ಪುಟಪಾಕ್ ಗ್ರಾಮದಲ್ಲಿ ಅಸ್ವಚ್ಛತೆ-ಸಮಸ್ಯೆಗಳ ಆಗರ
Team Udayavani, Jan 25, 2022, 6:06 PM IST
ಗುರುಮಠಕಲ್: ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ಕಾಲಿಟ್ಟರೆ ತ್ಯಾಜ್ಯ ತುಂಬಿದ ಚರಂಡಿ, ಕಸ, ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗಳು ಕಣ್ಮುಂದೆ ಬರುತ್ತವೆ. ಇದರೊಂದಿಗೆ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯ ಇಲ್ಲದಂತಾಗಿದೆ.
ಪುಟಪಾಕ್ ಗ್ರಾಮ ಗ್ರಾಪಂ ಕೇಂದ್ರ ಸ್ಥಳವಾಗಿದ್ದು, 2500ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿದೆ. ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಅಂದಾಜು 7.50 ಲಕ್ಷ ರೂ. ಅನುದಾನದ ಅಡಿಯಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ.
ಎರಡು ವರ್ಷಗಳಿಂದ ಮುಳ್ಳುಕಂಟಿಯಲ್ಲಿ ಮರೆಯಾಗಿರುವ ಶೌಚಾಲಯ ಬಳಕೆಗೆ ಇಲ್ಲಿಯವರೆಗೂ ಅನುಕೂಲ ಮಾಡಿಲ್ಲ. ಅವುಗಳ ಸಮರ್ಪಕ ಬಳಕೆ ಇಲ್ಲದೇ ಇರುವುದರಿಂದ ಕಲ್ಲು, ಮುಳ್ಳು, ಗಾಜಿನ ಬಾಟಲಿಗಳು ಬಿದ್ದಿವೆ. ಪುರುಷರ ಶೌಚಾಲಯವೂ ಇದ್ದು, ನಿರ್ವಹಣೆ ಇಲ್ಲದೇ ಸುತ್ತಲೂ ಮುಳ್ಳು, ಕಂಟಿಗಳು ಬೆಳೆದು ಪಾಳು ಬಿದ್ದಿದೆ. ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ.
ಸ್ವಚ್ಛತೆ ಇಲ್ಲದ ಕಾರಣ ರಾತ್ರಿ ವೇಳೆ ಹಾವು-ಚೇಳಿನ ಭಯ ಕಾಡುತ್ತಿದೆ. ಸುತ್ತಲೂ ಸ್ವತ್ಛತಾ ಕಾರ್ಯಕೈಗೊಂಡರೆ ಬಯಲು ಬಹಿರ್ದೆಸೆ ಸಮಸ್ಯೆ ನಿವಾರಣೆಯಾಗುತಿತ್ತು. ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಅಲ್ಲಲ್ಲಿ ಬಯಲು ಶೌಚಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂ ಧಿಸಿದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಹಲವು ಸಲ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಮುಂದೆಯಾದರೂ ಇತ್ತ ಗಮನ ನೀಡಬೇಕು ಎಂದು ವೆಂಕಟೇಶ, ಅವಿನಾಶ, ಸುರೇಂದ್ರ ಗೌಡ, ಗುರು, ಅಬ್ದುಲ್ ಖಾದರ್, ಮೌಲಾನಾ, ನನ್ನೆಸಾಬ್, ಗೋಪಾಲರೆಡ್ಡಿ, ಮೊಹ್ಮದ್ ಖಾಜಾ ಸೇರಿದಂತೆ ಮಹಿಳೆಯರು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ