ನೆರಡಗಂ ಮಠಕ್ಕೆ ತೆಲಂಗಾಣ ಕೃಷಿ ಸಚಿವ ಭೇಟಿ
Team Udayavani, Dec 15, 2021, 1:04 PM IST
ಸೈದಾಪುರ: ಕರ್ನಾಟಕ-ತೆಲಂಗಾಣದ ಗಡಿಯಂಚಿನ ಭಕ್ತರ ಆರಾಧ್ಯ ಗುರು ಸಿದ್ಧಲಿಂಗೇಶ್ವರ ಶ್ರೀಗಳ ದರ್ಶನ ಮನಸ್ಸಿಗೆ ಖುಷಿ ತಂದಿದೆ ಎಂದು ತೆಲಂಗಾಣ ರಾಜ್ಯದ ಕೃಷಿ ಸಚಿವ ಸಿಂಗರೆಡ್ಡಿ ನಿರಂಜನರೆಡ್ಡಿ ಹೇಳಿದರು.
ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠಕ್ಕೆ ಭೇಟಿ ನೀಡಿದ ಸಚಿವರು ಸಿದ್ಧಲಿಂಗೇಶ್ವರ ಶ್ರೀಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಮಠಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೇ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಪ್ರಗತಿಗೆ ಶ್ರಮಿಸುತ್ತಿವೆ. ಸಮಾಜದ ಅಂಕುಡೊಂಕು ತಿದ್ದಿ ನವ ಸಮಾಜ ನಿರ್ಮಾಣ ಮಾಡುವಲ್ಲಿ ಪೂಜ್ಯರ ಕೊಡುಗೆ ಗಣನೀಯ ಎಂದರು.
ಇದೇ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಸಚಿವರಿಗೆ ಶಾಲು ಹೊದಿಸಿ ಆಶೀರ್ವದಿಸಿದರು. ಮಖ್ತಲ್ ಶಾಸಕ ಚಿಟ್ಟೆಂ ರಾಮ ಮೋಹನರೆಡ್ಡಿ, ನಾರಾಯಣಪೇಟ ಜಿಪಂ ಅಧ್ಯಕ್ಷೆ ವನಜಮ್ಮ, ಶ್ರೀನಿವಾಸ ಗುಪ್ತಾ, ವೆಂಕಟರೆಡ್ಡಿ, ಅಶೋಕಗೌಡ, ತಾಪಂ ಸದಸ್ಯ ಯಲ್ಲಾರೆಡ್ಡಿ, ಈಶ್ವರಗೌಡ, ಶಿವರಾಜ ಪಾಟೀಲ್, ಮಹಿಪಾಲರೆಡ್ಡಿ, ಮಧುಸೂದನರೆಡ್ಡಿ, ನಾಗಪ್ಪ ಮಲ್ಲೆಪಲ್ಲಿ, ಮಲ್ಲಯ್ಯಸ್ವಾಮಿ, ಶರಣಪ್ಪ ಮಾಣಿಕ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ