ನೀಲಕಂಠರಾಯನ ಗಡ್ಡಿಗೆ ಸೇತುವೆ ಭಾಗ್ಯ ಬಾಲಪ್ಪ ಎಂ.ಕುಪ್ಪಿ


Team Udayavani, Sep 12, 2017, 3:51 PM IST

yad-1.jpg

ಕಕ್ಕೇರಾ: ಪ್ರತಿವರ್ಷ ಪ್ರವಾಹ ಎದುರಿಸುವ ಕೃಷ್ಣಾನದಿ ತೀರದ ನೀಲಕಂಠರಾಯನಗಡ್ಡಿಗೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಸೋಮವಾರ ಭೇಟಿ ನೀಡಿದ್ದರಿಂದ ಅಲ್ಲಿನ ಗ್ರಾಮಸ್ಥರಿಗೆ ಅಂತೂ ಸೇತುವೆ ಭಾಗ್ಯ ಒದಗಿ ಬರಲಿದೆ ಎಂಬ ಆತ್ಮ ವಿಶ್ವಾಸ ಮೂಡಿದೆ. 

ಹೌದು, ಇಲ್ಲಿಯವರೆಗೂ ಯಾವುದೇ ಜಿಲ್ಲಾಧಿಕಾರಿ ಕಲ್ಲುಬಂಡಿಗಳಿಂದ ಕೂಡಿದ ಕೃಷ್ಣಾನದಿ ದಾಟಿ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. 

ದೃಢವಾದ ಮನಸ್ಸಿನೊಂದಿಗೆ ನದಿಯಲ್ಲಿ ಕಲ್ಲುಬಂಡೆ ಮುಳ್ಳು ನಡುವೆ ನಡೆದು ಎದುರಿಸಿ ಗಡ್ಡಿಗೆ ಭೇಟಿ ನೀಡಿದ ಪ್ರಥಮ
ಜಿಲ್ಲಾಧಿಕಾರಿ ಎಂದು ನಾಗರಿಕರಿಂದ ಅಭಿಪ್ರಾಯ ವ್ಯಕ್ತಗೊಂಡವು.

ಪ್ರತಿವರ್ಷ ಭಾರಿ ಪ್ರವಾಹ ಉಂಟಾಗುತಿತ್ತು. ಈ ಹಿಂದಿನ ಜಿಲ್ಲಾಧಿಕಾರಿಗಳು ಪ್ರವಾಹ ಬಂದಾಗೊಮ್ಮೆ ಕೃಷ್ಣಾನದಿ ದಂಡೆಯಲ್ಲಿಯೇ ನಿಂತು ವೀಕ್ಷಿಸಿ ಹೋಗಿದ್ದರು. ಆದರೆ ಅವರಿಂದ ಭೇಟಿ ನೀಡಲು ಸಾಧ್ಯ ಆಗಿರಲಿಲ್ಲ. 2016ರಲ್ಲಿ ಸುರಪುರ ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಬೋಟ್‌ ಮೂಲಕ ಗಡ್ಡಿಗೆ ಭೇಟಿ ನೀಡಿದ್ದು ಸ್ಮರಿಸಬಹುದು. ಸದ್ಯ ಈಗಿನ ಜಿಲ್ಲಾಧಿಕಾರಿ ಮಂಜುನಾಥ ಕೃಷ್ಣಾನದಿ ದಾಟಿ ಗ್ರಾಮಕ್ಕೆ ಭೇಟಿ ನೀಡಿರುವುದು ಜನರಲ್ಲಿ ತಂತಸ ತಂದಿದೆ.

ಕಲ್ಲು ಮುಳ್ಳು ಲೆಕ್ಕಿಸದೆ ಜಿಲ್ಲಾಧಿಕಾರಿ ಹುಮಸ್ಸಿನೊಂದಿಗೆ 3 ಕಿ.ಮೀ ದೂರದ ಗಡ್ಡಿಗೆ ಹೆಜ್ಜೆ ಹಾಕಿದರು. ಆದರೆ ಸುಸ್ತಾಗಿರುವುದು ಕಂಡು ಬರಲಿಲ್ಲ. ಹೀಗಾಗಿ ಇದು ನನಗೆ ಹೊಸ ಅನುಭವ ಎಂಬ ಮಾತು ಅವರಲ್ಲಿ ಕೇಳಿದವು.

ಗ್ರಾಮಸ್ಥರೊಂದಿಗೆ ಚರ್ಚೆ: ಜಿಲ್ಲಾಧಿಕಾರಿ ಆಗಮನಕ್ಕಾಗಿ ಕಾಯುತ್ತಿದ್ದ ಜನರೊಂದಿಗೆ ಸೌಕರ್ಯ ಪರಸ್ಥಿತಿ ಬಗ್ಗೆ ಚರ್ಚಿಸಲಾಯಿತು. ಕುಡಿವ ನೀರಿಲ್ಲ ಪ್ರವಾಹ ಬಂದರೆ ಈಜುಕಾಯಿ ಹಾಕಿಕೊಂಡು ನದಿ ದಾಟಬೇಕು. ಈ ಹಿಂದೇ ನದಿಯಲ್ಲಿ ನಾಲ್ಕು ಜನ ಕೊಚ್ಚಿಕೊಂಡು ಹೋದರು. ಈ ಎಲ್ಲಾ ಸಮಸ್ಯೆ ಮನಗಂಡರೂ ಯಾವುದೇ ಅಧಿಕಾರಿ ನಮಗೆ ಶಾಶ್ವತ ಪರಿಹಾರ ನೀಡಿಲ್ಲ ಎಂದು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಗ್ರಾಮಸ್ಥರು ಬಿಚ್ಚಿಟ್ಟರು. ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲಾಗುವುದು. ಯಾವುದಕ್ಕೂ ಚಿಂತಿಸುವುದು ಬೇಡ. ಕೆಲವೇ ದಿನಗಳಲ್ಲಿ ಗ್ರಾಮಕ್ಕೆ ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಶಾಲಾ ಮಕ್ಕಳ ಸ್ಥಿತಿಗತಿ ವಿಚಾರಿಸಿದರು. 

ಸೇತುವೆ ನಿರ್ಮಿಸಲು ಶೀಘ್ರ ಟೆಂಡರ್‌
ಕಕ್ಕೇರಾ: ಕೃಷ್ಣಾನದಿ ಪ್ರವಾಹ ಎದುರಿಸುವ ನೀಲಕಂಠರಾಯನಗಡ್ಡಿಗೆ ಸೇತುವೆ ನಿರ್ಮಿಸಲು ಇದೇ ತಿಂಗಳೊಳಗೆ ಅತೀ ಶೀಘ್ರವಾಗಿ 1.74 ಕೋಟಿ ರೂ. ವೆಚ್ಚದ ಟೆಂಡರ್‌ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಮಂಜುನಾಥ ಸ್ಪಷ್ಟಪಡಿಸಿದರು. ಕೃಷ್ಣಾನದಿ ತೀರ ನೀಲಕಂಠರಾಯನಗಡ್ಡಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ
ಅವರು ಮಾತನಾಡಿದರು.

ಕೆಲವು ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಿರಬಹುದು. ಆದರೆ ಪ್ರಥಮ ಭಾರಿಗೆ ನಾನು ಜಿಲ್ಲಾಧಿಕಾರಿಯಾಗಿ ಭೇಟಿ ನೀಡಿದ್ದೇನೆ. ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನಲ್ಲಿ ಜನರಿಗೆ ಶಾಶ್ವತ ಸೇತುವೆ ಕಾಮಗಾರಿ ಕಲ್ಪಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು. ಹಳೆ ಪಟ್ಟಿದಾರರ ಹೆಸರಿಗೆ ಜಮೀನು ಇರುವುದರಿಂದ ಎಸ್‌ಸಿಪಿ/ಎಸ್‌ಟಿಪಿ ಯೋಜನೆಡಿಯಲ್ಲಿ ರೈತರ ಜಮೀನುಗಳಿಗೆ ನೀರಾವರಿ ಹಾಗೂ ಬೆಳೆಸಾಲ ಸೇರಿದಂತೆ ವಿವಿಧ ಯೋಜನೆ ಕಲ್ಪಿಸಲು ಸಾಧ್ಯವಾಗಿಲ್ಲ. ಸದ್ಯ ನೂತನ ಸದಸ್ಯರ ಹೆಸರಿಗೆ ಜಮೀನು ಪಟ್ಟಿದಾರರನ್ನಾಗಿಸಲು ತಹಶೀಲ್ದಾರರಿಗೆ ಸೂಚಿಸಲಾಗಿದೆ. ನಂತರ ಸೌಕರ್ಯ ಒದಗಿಸಲಾಗುತ್ತದೆ ಎಂದರು. ಶಾಶ್ವತ ಕುಡಿವ ನೀರು ವಿದ್ಯುತ್‌ ಆಶ್ರಯ ಮನೆಗಳು ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಅತೀ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಯಾವುದಕ್ಕೂ ಅನುಮಾನ ಬೇಡ ಎಂದು ತಿಳಿಸಿದರು. ಈಗಾಗಲೇ ಇಲ್ಲಿನ ಜನರಿಗೆ ಆರೋಗ್ಯದ ತಪಾಸಣೆ ಜಿಲ್ಲಾ ವೈದಾಧಿಕಾರಿಗಳಿಂದ ಮಾಡಲಾಗಿದೆ. ಯಾವುದಕ್ಕೂ ವಾರದಲ್ಲಿ ಒಮ್ಮೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷ ದಶರತ ಆರೇಶಂಕರ, ಪುರಸಭೆ ಸದಸ್ಯರಾದ ರಾಜು ಹವಾಲ್ದಾರ, ಶರಣಕುಮಾರ ಸೊಲ್ಲಾಪುರ, ಬಸಯ್ಯಸ್ವಾಮಿ, ತಹಶೀಲ್ದಾರ ಸುರೇಶ ಅಂಕಲಗಿ, ಉಪತಹಶೀಲ್ದಾರ ರೇವಪ್ಪ ತೆಗ್ಗಿನಮನಿ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ರೆಡ್ಡಿ, ವೈದ್ಯಾಧಿಕಾರಿ ಡಾ| ವಿಠ್ಠಲ್‌ ಪೂಜಾರಿ, ಶಿವಪ್ಪ ಸೇರಿದಂತೆ ಎಚ್‌ಕೆಆರ್‌ಡಿಬಿ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.