಟಿ. ಪಲ್ಲಿ, ಜ್ಞಾನೇಶ್ವರ ರೆಡ್ಡಿ, ರಮೇಶ ಹೂಗಾರ, ಬ್ರಹ್ಮಾನಂದರೆಡ್ಡಿ ಕೇಶ್ವಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್