ಸ್ಮಾರಕಗಳ ಸಂರಕ್ಷಣೆ ಅರಿವು ಮೂಡಿಸಲು ಪರಂಪರೆ ನಡಿಗೆ
Team Udayavani, Feb 23, 2020, 6:10 PM IST
ಕಲಬುರಗಿ: ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ, ಕನ್ನಡ ಕಾನ್ವೆಂಟ್ ಪ್ರೌಢಶಾಲೆ ಓಕಳಿ ವಿದ್ಯಾಮಂದಿರ, ವಿಕಾಸ ಆಂಗ್ಲ ಮಾಧ್ಯಮ ಶಾಲೆ ಓಕಳಿ ವಿದ್ಯಾಮಂದಿರ, ಕರ್ನಾಟಕ ಪಬ್ಲಿಕ್ ಶಾಲೆ (ಸರಕಾರಿ ಪದವಿ ಪೂರ್ವ ಕಾಲೇಜು) ಎಂ.ಬಿ. ನಗರ ಸಂಯುಕ್ತಾಶ್ರಯದಲ್ಲಿ ಗುಬ್ಬಿ ಬಡಾವಣೆ ಗುಂಬಜದಿಂದ ಮಹಾತ್ಮಾ ಬಸವೇಶ್ವರ ಬಡಾವಣೆ ಗುಂಬಜ ವರೆಗೆ ಪ್ರೌಢಶಾಲೆ ಮಕ್ಕಳಿಗೆ ಸ್ಮಾರಕಗಳ ಸಂರಕ್ಷಣೆ ಮಹತ್ವ ಕುರಿತು ಅರಿವು ಮೂಡಿಸುವ ಸಲುವಾಗಿ ಪರಂಪರೆ ನಡಿಗೆ ನಡೆಸಲಾಯಿತು.
ಸರಕಾರಿ ಮಹಿಳಾ ಪದವಿ ಕಾಲೇಜು ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥ ಶಂಭುಲಿಂಗವಾಣಿ, ಕಲಬುರಗಿಯಲ್ಲಿರುವ ಹಲವು ಗುಂಬಜಗಳ ಬಗ್ಗೆ ಉಪನ್ಯಾಸ ನೀಡಿದರು.
ಇಲಾಖೆ ಉಪ ನಿರ್ದೇಶಕರಾದ ಪ್ರಹ್ಲಾದ ಜಿ. ಕಲಬುರಗಿ ಪಾರಂಪರಿಕ ನಗರ ಕುರಿತು ಮಾತನಾಡಿದರು. ಪುರಾತತ್ವ ಸಹಾಯಕ ನಿರ್ದೇಶಕ ಶಿವಪ್ರಕಾಶ, ಗುಂಬಜಗಳ ರಚನೆ, ಮಹತ್ವ ವಿವರಿಸಿದರು.
ಕನ್ನಡ ಕಾನ್ವೆಂಟ್ ಪ್ರೌಢಶಾಲೆ ಓಕಳಿ ವಿದ್ಯಾಮಂದಿರ ದೈಹಿಕ ಶಿಕ್ಷಕ ಬಸವರಾಜ ಎನ್., ವಿಜ್ಞಾನ ಶಿಕ್ಷಕ ಶರಣ ಬಸಪ್ಪಾ ಸಿ., ಹಿಂದಿ ಶಿಕ್ಷಕಿ ಸುಧಾ ಎಚ್., ವಿಕಾಸ ಆಂಗ್ಲ ಮಾಧ್ಯಮ ಶಾಲೆ ಓಕಳಿ ವಿದ್ಯಾಮಂದಿರ ಶಿಕ್ಷಕ ಅನಿಲಕುಮಾರ, ಎಂ.ಬಿ. ನಗರದ ಕರ್ನಾಟಕ ಪಬ್ಲಿಕ್ ಶಾಲೆ (ಸರಕಾರಿ ಪದವಿ ಪೂರ್ವ ಕಾಲೇಜು)ಯ ಶಿಕ್ಷಕರಾದ ಅಮೋಗೆಪ್ಪಾ ಪೂಜಾರಿ , ಶಶಿಕಲಾ ದೊಡ್ಡಮನಿ, ವಿದ್ಯಾವತಿ ಶೆಟ್ಟಿ, ಎಸ್.ಎಸ್. ಶೆಟ್ಟಿ, ಮುಖ್ಯಶಿಕ್ಷಕಿ ಪ್ರತಿಮಾ ಜಿ. ದೇವೂರ, ಪ್ರಾಚಾರ್ಯ ಅರುಣಕುಮಾರ ಪಾಟೀಲ, ಚಿತ್ರಕಲಾವಿದ ನಾರಾಯಣ ಎಂ. ಜೋಶಿ, ಇಲಾಖೆ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?