4 ಲಕ್ಷ ಕ್ಯೂಸೆಕ್ ಗೆ ಏರಿದ ಒಳಹರಿವು: ಭೀಮಾ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹ ಭೀತಿ
Team Udayavani, Oct 20, 2020, 11:11 AM IST
ಯಾದಗಿರಿ: ಸನ್ನತ್ತಿ ಬ್ಯಾರೇಜ್ ನಿಂದ ಭೀಮಾನದಿಗೆ ರಾತ್ರಿ ಪ್ರವಾಹ 4 ಲಕ್ಷ ಕ್ಯೂಸೆಕ್ ಗೆ ಏರಿಕೆಯಾಗಿದ್ದು ಭೀಮಾ ನದಿ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹ ಆತಂಕ ಎದುರಾಗಿದೆ.
ಈ ಹಿಂದೆ 2.70 ರಿಂದ 3.70 ಲಕ್ಷ ಕ್ಯೂಸೆಕ್ ನೀರು ಹರಿದು ಬಂದ ವೇಳೆಯಲ್ಲಿಯೇ ಪ್ರವಾಹ ನೀರು ಸಾಕಷ್ಟು ಆವಾಂತರ ಸೃಷ್ಟಿಸಿತ್ತು.
ರವಿವಾರ ಬೆಳಗ್ಗೆ ವರೆಗೆ ಇಳಿಕೆ ಕಂಡಿದ್ದ ಹರಿವು ಅಂದು ಮಧ್ಯಾಹ್ನದಿಂದಲೇ ಹಂತ ಹಂತವಾಗಿ ಏರುತ್ತ ಮಂಗಳವಾರ 4 ಲಕ್ಷ ಕ್ಯೂಸೆಕ್ ಗೆ ತಲುಪಿದೆ.
ಶಹಾಪುರ ತಾಲೂಕಿನ ಹುರುಸಗುಂಡಗಿ ಜನ ಪ್ರವಾಹದಿಂದ ತತ್ತರಿಸಿ ನಿಟ್ಟುಸಿರು ಬಿಡುವಷ್ಟರಲ್ಲೇ ಇನ್ನೊಮ್ಮೆ ಪ್ರವಾಹದಿಂದ ಇಡೀ ಗ್ರಾಮವೇ ಜಲಾವೃತಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ:ರೈತನಿಗೆ ಈ ವರ್ಷವೂ ಹುಳಿಯಾಯ್ತು ದ್ರಾಕ್ಷಿ! ಬೆಳೆಗಾರರ ಬೆನ್ನು ಬಿಡುತ್ತಿಲ್ಲ ಹವಾಮಾನ
ಇನ್ನು ರೋಜಾ ಎಸ್ ಗ್ರಾಮ ನಡುಗಡ್ಡೆಯಾಗಲಿದ್ದು ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ 14 ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದ್ದು, ಪ್ರವಾಹ ಮಟ್ಟ ಇನ್ನೂ ಹೆಚ್ಚಾದರೆ ಭೀಮಾನದಿ ಪಾತ್ರದ ಒಟ್ಟು 45 ಗ್ರಾಮಗಳಿಗೆ ನೀರು ಆವರಿಸಿದೆ.
ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸೇನಾಪಡೆಯ 70 ಜನರ ರಕ್ಷಣಾ ತಂಡ ಸಾರ್ವಜನಿಕರನ್ನು ಕಾಪಾಡಲು ಸಿದ್ಧವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ