ಆಧ್ಯಾತ್ಮ ಚಿಂತನೆ ಮೈಗೂಡಿಸಿಕೊಳ್ಳಿ
ಶಿವಾನುಭವ ಕಾರ್ಯಕ್ರಮ ಆಧ್ಯಾತ್ಮದ ಬೆಳಕು ಕಂಡುಕೊಳ್ಳಲು ಸಹಕಾರಿ
Team Udayavani, Mar 12, 2020, 4:54 PM IST
ಹುಣಸಗಿ: ಎಲ್ಲರಿಗೂ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ ಲಭಿಸಬೇಕಾದರೆ ನಿತ್ಯವೂ ಆಧ್ಯಾತ್ಮದ ಚಿಂತನೆ ಮೈಗೊಡಿಸಿಕೊಂಡಲ್ಲಿ ಮನಸ್ಸಿಗೆ ಅಹ್ಲಾದ ಉಂಟಾಗಿ ಧನಾತ್ಮಕ ವಿಚಾರದಾರೆಗಳು ಉತ್ಪತ್ತಿಯಾಗುತ್ತವೆ ಎಂದು ಆಧ್ಯಾತ್ಮಿಕ ಚಿಂತಕ ಮನೋಹರರಾವ ದ್ಯಾಮನಹಾಳ ಹೇಳಿದರು.
ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿ ಮಠದಲ್ಲಿ ಹಮ್ಮಿಕೊಂಡಿದದ್ದ 21ನೇ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.
ಆಧ್ಯಾತ್ಮದ ಚಿಂತನೆಗಳಿಂದ ಲೌಕಿಕದ ಕೆಲವು ಭೋಗಗಳನ್ನು ತ್ಯಾಗ ಮಾಡಿದ ತೃಪ್ತಿ ಕುರಿತು ನಿಜಗುಣ ಶಿವಯೋಗಿಗಳು ತಮ್ಮ ಕೈವಲ್ಯ ಪದ್ಧತಿ ಗ್ರಂಥಗಳಲ್ಲಿ ಉಲ್ಲೇಖೀಸಿದ್ದಾರೆ. ಶರಣರು. ಸಂತರು, ದಾಸರು ನುಡಿದಂತೆ ನಡೆ ಎಂಬ ಮಾತಿನಂತೆ ನಡೆದವರು ನುಡಿದಂತೆ ನಡೆ ಎಂದು ಹೇಳುವುದು ಸುಲಭ. ಆದರೆ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಜನರಿಗೆ ಕಷ್ಟವಾಗುತ್ತದೆ ಎಂದು ಹೇಳಿದರು.
ತ್ಯಾಗದ ಬದುಕು ಕಲಿತುಕೊಂಡಲ್ಲಿ ಅದರ ಆನಂದ ಅನುಭವಿಸಿಬೇಕು. ಬಿಡುವಿಲ್ಲದ ಜೀವನಕ್ಕೆ ಶಿವಾನುಭವ ಕಾರ್ಯಕ್ರಮಗಳು ಅಧ್ಯಾತ್ಮದ ಬೆಳಕನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಯ್ಯಣ್ಣ ಹಿರೇಮಠ ಮಾತನಾಡಿ, ಭೋಗ ಮತ್ತು ತ್ಯಾಗದೊಂದಿಗೆ ಜೀವನವನ್ನು ಹೇಗೆ ಭಗವಂತನ ಸಾಮಿಪ್ಯಕ್ಕೆ ಕೊಂಡೊಯ್ಯಬಹುದು ಎಂದು ಹಲವಾರು ಶರಣರ ನುಡಿಗಳ ಕುರಿತು ತಿಳಿಸಿದರು.
ಮಠದ ಬಸವಲಿಂಗ ಶಾಸ್ತ್ರಿಗಳು ಮಾತನಾಡಿ, ಆಧ್ಯಾತ್ಮದ ಅನುಭಾವ ಅನುಭವಿಸುವಂತಾಗಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ವೀರಣ್ಣ ಬೆಳ್ಳುಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಚ್.ಎಸ್. ದೊರೆಸ್ವಾಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಭೀಮಸೇನರಾವ ಕುಲಕರ್ಣಿ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಪ್ರಕಾಶ ಕುಂಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಾನಪ್ಪ ಅಪ್ಪಾಗೋಳ, ಪ್ರಭುಗೌಡ ಅಂಗಡಿ ಇದ್ದರು. ಬಸಮ್ಮ ಅಂಗಡಿ ಪ್ರಾರ್ಥಿಸಿದರು. ಬಸವರಾಜ ಅಂಗಡಿ ಸ್ವಾಗತಿಸಿ ನಿರೂಪಿಸಿದರು. ಕಸಾಪ ಅಧ್ಯಕ್ಷ ಬಸಣ್ಣ ಗೊಡ್ರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ