ಬೇಸಿಗೆ ಉಳ್ಳಾಗಡ್ಡಿ ಬೆಳೆಗಿಲ್ಲ ಬೆಲೆ
Team Udayavani, May 10, 2020, 3:47 PM IST
ಸಾಂದರ್ಭಿಕ ಚಿತ್ರ
ಮುದಗಲ್ಲ: ಕೋವಿಡ್ ವೈರಸ್ ಲಾಕ್ಡೌನ್ ಬಿಸಿ ಬೇಸಿಗೆಯಲ್ಲಿ ಬೆಳೆದ ಉಳ್ಳಾಗಡ್ಡಿ ಬೆಳೆಗೂ ತಟ್ಟಿದೆ. ಈಗ ಲಾಕ್ಡೌನ್ ಸಡಿಲಿಕೆಯಾದರೂ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿಗೆ ಬೆಲೆ ಸಿಗದೇ ರೈತರು ನಷ್ಟ ಅನುಭವಿಸುತ್ತಾರೆ. ಹಡಗಲಿ ತಾಂಡಾ, ಯರದೊಡ್ಡಿ, ಕನ್ನಾಳ, ದೆಸಾಯಿ ಭೋಗಾಪುರ ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಕನ್ನಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಳೆದ ಉಳ್ಳಗಡ್ಡಿಗೆ ಇಲ್ಲಿಯ ವರೆಗೆ ಕೊರೊನಾ ಕಂಟಕವಾದರೇ ಈಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಸಾವಿರಾರು ಕ್ವಿಂಟಾಲ್ ಉಳ್ಳಾಗಡ್ಡಿ ಬೆಳೆ ಹೊಲಗಳಲ್ಲಿಯೇ ಬಿದ್ದಿದೆ.
ಇತ್ತ ಮಳೆ, ಬಿಸಿಲಿನಿಂದ ರಕ್ಷಣೆ ಮಾಡಲಾಗದೆ ರೈತರು ಕಷ್ಟದಲ್ಲಿಯೇ ದಿನದೂಡುತ್ತಿದ್ದಾರೆ. ಬಳ್ಳಾರಿಯಲ್ಲಿ ದೊಡ್ಡ ಗಾತ್ರದ ಚಿಲ ಉಳ್ಳಾಗಡ್ಡಿಗೆ 150 ರೂ. ಸಣ್ಣ ಗಾತ್ರದ ಚೀಲಕ್ಕೆ 50ರೂ. ಗಳಂತೆ ಖರೀದಿಯಾಗಿವೆ ಎಂದು ಸೊಂಪುರ ತಾಂಡಾದ ರೈತ ಭೀಮಶಪ್ಪ ಅಳಲು ತೋಡಿಕೊಂಡಿದ್ದಾನೆ. ಹಡಗಲಿ ತಾಂಡಾದಲ್ಲಿ ಬಾಲಚಂದ್ರ ಥಾವರೆಪ್ಪ 300 ಚೀಲ, ಲೋಕಪ್ಪ 160 ಚೀಲ, ದೊಡ್ಡಪ್ಪ ಧಂಜಪ್ಪ 140 ಚೀಲ ಹಾಗೂ ರಾಮಪ್ಪನ ತಾಂಡಾದ ಕಾಮಣ್ಣ 80 ಚೀಲ, ಕನ್ನಾಳ ಗ್ರಾಮದ 5 ಜನ ರೈತರು ಸುಮಾರು 800 ಚೀಲ ಉಳ್ಳಾಗಡ್ಡಿ ಬೆಳದಿದ್ದಾರೆ. ಯರದೊಡ್ಡಿ , ಭೋಗಾಪೂರ ಗ್ರಾಮದಲ್ಲಿ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ರೈತರು ಭಯಪಡುವಂತಾಗಿದೆ. ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕುಸಿದಿದೆ. ರೈತರು ಪಾಸ್ ಪಡೆದು ಮಾರಾಟ ಮಾಡಬಹುದಾಗಿದೆ. ಉಳ್ಳಾಗಡ್ಡಿ ಸಂಗ್ರಹಕ್ಕೆ ಇಲಾಖೆಯಲ್ಲಿ ಗೋಡಾನ್ ವ್ಯವಸ್ಥೆ ಇಲ್ಲ ಎಂದು ಲಿಂಗಸುಗೂರ ಸಹಾಯಕ ನಿರ್ದೇಶಕರ ತೋಟಗಾರಿಕೆ ಇಲಾಖೆ ಯೋಗೇಶ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ