ಸ್ಕಾಡಾ ಕಾಮಗಾರಿ ಪರಿಶೀಲನೆ
Team Udayavani, Aug 9, 2017, 5:53 PM IST
ನಾರಾಯಣಪುರ: ಕೇಂದ್ರಿಯ ಜಲ ಆಯೋಗದಿಂದ ನಿಯೋಜಿತ ನಿರ್ದೇಶಕರ ತಂಡದ ಸದಸ್ಯರು ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ಪ್ರಗತಿಯಲ್ಲಿರುವ ಸ್ಕಾಡಾ ಕಾಮಗಾರಿ ಪರಿಶೀಲಿಸಿದರು. ಸ್ಕಾಡಾದ ಮಾಸ್ಟರ್ ಕಂಟ್ರೋಲ್ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಸದಸ್ಯರು ಕಾಮಗಾರಿ ಕುರಿತು ಸಂಬಂಧಿಸಿದ ಗುತ್ತಿಗೆ ಕಂಪನಿ ಎಂಡಿ ಹಾಗೂ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ದೇಶದಲ್ಲೆ ಮೊದಲು ಪ್ರಾಯೋಗಿಕವಾಗಿ ಕೃಷ್ಣಾ ಅಚ್ಚು ಕಟ್ಟು ಭಾಗದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಅಡಿಯಲ್ಲಿ ಬರುವ ಹುಣಸಗಿ ಶಾಖಾ ಕಾಲುವೆ ಅದರ ಉಪ ಕಾಲುವೆಗಳಿಗೆ ಅಳವಡಿಸಲಾದ ಅಟೋಮೇಶನ್ ಗೇಟ್ಗಳ ಕಾರ್ಯನಿರ್ವಹಣೆ ಕುರಿತು ಕೇಂದ್ರಿಯ ಜಲ ಆಯೋಗದ ನಿರ್ದೇಶಕ ಎನ್.ವಿ. ಸತೀಶ ಹಾಗೂ ಸಹಾಯಕ ನಿರ್ದೇಶಕಿ
ಉಮಾ ಡಿ. ಒಳಗೊಂಡ ತಂಡವು ಮಾಹಿತಿ ಪಡೆದು ಕೆಲ ಸಲಹೆ ಸೂಚನೆ ನೀಡಿತು. ಅಚ್ಚುಕಟ್ಟು ಭಾಗದ ರೈತರು ಇಂತಹ ವಿಶಿಷ್ಠ
ಯೋಜನೆ ಲಾಭ ಪಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಲಾಶಯದ ನೀರಿನ ಮಟ್ಟ, ಕಾಲುವೆಯಲ್ಲಿ ಹರಿಯುತ್ತಿರುವ
ನೀರಿನ ಪ್ರಮಾಣ, ಎಪಿಎಂಸಿ ಧಾರಣಿ, ಹವಾಮಾನ, ಜಮೀನಿಗೆ ಬೇಕಾದ ನೀರಿನ ಬೇಡಿಕೆ ಸೇರಿದಂತೆ ಇತರೆ ಅಗತ್ಯ ಮಾಹಿತಿ
ಒದಗಿಸುವ ಕಿಯೋಸ್ಕ್ ಯಂತ್ರದ ಕಾರ್ಯವೈಖರಿ ಬಗ್ಗೆ ಅ ಧಿಕಾರಿಗಳಿಂದ ಮಾಹಿತಿ ಪಡೆದ ರೈತರು, ಇದರ ಬಳಕೆ ಕುರಿತು ಜಾಗೃತಿ ಮೂಡಿಸಿ ಅಗತ್ಯ ಜ್ಞಾನ ಒದಗಿಸುವಂತೆ ಕೋರಿದರು. ನಿರ್ದೇಶಕರ ತಂಡ ಬುಧವಾರ ಜೇವರ್ಗಿ ಶಾಖಾ ಕಾಲುವೆ ಕಾಮಗಾರಿ ವೀಕ್ಷಣೆ
ಮಾಡಲಿದೆ ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದು ಬಂದಿದೆ. ಕೆಬಿಜೆಎನ್ಎಲ್ ವಲಯದ ಮುಖ್ಯ ಇಂಜಿನಿಯರ್ ಎಚ್.ಕೆ. ಕೃಷ್ಣೇಗೌಡ, ಅಧೀಕ್ಷಕ ಅಭಿಯಂತರ ವೀರಣ್ಣ ನಗರೂರು, ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ತಂಬಿದೊರೈ, ಗೇಟ್ಸ್ ಉಪ ವಿಭಾಗದ ಎಇಇ ಆರ್.ಎಲ್. ಹಳ್ಳೂರ, ಗುತ್ತಿಗೆ ವಹಿಸಿಕೊಂಡಿರುವ ಮೆಕಾಟ್ರಾನಿಕ್ಸ್ ಎಂಡಿ ಅಶೋಕ ಕರ್ವಾ, ಎಇಗಳಾದ ರಾಘವೇಂದ್ರ, ಜೀವನ, ಕೆಬಿಜೆಎನ್ಎಲ್ ಅಧಿ ಕಾರಿಗಳು, ಮೆಕಾಟ್ರಾನಿಕ್ಸ್ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ
CHC; ದಿಢೀರ್ ಭೇಟಿ ನೀಡಿ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರ
FSL ವರದಿ ತಡವಾದರೂ, ಕಾನೂನು ಕ್ರಮ ಗ್ಯಾರಂಟಿ: ಸಚಿವ ರಾಮಲಿಂಗಾರೆಡ್ಡಿ
Yadagiri; ರಾಜ್ಯ ಸರ್ಕಾರದ ಜಾತಿಗಣತಿ ಅವೈಜ್ಞಾನಿಕ: ಜಯ ಮೃತ್ಯುಂಜಯ ಸ್ವಾಮೀಜಿ
Yadagiri; ರಾಜಾ ವೆಂಕಟ್ಟಪ್ಪ ನಾಯಕರಿಗೆ ಸಕಲ ಸರ್ಕಾರಿ ಗೌರವ; ಸಿಎಂ ಸಿದ್ದರಾಮಯ್ಯ ಭಾಗಿ
MUST WATCH
ಹೊಸ ಸೇರ್ಪಡೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ