ಸ್ವತ್ಛ ಮನಸ್ಸುಗಳಿಂದ ಮಾತ್ರದೇಶ ಸದೃಢವಾಗಲು ಸಾಧ್ಯ
Team Udayavani, Mar 13, 2018, 5:58 PM IST
ಸುರಪುರ: ಭಗವಂತನು ಕೊಟ್ಟಿರುವ ದೇಹದಲ್ಲಿ ಇರುವ ಇಂದ್ರೀಯಗಳು ಕೇವಲ ಬೋಗಕಲ್ಲ. ದೇಶ ಸೇವೆಗೆ ಒಂದಿಷ್ಟು ಅಣಿಗೊಳಿಸಬೇಕು. ದೇಹ ಒಂದೆ ದಂಢಿಸಿದರೆ ಸಾಲದು ಇದಕ್ಕೆ ತನು ಮನ ಎರಡನ್ನು ಸ್ವತ್ಛವಾಗಿಟ್ಟುಕೊಂಡಾಗ ಮಾತ್ರ ಭಾರತ ಸದೃಢವಾಗಲು ಸಾಧ್ಯ ಎಂದು ಕಣ್ವಮಠದ ವಿದ್ಯಾವಾರಿತೀರ್ಥರು ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸೋಮವಾರ ದೇವತೀರ್ಥದ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ನನ್ನ ಭಾರತ ಸ್ವರ್ಣಿಮ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯುವ ಪೀಳಿಗೆ ಯಾವ ಹಾದಿಯಲ್ಲಿ ನಡೆಯುತ್ತಿದೆ, ಅದೇ ಹಾದಿಯಲ್ಲಿ ದೇಶ ಸಾಗುತ್ತಿದೆ. ಕಾರಣ ಈ ಅಭಿಯಾನದೊಂದಿಗೆ ಸದೊಪಯೋಗ ಪಡಿಸಿಕೊಂಡ ಸ್ವಧರ್ಮ ನಿಷ್ಠ ಪರಧರ್ಮಸಹಿಷ್ಣುತೆಯೊಂದಿಗೆ ದೇಶಕಟ್ಟುವಲ್ಲಿ ಕೈ ಜೋಡಿಸಿ ಎಂದು ಯುವಕರಿಗೆ ಕರೆ ನೀಡಿದರು.
ನಂತರ ಗುಜುರಾತನಿಂದ ಆಗಮಿಸಿ ಅಭಿಯಾನದ ರುವಾರಿ ಬ್ರಹ್ಮಕುಮಾರಿ ರಾಣಿ ಮಾತನಾಡಿ, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕತೆಯನ್ನು ಬೆನ್ನು ಹತ್ತಿ ಯುವಕರು ಪಾಶ್ಚಾತ್ಯ ಸಂಸ್ಕೃತಿ ಮೊರೆ ಹೊಗುತ್ತಿದ್ದಾರೆ. ಇದರಿಂದ ಯುವಕರಲ್ಲಿ ನಕಾರತ್ಮಕ ಚಿಂತನೆಗಳು ಹೆಚ್ಚುತ್ತಿವೆ. ಭಾರತೀಯ ಸಂಸಕೃತಿಯನ್ನು ಅಳವಡಿಸಿಕೊಂಡು ಭಾರತವನ್ನು ವಿಶ್ವಗುರುವಾಗಿಸುವಂತೆ ಕರೆ ನೀಡಿದರು.ಇದಕ್ಕೂ ಮೊದಲು ಅಭಿಯಾನದ ಬಸ್ಸು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಅಭಿಯಾನ ನಡೆಸಿದರು.
ಬ್ರಹ್ಮಕುಮಾರಿಯರಾದ ವಿಜಯ, ಜ್ಯೋತಿ ರಾಧಾಬೆನ್ ಮಾತನಾಡಿದರು. ಧೇವತೀರ್ಥದ ಬಿಕೆ ರಾಗಿಣಿ ನೇತೃತ್ವ ವಹಿಸಿದ್ದರು. ಸುಮನ್, ಕಮಲ್, ಅತುಲ, ರಾಯಚಂದ ಜೈನ್, ಸಿಸ್ಟರ್ ಜೆಸ್ಸಿ, ಸೂಗುರೇಶ ವಾರದ, ಉಸ್ತಾದ ವಜಾಹತ್ ಹುಸೇನ್, ಭಿಮಣ್ಣ ಅವಂಟಿ, ಗ್ಯಾನಚಂದ ಜಾಛೇಡ್, ಮಾಣಿಕಚಂದ, ಬಸಣ್ಣ ಶರಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ