ಸಿಎಂಗಾಗಿ ಚಂದವಾಗಿ ಸಿದ್ಧವಾಗ್ತಿದೆ ಚಂಡರಕಿ!
ಸಿಎಂ ಆಗಮನದ ಹಿನ್ನೆಲೆಯಲ್ಲಿ ಭರಪೂರ ಕಾಮಗಾರಿ
Team Udayavani, Jun 15, 2019, 5:45 AM IST
ಯಾದಗಿರಿ: ‘ಚಂಡರಕಿ!’ಸದ್ಯ ಗಲ್ಲಿಯಿಂದ ಹಿಡಿದು ಶಕ್ತಿಸೌಧದವರೆಗೆ ನಾಲಿಗೆ ತುದಿಯ ಮೇಲೆ ನಲಿದಾಡುತ್ತಿರುವ ಗ್ರಾಮದ ಹೆಸರು. ಹತ್ತಾರು ವರ್ಷಗಳಿಂದ ಮೂಲಸೌಲಭ್ಯ ಇಲ್ಲದೇ ಪರದಾಡಿದರೂ ಇಲ್ಲಿನ ಜನರ ಗೋಳು ಕೇಳುವವರಿರಲಿಲ್ಲ. ಈಗ ನಾಡಿನ ದೊರೆ ಗ್ರಾಮ ವಾಸ್ತವ್ಯಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆಯೇ, ಈ ಹಳ್ಳಿಯತ್ತ ತಲೆ ಹಾಕಿಯೂ ಮಲಗದ ಅಧಿಕಾರಿಗಳು ದೌಡಾಯಿಸಿ ಬರುತ್ತಿದ್ದಾರೆ. ಗ್ರಾಮಸ್ಥರು ಕಣ್ಕಣ್ ಬಿಟ್ಟು ನೋಡುತ್ತಿದ್ದಾರೆ.
ಗುರುಮಠಕಲ್ ತಾಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿದೆ ಈ ಗ್ರಾಮ. ಜನಸಂಖ್ಯೆ ಸುಮಾರು 8,000. ಗ್ರಾಪಂ. ಕಾರ್ಯಾಲಯವುಂಟು, ಜತೆಯಲ್ಲೇ ಗ್ರಾಮದ ತುಂಬಾ ಅವ್ಯವಸ್ಥೆಯೂ ಉಂಟು. ರಸ್ತೆಗಳಲ್ಲೇ ಚರಂಡಿ ನೀರು ಹರಿಯುವುದು ಇಲ್ಲಿ ಸರ್ವೇಸಾಮಾನ್ಯ. ತಾತ್ಕಾಲಿಕವಾಗಿ ನೀರಿನ ಪೈಪ್ಲೈನ್ ಮಾಡಿದ್ದರೂ, ಪೈಪ್ಲೈನ್ ಸೋರಿಕೆಯಾದರೆ ಚರಂಡಿ ನೀರು ಜನರ ಹೊಟ್ಟೆ ಸೇರೋದು ಪಕ್ಕಾ. ಗ್ರಾಮ 24 ಗಂಟೆ ವಿದ್ಯುತ್ ನೀಡುವ ಯೋಜನೆಗೆ ಆಯ್ಕೆಯಾಗಿದೆ. ಆದರೆ, ಕರೆಂಟ್ ಯಾವಾಗ ಬರುತ್ತೆ, ಹೋಗುತ್ತೆ ಎಂಬುದು ಗೊತ್ತಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆಯುಂಟು, ಸ್ಮಶಾನಕ್ಕಾಗಿ ಗ್ರಾಮದ ಆಚೆ ಮತ್ತು ಈಚೆ ಅರ್ಧ ಎಕರೆ ಭೂಮಿ ಮೀಸಲಾಗಿಟ್ಟಿದ್ದರೂ, ಹೂತ ಜಾಗದಲ್ಲೇ ಮತ್ತೂಮ್ಮೆ ಹೆಣ ಹೂಳುವ ಪರಿಸ್ಥಿತಿಯೂ ಉದ್ಭವವಾಗುತ್ತಿರುತ್ತದೆ.
ಭರದ ಕಾಮಗಾರಿ: ಸಿಎಂಗಾಗಿ ಮೂಲ ಸೌಕರ್ಯಗಳ ಕಾಮಗಾರಿ ಶುರುವಾಗಿದೆ. ಕುಡಿವ ನೀರಿಗಾಗಿ ಭೀಮಾ ನದಿಯಿಂದ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಪ್ರತಿಭಟನೆಗೆ ರೈತರ ನಿರ್ಧಾರ
ಗ್ರಾಮದಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಜಮೀನು ನೀಡಿರುವ ರೈತರಲ್ಲಿ 41 ರೈತರಿಗೆ ಹಣ ಪಾವತಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ.ಇದರಿಂದ ಕಂಗೆಟ್ಟಿರುವ ರೈತರು ಹಲವು ಬಾರಿ ಮುಖಂಡರ ಮೂಲಕ ಸಂಬಂಧಿಸಿದವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ರೈತರು ಗ್ರಾಮಕ್ಕೆ ಆಗಮಿಸುತ್ತಿರುವ ಸಿಎಂ ಎದುರು ಪ್ರತಿಭಟನೆ ನಡೆಸುವ ನಿರ್ಧಾರ ಮಾಡಿದ್ದಾರೆ.
ಬೇಡಿಕೆಗಳೇನು?
-ಗ್ರಾಮದಲ್ಲಿ ಅಗತ್ಯವಿರುವೆಡೆ ರಸ್ತೆ ಮಾಡಿ
– ಬ್ಯಾಂಕ್ ಆರಂಭಿಸಿ
– ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿ
– ಸಮುದಾಯ ಭವನ ನಿರ್ಮಿಸಿ.
– ರೈತ ಸಂಪರ್ಕ ಉಪ ಕೇಂದ್ರ ಆರಂಭಿಸಿ.
– ಅಗತ್ಯವಿರುವೆಡೆ ಚರಂಡಿ ನಿರ್ಮಿಸಿ.
– ಕೋಟೆ ಪಕ್ಕದ ಹಳ್ಳಕ್ಕೆ ಸೇತುವೆ ನಿರ್ಮಿಸಿ.
– ಗ್ರಾಮದ ಕೆರೆಯಲ್ಲಿನ ಹೂಳು ತೆಗೆಸಿ
– ಅತಿ ಕ್ರಮಣ ತಪ್ಪಿಸಲು ಸ್ಮಶಾನಕ್ಕೆ ಬೇಲಿ ಹಾಕಿ
ಗ್ರಾಪಂ ಇದ್ದರೂ ಸಮರ್ಪಕ ಕಾರ್ಯವಾಗಿಲ್ಲ. ಈಗ ಮುಖ್ಯಮಂತ್ರಿಗಳೇಗ್ರಾಮಕ್ಕೆ ಆಗಮಿಸುತ್ತಿದ್ದು ಇನ್ನುಮೇಲಾದರೂ ಗ್ರಾಮದ ಅಭಿವೃದ್ಧಿಯಾಗಲಿ.
– ಭೀಮಣ್ಣ ಅಗಸರ, ಗ್ರಾಮದ ಮುಖಂಡ
–ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ