ಅಭಿವೃದಿಗೆ ಶಿಕ್ಷಣವೇ ಮೂಲಮಂತ್ರ


Team Udayavani, Nov 12, 2021, 5:38 PM IST

26education

ಗುರುಮಠಕಲ್‌: ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರವಾಗಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಎಸ್‌ ಎಸ್‌ಕೆ ಸಮಾಜದ ಮುಖಂಡ ಚಂದ್ರಲಾಲ್‌ ಚೌದ್ರಿ ಹೇಳಿದರು.

ಪಟ್ಟಣದ ಅಂಕಮ್ಮದೇವಿ ದೇವಸ್ಥಾನದಲ್ಲಿ ಎಸ್‌ ಎಸ್‌ಕೆ ಸಮಾಜದ ನವ ಯುವಕ ಸಂಘದಿಂದ ಆಯೋಜಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಉತ್ತರ ಭಾರತದಲ್ಲಿ ಸಹಸ್ರಾ ನದಿ ಸಹಸ್ರಾರ್ಜುನ ಮಹಾರಾಜರ ಬಾಣದಿಂದ ಹುಟ್ಟಿದೆ. ಅದು ಇಂದಿಗೂ ಪ್ರಖ್ಯಾತಿ ಹೊಂದಿದೆ. ಕ್ರಿ.ಪೂ 2600ರಲ್ಲಿ ವಿವಿಧ ಪುರಾಣಗಳಲ್ಲಿ ಮಹಾರಾಜರ ಕುರಿತು ಉಲ್ಲೇಖಗಳಿವೆ. ಆಗ ಒಂದು ಸಹಸ್ರ ಅಶ್ವಮೇಧ ಯಜ್ಞ ಮಾಡುವುದರೊಂದಿಗೆ ಋಷಿಮುನಿಗಳ ಅಪಾರ ಸೇವೆ ಸಹಸ್ರಾರ್ಜುನ ಮಹಾರಾಜರು ಮಾಡಿದ್ದಾರೆ ಎಂದರು.

ಎಸ್‌ಎಸ್‌ಕೆ ಸಮಾಜದ ಬುಡ್ಡಪ್ಪ ಜನಾರ್ಧನ ಮಾತನಾಡಿ, ಮಹಾರಾಜರ ಸಾಕಷ್ಟು ತಪಸ್ಸುಗಳ ಫಲವಾಗಿ ದತ್ತಾತ್ರೇಯ ದೇವರಿಂದ ಸಹಸ್ರಾರ್ಜುನ ಮಹಾರಾಜರಿಗೆ ಸಹಸ್ರ ಬಾಹು ವರದಾನ ದೊರೆಯುತ್ತದೆ. ಇದನ್ನರಿತ ಅಗ್ನಿ ಋಷಿಗಳು ಮಹಾರಾಜರ ಹತ್ತಿರ ಬಂದು ನೀವೆ ನನ್ನನ್ನು ತೃಪ್ತಿ ಪಡಿಸಬೇಕೆಂದು ಕೇಳಿದಾಗ ಅವರು ತಮ್ಮ ಶಕ್ತಿಯಿಂದ ಸಾಕಷ್ಟು ಆಶ್ರಮ ಸುಡಲಾರಂಭಿಸಿದರು. ಅದರಲ್ಲಿ ಆಪವ ಋಷಿಗಳ ಆಶ್ರಮವೂ ಸುಟ್ಟು ಹೋಗಿದ್ದರಿಂದ ಕುಪಿತಗೊಂಡ ಋಷಿ ಅಗ್ನಿದೇವರಲ್ಲಿ ಇಷ್ಟು ಶಕ್ತಿ ಬರಲು ಕಾರಣೀಕರ್ತರು ಯಾರೆಂದು ತಿಳಿದು ಆಗ ಸಹಸ್ರಾರ್ಜುನ ಮಹಾರಾಜರಿಗೆ ಶಾಪ ನೀಡುವುದನ್ನು ಕಾಣುತ್ತೇವೆ ಎಂದರು. ಗುರುಮಠಕಲ್‌ ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರರಾವ್‌ ಬಸೂದೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ ಕುಮಾರ ಹಬೀಬ ಮಾತನಾಡಿದರು.

ದಂಡೋತಿಯ ಜಯಶ್ರೀ ಮಾತೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಯಂತಿ ನಿಮಿತ್ತ ಬೆಳಗ್ಗೆ 8 ಗಂಟೆಗೆ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ರಾಮಕಿಶನರಾವ್‌ ಗೊಂಗಲೆ, ಗೌರವಾಧ್ಯಕ್ಷ ನಾರಾಯಣರಾವ್‌ ಚೌಧರಿ, ಡಾ|ನರಸಿಂಗರಾವ್‌, ತುಳಸಿರಾಮ ಗೊಂಗಲೆ, ಚಂದ್ರಕಾಂತ ಚೌದರಿ, ಜಗದೀಶ ಮೇಂಗಜಿ, ಹಣಮಂತರಾವ್‌ ಗೊಂಗಲೆ, ಅನೀಲ್‌ ಬಸೂದೆ ಇದ್ದರು.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Attempt to stop Vande Bharat train: Ka.ra.ve activists arrested

Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.