ಅಂಬಾದೇವಿ ಜಾತ್ರೆ ರದ್ದಾದರೂ ಮುಕ್ತ ಪ್ರವೇಶ
ದರ್ಶನ ಪಡೆದ ಭಕ್ತರು ಎಂದಿನಂತೆ ಖರೀದಿಯತ್ತ ಮುಖ ಮಾಡಿದರು.
Team Udayavani, Jan 29, 2021, 6:40 PM IST
ಸಿಂಧನೂರು: ನಿಷೇಧದ ನಡುವೆಯೂ ಸಿದ್ಧಪರ್ವತದ ಐತಿಹಾಸಿಕ ಅಂಬಾದೇವಿ ಜಾತ್ರೆಗೆ ಭಕ್ತ ಸಮೂಹ ಹರಿದು ಬಂದಿದ್ದರಿಂದ ತಡೆಯುವುದು ಆಡಳಿತಕ್ಕೆ ಸವಾಲಾಯಿತು. ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ಗುರುವಾರ ಬೆಳಗ್ಗೆಯೇ ರಥೋತ್ಸವ ನಡೆಯಿತು. ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಗೆ ಭಕ್ತರು ಆಗಮಿಸದಂತೆ ತಾಲೂಕಾಡಳಿತ ಮನವಿ ಮಾಡಿದರೂ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ರಥೋತ್ಸವದ ದಿನ ಬೆಳಗ್ಗೆಯಿಂದಲೇ ಅಂಬಾದೇವಿ ದರ್ಶನಕ್ಕೆ ಸಾಲುಗಟ್ಟಿ ನಿಂತರು. ಪೊಲೀಸ್ ಬಂದೋಬಸ್ತ್ ನಡುವೆ ಸರದಿಯಲ್ಲಿ ದೇವಸ್ಥಾನದೊಳಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ನಿಷೇಧದ ಹಿನ್ನೆಲೆಯಲ್ಲಿ ಕಾಯಿ ಸಮರ್ಪಿಸುವುದನ್ನು ತಡೆಯಲಾಗಿತ್ತು.
ಎಲ್ಲವೂ ಸುಸೂತ್ರ: ದೇವಸ್ಥಾನ ಸುತ್ತಲಿನ 1 ಕಿ.ಮೀ ವ್ಯಾಪ್ತಿಯ ಎಲ್ಲೆಡೆಯೂ ಭಕ್ತರ ದಟ್ಟಣೆ ಕಾಣಿಸಿತು. ಜಾತ್ರೆಯಲ್ಲಿ ಎಲ್ಲ ರೀತಿಯ ಅಂಗಡಿ ಹಾಕಲಾಗಿತ್ತು. ದೇವಿ
ದರ್ಶನ ಪಡೆದ ಭಕ್ತರು ಎಂದಿನಂತೆ ಖರೀದಿಯತ್ತ ಮುಖ ಮಾಡಿದರು. ಬುಧವಾರವೇ ಟ್ರಾಕ್ಟರ್, ಕ್ರೂಷರ್, ಕಾರುಗಳಲ್ಲಿ ಆಗಮಿಸಿದ್ದ ಭಕ್ತರು ದೇವಸ್ಥಾನ
ಹೊರಭಾಗದಲ್ಲಿ ಟೆಂಟ್ ಹೂಡಿದ್ದರು. ಬೆಳ್ಳಂಬೆಳಗ್ಗೆ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಬೆಳಗ್ಗೆ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ, ಮಧ್ಯಾಹ್ನದ ಬಳಿಕ ಜಾತ್ರೆ ಮಾಡಿದರು.
ಪ್ರವೇಶ ಭಾಗದಲ್ಲಿ ತಡೆ: ದೇವಸ್ಥಾನ ಪ್ರವೇಶಿಸುವ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಿ ಭಾರಿ ವಾಹನಗಳ ಪ್ರವೇಶ ತಡೆಯಲಾಯಿತು. ದ್ವಿಚಕ್ರ ವಾಹನ, ಕಾರು, ಟ್ರಾಕ್ಟರ್, ಕ್ರೂಷರ್ ಸೇರಿದಂತೆ ಇತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬಾರಿಯೂ ಕುರಿ ಬಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿತ್ತು. ಈ ಸಲ ಸರಳವಾಗಿಯೇ ಭಕ್ತರು ದೇವಿ ಜಾತ್ರೆ ಆಚರಿಸಿದರು. ಅಕ್ಕಪಕ್ಕದ ತಾಲೂಕು, ಜಿಲ್ಲೆ ಸೇರಿದಂತೆ ತಾಲೂಕಿನ ನಾನಾ ಮೂಲೆಯಿಂದ ಭಕ್ತರು ಆಗಮಿಸಿದ್ದರು. ವಾರದ ಕಾಲ ನಡೆಯುವ ಜಾತ್ರೆಯಲ್ಲಿ ಇನ್ನೂ ಹೆಚ್ಚಿನ ಭಕ್ತರು ಆಗಮಿಸುವ ಮುನ್ಸೂಚನೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ