ಕೊಟ್ಟ ಮಾತಿನಂತೆ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವೆ
Team Udayavani, Feb 25, 2022, 11:21 AM IST
ಗುರುಮಠಕಲ್: ಮತಕ್ಷೇತ್ರದ ಅಭಿವೃದ್ಧಿ ಮಾಡುವ ಸಂಕಲ್ಪದ ಕನಸು ಹೊಂದಿದ್ದು, ಈ ಕ್ಷೇತ್ರದ ಋಣ ತೀರಿಸಲು ಹಗಲಿರಲು ಪ್ರಯತ್ನಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ಸೇವಕ ನಾನು ಎಂದು ಜೆಡಿಎಸ್ ಯುವ ನಾಯಕ ಶರಣುಗೌಡ ಕಂದಕೂರ ಹೇಳಿದರು.
ಬ್ಲಾಕ್ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಅಣ್ಣನ ನಡಿಗೆ ಗುರುಮಠಕಲ್ ಪಟ್ಟಣದ ಕಡೆ ಎಂಬ ಕಾರ್ಯಕ್ರಮದಡಿ ಅವರು ಪಟ್ಟಣದ 24 ವಾರ್ಡ್ಗಳಿಗೆ ತೆರಳಿ ಅಲ್ಲಿನ ಸಮಸ್ಯೆ ಆಲಿಸಿ 10 ಲಕ್ಷ ರೂ. ಪ್ರತಿ ವಾರ್ಡ್ಗೆ ನೀಡುವ ಆಶ್ವಾಸನೆ ನೀಡಿದರು.
ವಾರ್ಡ್ನಲ್ಲಿರುವ ಸಮಸ್ಯೆಗಳ ಪಟ್ಟಿ ಮಾಡಿಕೊಡಿ. ನಾನು 10 ಲಕ್ಷ ರೂ. ಅನುದಾನದಲ್ಲಿ ನಿಮ್ಮ ವಾರ್ಡ್ಗಳನ್ನು ಅಭಿವೃದ್ಧಿ ಪಡಿಸುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಜನರಿಗೆ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಪುರಸಭೆ ಸದಸ್ಯರಾದ ಬಾಲಪ್ಪ ದಾಸರಿ, ಆಶನ್ನ ಬುದ್ದ, ನವಾಜರೆಡ್ಡಿ, ಮಲ್ಲಿಕಾರ್ಜುನ ಅರುಣಿ, ಜ್ಞಾನೇಶ್ವರ ರೆಡ್ಡಿ, ಮಕುºಲಪ್ಯಾರೆ, ಸೀರಾಜ್ ಚಿಂತಕುಂಟಿ, ಬಸಣ್ಣ ದೇವರಹಳ್ಳಿ, ಮಹೇಶ ಗೌಡ, ರಮೇಶ ಹೂಗಾರ್, ಸಾಬಣ್ಣ ಕಂದೂರ, ಶಿವಕುಮಾರ ಕಡೇಚೂರ, ಸಾಬರೆಡ್ಡಿ, ಅವಂತಿಕ ಅವಂಟಿ, ಭೀಮಶಪ್ಪ ಗುಡಿಸೆ, ಅಜೇಯರಡ್ಡಿ ಯೆಲ್ಲೇರಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ