112 ಗ್ರಾಪಂಗಳಲ್ಲಿಲ್ಲ ಸಿಸಿ ಕ್ಯಾಮರಾ!
Team Udayavani, Feb 8, 2018, 10:28 AM IST
ಯಾದಗಿರಿ: ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಪಾರದರ್ಶಕತೆ ಆಡಳಿತ ನೀಡುವ ಉದ್ದೇಶದಿಂದ ಗ್ರಾಪಂಗಳಿಗೂ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಆದೇಶ ಹೊರಡಿಸಿದೆ. ಆದರೆ ಜಿಲ್ಲೆಯ 123 ಗ್ರಾಪಂಗಳ ಪೈಕಿ ಕೇವಲ 11 ಗ್ರಾಪಂ ಕಚೇರಿಗಳು ಸಿಸಿ ಕ್ಯಾಮರಾ ಹೊಂದಿದ್ದು, ಇನ್ನೂ 112 ಗ್ರಾಪಂ ಸಿಸಿ ಕ್ಯಾಮರಾ ಅಳವಡಿಸಿಲ್ಲದಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅ ಧಿನಿಯಮ 1999 ಮತ್ತು 2000 ಕಟ್ಟುನಿಟ್ಟಾಗಿ ಪಾಲಿಸಿ ಆಯಾ ಗ್ರಾಪಂಗಳು ತಮ್ಮ ಸ್ವಂತ ನಿಧಿಯಿಂದ ವೆಚ್ಚ ಭರಿಸಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ರಾಜ್ಯ ಸರಕಾರ ಕಳೆದ ಜೂನ್ 12, 2017ರಂದು ಆದೇಶ ಹೊರಡಿಸಿದೆ. ಆದರೆ ಎಂಟು ತಿಂಗಳು ಕಳೆದರೂ ಬಹುತೇಕ ಗ್ರಾಪಂಗಳು ಇನ್ನೂ ಸಿಸಿ ಕ್ಯಾಮರಾ ಅಳವಡಿಸದೆ ಬೇಜವಾಬ್ದಾರಿತನ ವರ್ತಿಸಿವೆ.
ಜಿಲ್ಲೆಯ ಶಹಾಪುರ ತಾಲೂಕಿನ ಒಟ್ಟು 41 ಗ್ರಾಪಂಗಳ ಪೈಕಿ ಮೂರು ಗ್ರಾಪಂಗಳು, ಯಾದಗಿರಿ ತಾಲೂಕಿನ 40 ಗ್ರಾಪಂಗಳ ಪೈಕಿ ಕೇವಲ ಎರಡು ಗ್ರಾಪಂಗಳು ಹಾಗೂ ಸುರಪುರ ತಾಲೂಕಿನ 42 ಗ್ರಾಪಂ ಪೈಕಿ ಆರು ಗ್ರಾಪಂಗಳು ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದು, ಉಳಿದೆಲ್ಲ ಗ್ರಾಪಂಗಳು ಸಿಸಿ ಕ್ಯಾಮರಾ ಅಳವಡಿಸದೆ ನಿರ್ಲಕ್ಷ್ಯವಹಿಸಿವೆ.
ಯಾದಗಿರಿ ತಾಲೂಕಿನಲ್ಲಿ ಯರಗೋಳ ಮತ್ತು ಅಲ್ಲಿಪುರ ಗ್ರಾಪಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸುರಪುರ ತಾಲೂಕಿನಲ್ಲಿ ಕಾಮನಟಗಿ, ಯಾಳಗಿ, ಅರಕೇರಾ (ಜೆ), ಜೋಗುಂಡಭಾವಿ, ಅರಕೇರಾ (ಕೆ) ಮತ್ತು ಹುಸಣಗಿ ಗ್ರಾಪಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲಾಗಿದೆ. ಶಹಾಪುರ ತಾಲೂಕಿನ ಹಯ್ನಾಳ (ಬಿ), ವನದುರ್ಗ, ಹೊಸಕೇರಾ ಗ್ರಾಪಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಂಡಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಜಿಪಂ ಸಿಇಒ ಡಾ| ಅವಿನಾಶ ಮೆನನ್ ರಾಜೇಂದ್ರನ್ ಅವರು ಕಳೆದ ಆಗಸ್ಟ್ 18, 2017ರಂದು ಗ್ರಾಪಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವ ಕುರಿತು ಪ್ರಗತಿ ವರದಿಯನ್ನು ಪಂಚ ತಂತ್ರದಲ್ಲಿ ಅಳವಡಿಸುವಂತೆ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಈ ಸೂಚನೆ ಸರಿಯಾಗಿ ಪಾಲಿಸಿಲ್ಲ ಎಂಬುದು ತಿಳಿದು ಬಂದಿದೆ. ಗ್ರಾಪಂಗಳ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಿಸಿ ಕ್ಯಾಮರಾ ಅಳವಡಿಸಲು ರಾಜ್ಯ ಸರಕಾರ ಹೊರಡಿಸಿದ
ಆದೇಶ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಗ್ರಾಪಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಆಸಕ್ತಿ ವಹಿಸುವವರೇ ಕಾಯ್ದು ನೋಡಬೇಕಿ¨
ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವ ಕಾರಣಕ್ಕೆ ಸಿಸಿ ಕ್ಯಾಮರಾ ಅಳವಡಿಸಿಕೊಂಡಿಲ್ಲ ಎಂಬ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಬಲವಂತ ರಾಠೊಡ, ಇಒ, ತಾಪಂ ಯಾದಗಿರಿ
ರಾಜೇಶ ಪಾಟೀಲ್ ಯಡ್ಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ
MUST WATCH
ಹೊಸ ಸೇರ್ಪಡೆ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್