ಪ್ರವಾಸೋದ್ಯಮಕ್ಕೆ ಬೋಟಿಂಗ್ ಬೂಸ್ಟ್
Team Udayavani, Nov 15, 2020, 4:07 PM IST
ಯಾದಗಿರಿ: ಜಿಲ್ಲೆಯಲ್ಲಿ ಪ್ರಮುಖವಾಗಿ ರಾಜ್ಯದ ಅತೀ ದೊಡ್ಡ ಬೋನಾಳ ಪಕ್ಷಿಧಾಮ, ನಜರಾಪುರ ಫಾಲ್ಸ್, ಗವಿ ಸಿದ್ಧಲಿಂಗೇಶ್ವರ ದೇವಸ್ಥಾನ, ಹತ್ತಿಕುಣಿ ಜಲಾಶಯ, ಬುದ್ಧ ಮಲಗಿದ ಬೆಟ್ಟ, ಯಾದಗಿರಿ ಕೋಟೆ ಹೀಗೆ ಹಲವಾರು ಪ್ರವಾಸಿ ತಾಣಗಳಿದ್ದರೂ ಜಿಲ್ಲಾ ಕೇಂದ್ರದ ಲುಂಬಿನ ವನದಿಂದ ಮಾತ್ರ ಅಲ್ಪಸ್ವಲ್ಪ ಆದಾಯ ಹೊರತುಪಡಿಸಿ ಇತರೆ ಕಡೆಯಿಂದ ಯಾವುದೇ ಆದಾಯವೇ ಇಲ್ಲ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು ಇದನ್ನು ಅಭಿವೃದ್ಧಿಪಡಿಸಿ ಆದಾಯ ಪಡೆಯಬಹುದು. ಆದರೆ ಅದೇಕೋಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಿನಂತಾಗಿದೆ.ಪ್ರಸ್ತುತ ಲಾಕ್ಡೌನ್ ಸರಳೀಕರಣಗೊಂಡಿದ್ದು ನಿತ್ಯ 100-150 ಜನರು ಲುಂಬಿನ ಉದ್ಯಾನವನಕ್ಕೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಪ್ರವೇಶ ಶುಲ್ಕ 5 ರೂ. ನಿಗದಿಪಡಿಸಲಾಗಿದ್ದು, ತಿಂಗಳಿಗೆ 10ರಿಂದ 15 ಸಾವಿರ ಆದಾಯ ತಂದುಕೊಡುತ್ತಿದೆ. ಕೋವಿಡ್ ಹಿನ್ನೆಲೆ ಪ್ರವೇಶ ದ್ವಾರದಲ್ಲಿಯೇ ಮಾಸ್ಕ್ ಧರಿಸಿದ್ದನ್ನು ಖಾತ್ರಿಪಡಿಸಿ ಜತೆಗೆ ಸ್ಯಾನಿಟೈಸರ್ನಿಂದ ಕೈ ಶುಚಿಗೊಳಿಸಿದ ಬಳಿಕವಷ್ಟೇ ಒಳಗೆ ಪ್ರವೇಶ ನೀಡಲಾಗುತ್ತಿದೆ.
ವನದಲ್ಲಿ ಸುಂದರ ಕೆರೆ ಇದ್ದು, ಬೋಟಿಂಗ್ ಆರಂಭಿಸಿ ಲಾಭ ಪಡೆಯಲು ಇಲಾಖೆಗೆ ವಿಫುಲ ಅವಕಾಶವಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು ಕೆಲವೇ ವಾರಗಳಲ್ಲಿ ಬೋಟಿಂಗ್ ಆರಂಭಿಸುವ ಪ್ರಯತ್ನ ನಡೆದಿದೆ. ಬೋಟಿಂಗ್ ಆರಂಭದ ಬಳಿಕ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್