ಸುದೀಪ ಅವಹೇಳನಕ್ಕೆ ಖಂಡನೆ
Team Udayavani, Apr 2, 2021, 8:53 PM IST
ಶಹಾಪುರ: ಸಾಮಾಜಿಕ ಜಾಲತಾಣದಲ್ಲಿ ನಟೇಶ ಎಂಬ ಹೆಸರಿನ ಫೇಸ್ ಖಾತೆ ಮೂಲಕ ಚಿತ್ರನಟ ಕಿಚ್ಚ ಸುದೀಪ ಬಗ್ಗೆ ಅವಹೇಳನಕಾರಿ ಮಾತು ಹಾಗೂ ಜಾತಿ ನಿಂದನೆ ಮಾಡುತ್ತಿರುವ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಖೀಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್ ಶಾ ಕಿಚ್ಚ ಸುದೀಪ ಸೇನೆ ಪ್ರತಿಭಟನೆ ನಡೆಸಿತು.
ದುಷ್ಕರ್ಮಿಗಳ ವರ್ತನೆ ಖಂಡಿಸಿದ ಸೇನೆ ನಂತರ ತಹಶೀಲ್ದಾರ್ ಜಗನ್ನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿತು. ವಾಲ್ಮೀಕಿ ನಾಯಕ ಸಮುದಾಯದ ಪ್ರತಿಭೆ ಸುದೀಪ ಹಾಗೂ ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಟೀಕೆ ಮಾಡುವ ಮೂಲಕ ಸಾಮಾಜಿಕ ಶಾಂತಿ ಕದಡುವ ಕೆಲಸ ಮಾಡುತ್ತಿರುವ ದುಷ್ಟಶಕ್ತಿಗಳನ್ನು ತಕ್ಷಣ ಬಂಧಿಸುವಂತೆ ಸೇನೆಯ ಮುಖಂಡರು ಒತ್ತಾಯಿಸಿದರು.
ಈ ವೇಳೆ ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಮಹೇಶ ಭಂಗಿ, ಅಶೋಕ ಯಕ್ಷಿಂತಿ, ಮಲ್ಲಪ್ಪ ಅರಳಹಳ್ಳಿ, ಮಾನಶಪ್ಪ ನಾಗನಟಗಿ, ಅಂಬಲಯ್ಯ ನಾಗನಟಗಿ, ಆನಂದ ಹಳಿಸಗರ, ವರದ, ನಾಗರಾಜ, ಹಣಮಗೌಡ ಮರಕಲ್, ಬಾಲು, ಸುಭಾಷ, ತಿರುಪತಿ ಯಕ್ಷಿಂತಿ, ದೇವಪ್ಪ ಗಂಗನಾಳ, ಹಣಮಂತ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು