ಕಾಲುವೆಗೆ ಶಾಸಕ ಮುದ್ನಾಳ ಭೇಟಿ-ಪರಿಶೀಲನೆ
5.8 ಕಾಮಗಾರಿಗೆ ರಿಪೇರಿ ಮಾಡಬೇಕಾಗಿದೆ. ಉಳಿದ ಕಾಮಗಾರಿಗೆ ತಗಲುವ ವೆಚ್ಚ 6 ಕೋಟಿ
Team Udayavani, Feb 17, 2021, 6:23 PM IST
ಯಾದಗಿರಿ: ಮತಕ್ಷೇತ್ರದ ಹಬ್ಬಳ್ಳಿ ಗ್ರಾಮದ ಡಿಸ್ಟ್ರಿಬ್ಯೂಟರ್ 12 ಎ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹೂಳು ತುಂಬಿ ಕೊನೆ ಅಂಚಿನ ರೈತರ ಜಮೀನುಗಳಿಗೆ ನೀರು ಬರದಿರುವುದು ವೀಕ್ಷಿಸಿದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಕೂಡಲೇ ದುರಸ್ತಿ ಮಾಡಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕೆಂದು ಕೆಬಿಜೆಎನೆಎಲ್ ಅ ಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ 16 ಕಿ.ಮೀ.ಗಳಲ್ಲಿ 11 ಕಿ.ಮೀ. ಕಾಮಗಾರಿ ಮುಗಿದಿದ್ದು, 5.8 ಕಾಮಗಾರಿಗೆ ರಿಪೇರಿ ಮಾಡಬೇಕಾಗಿದೆ. ಉಳಿದ ಕಾಮಗಾರಿಗೆ ತಗಲುವ ವೆಚ್ಚ 6 ಕೋಟಿ ಆಗುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೂಪರಡೆಂಟ್ ಆಫ್ ಇಂಜಿನಿಯರ್ ಎನ್.ಡಿ ಪವಾರ ಶಾಸಕರಿಗೆ ಮಾಹಿತಿ ನೀಡಿದರು.
ಈ ಕಾಲುವೆ ದುರಸ್ತಿಯಾದರೆ ಬಿದರಾಣಿ, ಹುರುಸುಗುಂಡಗಿ, ಹಬ್ಬಳ್ಳಿ, ಇಬ್ರಾಹಿಂಪೂರ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ಹಾಗಾಗಿ ಕೂಡಲೇ
ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಖಾನಾಪುರ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಹಾಗೂ ಪ್ರಮೋದ ಗೌಳಿ ಅವರಿಗೆ ಶಾಸಕರು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ರೈತರಾದ ಸಿದ್ದಲಿಂಗಪ್ಪಗೌಡ ಹಬ್ಬಳ್ಳಿ, ಸಿದ್ದಣ್ಣಗೌಡ ಹುರಸುಗುಂಡಗಿ, ಶರಣಗೌಡ ತಂಗಡಗಿ, ವಸಂತಕುಮಾರ ಇಬ್ರಾಹಿಂಪೂರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ