ಪಿಡಿಒ ಸುರೇಶ ವರ್ಗಾವಣೆ ತಡೆಗೆ ಮನವಿ
Team Udayavani, Oct 22, 2019, 3:51 PM IST
ಶಹಾಪುರ: ವಡಿಗೇರಾ ತಾಲೂಕಿನ ಗುಂಡಗುರ್ತಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಮೇಲೆ ಕೆಲವು ಗ್ರಾಪಂ ಸದಸ್ಯರು ಅಕ್ರಮ ಬಿಲ್ ಬರೆದು ಕೊಂಡುವಂತೆ ಒತ್ತಡ ಹೇರುತ್ತಿದ್ದು, ಅವರ ಕರ್ತವ್ಯಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಆರೋಪಿಸಿ ಹಲವು ಗ್ರಾಪಂ ಸದಸ್ಯರು ಸಿಇಒಗೆ ಮನವಿ ಪತ್ರ ಸಲ್ಲಿಸಿದರು.
ಪಿಡಿಒ ಸುರೇಶ ಪ್ರಾಮಾಣಿಕ ವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ನಮಗೆ ಬೇಕಿಲ್ಲ. ನಾವು ಹೇಳಿದಂತೆ ಬೋಗಸ್ ಬಿಲ್ ಬರೆದು ಕೊಡಬೇಕು. ಇಲ್ಲವಾದಲ್ಲಿ ನೀವು ಜಾಗ ಖಾಲಿ ಮಾಡಿ ಎಂದು ಕೆಲವರು ಅಭಿವೃದ್ಧಿ ಅಧಿಕಾರಿಗಳಿಗೆ ಹೆದರಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಬಸವರಾಜ ಚಂದ್ರಾಯಗೌಡ ಆರೋಪಿಸಿದ್ದು, ಅಲ್ಲದೆ ಪಿಡಿಒ ಸುರೇಶ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುವ ಮೂಲಕ ಆತನನ್ನು ಈ ಗ್ರಾಪಂ ಸ್ಥಾನದಿಂದ ಬೇರಡೆ ವರ್ಗಾವಣೆ ಮಾಡುವ ಹುನ್ನಾರ ನಡೆದಿದೆ. ಕೂಡಲೇ ನೀವು ಗ್ರಾಪಂ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಬೇಕು.
ಪ್ರಾಮಾಣಿಕ ಅಧಿಕಾರಿ ಸುರೇಶ ಅವರನ್ನು ಗುಂಡಗುರ್ತಿ ಗ್ರಾಪಂ ಅಭಿವೃದ್ಧಿಯಾಗಿಯೇ ಮುಂದು ವರೆಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹೊನ್ನಪ್ಪ ಎಸ್. ಪೀರಾ, ಬಸಪ್ಪ ಹುಲಕಲ್ ಸೇರಿದಂತೆ ನಿವೃತ್ತ ಯೋಧ ಮಲ್ಲಣ್ಣ ಶಿರಡ್ಡಿ, ಮುಖಂಡರಾದ ಚಂದ್ರಶೇಖರ ಯಾಳಗಿ, ರಂಗನಾಥ ಮಸರಕಲ್, ಶಿವು ಹಂಚನಾಳ, ಶರಣಪ್ಪ ಕ್ವಾಟಿ, ಮಲ್ಲಪ್ಪ ದೊಡ್ಮನಿ, ಶೇಖರ ಹೊಸ್ಮನಿ, ಮಲ್ಲಪ್ಪ ಗೋಸಾಲ, ಮಲ್ಲಪ್ಪ ಲಿಂಗದಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ