ಯಡ್ಡಳ್ಳಿಯಲ್ಲಿ ಪುನರುತ್ಥಾನ ಉತ್ಸವ
Team Udayavani, Apr 23, 2019, 5:22 PM IST
ಯಾದಗಿರಿ: ತಾಲೂಕಿನ ಯಡ್ಡಳ್ಳಿಯಲ್ಲಿ ರವಿವಾರ ಕ್ರೈಸ್ತ ಸಮುದಾಯದ ಜನರು ಯೇಸು ಕ್ರಿಸ್ತನ ಪುನರುಸ್ಥಾನ ಉತ್ಸವವನ್ನು ಶ್ರದ್ಧೆ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಿದರು.
ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಕಲ್ವಾರಿ ಬೆಟ್ಟದಲ್ಲಿ ಯೇಸು ಶಿಲುಬೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಈಸ್ಟರ್ ಸಂಡೆ ಪ್ರಯುಕ್ತ ಶ್ರಂಗರಿಸಿದ
ಎತ್ತಿನ ಬಂಡಿ ಮೇಲೆ ಯೇಸುಕ್ರಿಸ್ತನ ಭಾವಚಿತ್ರವಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮೇಥೋಡಿಸ್ಟ್ ಚರ್ಚ್ಗೆ ತಲುಪಿತು. ಬಳಿಕ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಯೇಸು ಕ್ರಿಸ್ತನು ಲೋಕದ ಜನರ ಪಾಪಗಳ ನಿವಾರಣೆಗಾಗಿ ಶಿಲುಬೆ ಮೇಲೆ ಘೋರ ಮರಣವನ್ನಪ್ಪಿ ಮೂರನೇ ದಿನದಲ್ಲಿ ಎದ್ದು ಬಂದ ಈ ದಿನವನ್ನು ಕ್ರೈಸ್ತರು ಪುನರುತ್ಥಾನ ದಿನ ಎಂದು ಆಚರಣೆ ಮಾಡುವುದು ಸಂಪ್ರದಾಯ. ಮೆರವಣಿಗೆ ಉದಕ್ಕೂ ಗ್ರಾಮದ ಮಕ್ಕಳು, ಯುವಕರ ಲೇಜಿಮ್, ಕೋಲಾಟ ಹಾಗೂ ಭಜನೆ ಸಾರ್ವಜನಿಕರ ಗಮನ ಸೆಳೆಯಿತು.
ಪಾಸ್ಟರ್ ರೆ| ಜೈವಂತ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜ್ಞಾನಮಿತ್ರ ಆಶನಾಳ, ಶಿರೋಮಣಿ ಕಿಲ್ಲನಕೇರಿ, ಶ್ಯಾಮಸುಂದರ್ ಮಾಸ್ಟರ್ ದಂಡಿನ, ಜ್ಞಾನಮಿತ್ರ ನರಸಣೋರ, ವಿಕ್ಟರ್ ರಾಜು, ಜೈವಂತ ದಂಡಿನ, ರಾಜಪ್ಪ ಆರಬೋಳ, ರವಿರಂಗಣೋರ, ಚಾರ್ಲಿ ಆಶನಾಳ, ಶ್ಯಾಮಸುಂದರ್ ದಂಡಿನ, ಆನಂದಪ್ಪ ಮಿಲಿó ರಗಣೋರ, ಪ್ರಭು ದಂಡಿನ, ರವಿ ನರಸಣ್ಣ, ಯಜ್ಕೇಲ್ ಕಿಲ್ಲನಕೆರಿ, ಸಾಲುಮನ ಯಡ್ಡಳ್ಳಿ ಗ್ರಾಪಂ ಸದಸ್ಯರಾದ ಮುನಿಂದ್ರ ದಂಡಿನ, ಕಮಲ್ಲಮ್ಮ ಯಂಕನೋರ ಸೇರದಂತೆ ನೂರಾರು ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ